ಭೂಮಿಗೆ ಸೂರ್ಯನ‌ ಮೊದಲ ಛಾಯಾಚಿತ್ರ ರವಾನೆ- ಮಣಿಪಾಲದ ಮಾಹೆ ಸಂಸ್ಥೆಯ ಪಾತ್ರ ದೊಡ್ಡದು, ಇಲ್ಲಿದೆ ವಿಡಿಯೋ

Edited By: ಸಾಧು ಶ್ರೀನಾಥ್​

Updated on: Dec 15, 2023 | 2:26 PM

ಆದಿತ್ಯ ಎಲ್ 1 ಕಳುಹಿಸಿದ ಮೊದಲ ಸೂರ್ಯನ ಛಾಯಾಚಿತ್ರ ಬೆನ್ನಲ್ಲೇ ಮಾಹೆ ಸಂಸ್ಥೆಯಲ್ಲಿ ಸಂಭ್ರಮ ಮನೆ ಮಾಡಿದೆ. ಉಪಗ್ರಹದ ಸೂಟ್ ಆಪರೇಷನ್ ವಿಜ್ಞಾನಿ, ಮಾಹೆ ಸಂಸ್ಥೆಯ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಶ್ರೀಜಿತ್ ಪದ್ಹಿನ್ನತೇರಿ ತಮ್ಮ ಕಾರ್ಯ ಸಾಧನೆ ವಿವರಿಸಿದ್ದಾರೆ.

ಬಹುನಿರೀಕ್ಷಿತ ಆದಿತ್ಯ ಎಲ್ 1 ಉಪಗ್ರಹ ಇತ್ತೀಚೆಗೆ ಸೂರ್ಯನ‌ (Sun) ಮೊದಲ ಛಾಯಾಚಿತ್ರ (Photograph) ಭೂಮಿಗೆ ರವಾನಿಸಿದೆ. ಸೂರ್ಯನ‌ ಅಧ್ಯಯನಕ್ಕಾಗಿ ಕಳುಹಿಸಿದ ಭಾರತದ ಮೊದಲ ಅಂತರಿಕ್ಷ ವೀಕ್ಷಣಾಲಯ ಯಶಸ್ಸನ್ನ ಗಳಿಸಿದೆ.‌ ಈ‌ ಯಶಸ್ಸಿನ ಹಿಂದೆ ಉಡುಪಿಯ ಮಣಿಪಾಲದ (Manipal) ಮಾಹೆ (Mahe) ಸಂಸ್ಥೆಯ ಪಾತ್ರವೂ ದೊಡ್ಡದು. ಹೀಗಾಗಿ ಮಾಹೆ ಸಂಸ್ಥೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಹೌದು, ಇಸ್ರೋ ಕಳುಹಿಸಿದ ಆದಿತ್ಯ ಎಲ್ 1 ಉಪಗ್ರಹದಲ್ಲಿರುವ ಸೋಲಾರ್ ಅಲ್ಟ್ರಾವಾಯಿಲೆಟ್ ಇಮೆಜಿಂಗ್ ಟೆಲಿಸ್ಕೋಪ್ ಮೂಲಕ ಸೂರ್ಯನ ಮೊದಲ ಛಾಯಾಚಿತ್ರವನ್ನ ಕಳುಹಿಸಲು ಉಪಗ್ರಹ ದಲ್ಲಿರುವ ಹಲವು ಟೆಲಿಸ್ಕೋಪ್ ಗಳಲ್ಲಿ (ನೇರ ಸರಳಾತೀತ ಚಿತ್ರಣ ದೂರದರ್ಶಕ) ಸೂಟ್ ನದ್ದು ಮುಖ್ಯ ಪಾತ್ರ.‌ ಈ ಸೂಟ್ ಅಭಿವೃದ್ಧಿ ಪಡಿಸುವಲ್ಲಿ ಹಲವು ಸಂಸ್ಥೆಗಳು ಕೈಜೋಡಿಸಿವೆ. ಮುಖ್ಯವಾಗಿ ಇಸ್ರೋ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮಾಹೆ ಸಹ ಕೈಜೋಡಿಸಿದೆ.

ಹೀಗಾಗಿ ಆದಿತ್ಯ ಎಲ್ 1 ಕಳುಹಿಸಿದ ಮೊದಲ ಸೂರ್ಯನ ಛಾಯಾಚಿತ್ರ ಬೆನ್ನಲ್ಲೇ ಮಾಹೆ ಸಂಸ್ಥೆಯಲ್ಲಿ ಸಂಭ್ರಮ ಮನೆ ಮಾಡಿದೆ. ಉಪಗ್ರಹದ ಸೂಟ್ ಆಪರೇಷನ್ ಮ್ಯಾನೇಜರ್ ಹಾಗೂ ಯೋಜನಾ ವಿಜ್ಞಾನಿಯೂ ಆಗಿರುವ ಮಾಹೆ ಸಂಸ್ಥೆಯ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಶ್ರೀಜಿತ್ ಪದ್ಹಿನ್ನತೇರಿ ಸಂತಸ ವ್ಯಕ್ತಪಡಿಸಿದ್ದಾರೆ. ಜಾಗತಿಕವಾಗಿ ಮೊದಲ ಬಾರಿ ಈ ಮೂಲಕ ಸೂರ್ಯನನ್ನ ಪೂರ್ತಿಯಾಗಿ ವೀಕ್ಷಿಸಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

 

Follow Us
Prajwal Amin

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More