ಯಾದಗಿರಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಭಾರೀ ಮಳೆ, ಶಹಾಪುರ ಪಟ್ಟಣದ ರಸ್ತೆಗಳು ಜಲಾವೃತ
ಶಹಾಪುರ ಪಟ್ಟಣದ ಮೂಲಕ ರಾಜ್ಯ ಹೆದ್ದಾರಿಯೂ ಹಾದುಹೋಗುತ್ತದೆ. ಕಲಬುರಗಿ, ಬೀದರ್, ಭಾಲ್ಕಿ, ಬಸವಕಲ್ಯಾಣ, ಹುಮ್ನಾಬಾದ್ ಮೊದಲಾದ ಕೇಂದ್ರಗಳಿಂದ ಯಾದಗಿರಿ, ದಾವಣಗೆರೆ, ಬೆಂಗಳೂರು ಮುಂತಾದ ಕಡೆ ಹೋಗುವ ಬಸ್ಸುಗಳು ಶಹಾಪುರ ಮೂಲಕವಾಗಿಯೇ ಹೋಗುತ್ತವೆ. ಯಾದಗಿರಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು.
ಯಾದಗಿರಿ, ಮೇ 29: ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಶಹಾಪುರ (Shahapur ) ಒಂದು ಮತ್ತು ಇದು ವ್ಯಾಪಾರ ಕೇಂದ್ರವೂ ಹೌದು. ನಿನ್ನೆ ಯಾದಗಿರಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಶಹಾಪುರ ಪಟ್ಟಣ ಜಲಾವೃತ. ವಿಡಿಯೋದಲ್ಲಿ ಕಾಣುತ್ತಿರುವ ಮುಖ್ಯರಸ್ತೆಯಲ್ಲಿ ಮೊಣಕಾಲು ಮಟ್ಟ ನೀರು ಹರಿಯುತ್ತಿದೆ ಮತ್ತು ಆಗಸದಿಂದ ಜಿಟಿಜಿಟಿ ಮಳೆ ಬೇರೆ ಸುರಿಯುತ್ತಿದೆ. ಆದರೂ ಜನರ ಮತ್ತು ದ್ವಿಚಕ್ರವಾಹನಗಳ ಓಡಾಟ ನಿಂತಿಲ್ಲ, ಮಳೆಯಲ್ಲೂ ಓಡಾಡುತ್ತಿದ್ದಾರೆ. ಇದೊಂದು ವ್ಯಾಪಾರ ಕೇಂದ್ರವಾಗಿರುವುದರಿಂದ ಸುತ್ತಮುತ್ತಲಿನ ಹಳ್ಳಿಗಳ ಜನಕ್ಕೆ ಇಲ್ಲಿಗೆ ಬರೋದು ಅನಿವಾರ್ಯ.
ಇದನ್ನೂ ಓದಿ: ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: May 29, 2025 10:47 AM