ಶಿಗ್ಗಾವಿ ಪವಿತ್ರನಾಡು, ಇದನ್ನು ಪ್ರತಿನಿಧಿಸುವವರು ನಿಜಕ್ಕೂ ಭಾಗ್ಯವಂತರು: ಲಕ್ಷ್ಮಿ ಹೆಬ್ಬಾಳ್ಕರ್

ಅರುಣ್​ ಕುಮಾರ್​ ಬೆಳ್ಳಿ

Updated on: Nov 06, 2024 | 8:03 PM

ನಮ್ಮಣ್ಣ ಪಠಾಣ್ ಪಠಾಣನೂ ಹೌದು ಮತ್ತು ಪೈಲ್ವಾನನೂ ಹೌದು ಎಂದು ಮಾತು ಆರಂಭಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಶಿಗ್ಗಾವಿ ಕ್ಷೇತ್ರವನ್ನು ಪ್ರತಿನಿಧಿಸುವವರು ನಿಜಕ್ಕೂ ಭಾಗ್ಯವಂತರು ಯಾಕೆಂದರೆ ಇದು ಸಂತ ಶಿಶುನಾಳ ಷರೀಫ ಮತ್ತು ಭಕ್ತ ಕನಕದಾಸ ಜನಿಸಿದ ನಾಡು, ದಾಸರು ಕುಲ ಕುಲವೆಂದು ಬಡಿದಾಡದಿರಿ ಅಂತ ಹಾಡಿದರೆ ಷರೀಫರು ಒಂಬತ್ತು ತೂತಿನ ಗಡಿಗೆ ಅನ್ನೋ ನೀತಿಪದವನ್ನು ನಮಗೆ ಬಿಟ್ಟುಹೋದರು ಅಂತ ಹೇಳಿದರು.

ಹಾವೇರಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಂದು ಶಿಗ್ಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಪಕ್ಷದ ಕೆಲ ಹಿರಿಯ ನಾಯಕರ ಜೊತೆ ಆಗಮಿಸಿ, ಕ್ಷೇತ್ರದ ಹೋತನಹಳ್ಳಿ ಮತ್ತು ಕುಂದೂರು ಜಿಲ್ಲಾ ಪಂಚಾಯಿತಿ ಪ್ರದೇಶದಲ್ಲಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಪರ ಪ್ರಚಾರ ಮಾಡುವ ಜವಾಬ್ದಾರಿಯನ್ನು ತನ್ನ ಮೇಲೆ ಹೊರೆಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು ಹಾಗೂ ಪಠಾಣ್ ಗೆಲುವಿಗೆ ಹಗಲು ರಾತ್ರಿ ಶ್ರಮಿಸುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   SDA ರುದ್ರಣ್ಣ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್​: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಕಾರಣ ಎಂದು ಮೆಸೇಜ್

Loading...
Unable to load recommendations.
Follow Us