Belagavi Ministers hold Rally: ಗೆಲ್ಲುವ ಮೊದಲು ರ‍್ಯಾಲಿ, ಗೆದ್ದ ಮೇಲೆ ರ‍್ಯಾಲಿ, ಮಿನಿಸ್ಟ್ರಾಗುವ ಮೊದಲು ರ‍್ಯಾಲಿ, ಮಿನಿಸ್ಟ್ರಾದ ಮೇಲೂ ರ‍್ಯಾಲಿ!

ಅರುಣ್​ ಕುಮಾರ್​ ಬೆಳ್ಳಿ

Updated on: May 29, 2023 | 10:28 AM

ಈ ರ‍್ಯಾಲಿಯನ್ನು ‘ಪವರ್ ಶೋ’ ಎಂದು ಕರೆಯಲಾಗಿದೆ. ರ‍್ಯಾಲಿಯ ನಂತರ ಸಚಿವರು ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು.

ಬೆಳಗಾವಿ: ಚುನಾವಣೆ ನಡೆಯುವಾಗ ಪ್ರಚಾರಕ್ಕಾಗಿ ರ‍್ಯಾಲಿ (rally), ಫಲಿತಾಂಶ ಬಂದ ಬಳಿಕ ವಿಜಯೋತ್ಸವದ ರ‍್ಯಾಲಿ, ಸಂಪುಟ ರಚನೆಯಾಗುವ ಮೊದಲು ಶಕ್ತಿ ಪ್ರದರ್ಶನಕ್ಕಾಗಿ ರ‍್ಯಾಲಿ, ಮಿನಿಸ್ಟ್ರಾದ ಮೇಲೆ ಖುಷಿ ಜತಾಯಿಸಲು ಇನ್ನೊಂದು ರ‍್ಯಾಲಿ-ಕಾಂಗ್ರೆಸ್ ನಾಯಕರ ರ‍್ಯಾಲಿಗಳಿಗೆ ಎಣೆಯಿಲ್ಲ. ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸಚಿವರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದಾಗ ಸಚಿವದ್ವಯರ ಅಭಿಮಾನಿಗಳು ಬೈಕ್ ರ‍್ಯಾಲಿಯ ಮೂಲಕ ಸ್ವಾಗತಿಸಿದರು. ಈ ರ‍್ಯಾಲಿಯನ್ನು ‘ಪವರ್ ಶೋ’ ಎಂದು ಕರೆಯಲಾಗಿದೆ. ರ‍್ಯಾಲಿಯ ನಂತರ ಸಚಿವರು ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.