Karnataka Assembly Session: ಎಸ್ ಎಂ ಕೃಷ್ಣ ಅವರನ್ನು ರಾಜ್ಯಸಭಾ ಸದಸ್ಯ ಮಾಡಿದ ಸಂದರ್ಭ ಸದನದಲ್ಲಿ ವಿವರಿಸಿದ ಶಿವಕುಮಾರ್

Updated on: Dec 12, 2024 | 2:04 PM

Karnataka Assembly Session: ಮತ್ತೊಂದು ಸ್ವಾರಸ್ಯಕರ ಸಂದರ್ಭವನ್ನು ವಿವರಿಸಿದ ಶಿವಕುಮಾರ್, 1999ರಲ್ಲಿ ಕೃಷ್ಣ ಅವರು ಮುಖ್ಯಮಂತ್ರಿಯಾದಾಗ ಅವರ ಸಂಭಾವ್ಯ ಮಂತ್ರಿಮಂಡಲದ ಸದಸ್ಯರ ಹೆಸರು ಮತ್ತು ಖಾತೆಯ ಪಟ್ಟಿಯನ್ನು ಇವರು ಮತ್ತು ಟಿಬಿ ಜಯಚಂದ್ರ ತಯಾರು ಮಾಡಿ ಅನುಮೋದನೆಗೆಂದು ಹೈಕಮಾಂಡ್​​ಗೆ ಕಳಿಸಿದ ಮೇಲೆ ಅಲ್ಲಿಂದ ವಾಪಸ್ಸದ ಲಿಸ್ಟ್ ನಲ್ಲಿ ಇವರಿಬ್ಬರ ಹೆಸರು ಇರಲಿಲ್ಲವಂತೆ!

ಬೆಳಗಾವಿ: ಸದನದಲ್ಲಿ ಇಂದು ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಮತ್ತು ಎಸ್ ಎಂ ಕೃಷ್ಣ ನಡುವಿನ ಬಾಂಧವ್ಯ ಮತ್ತು ಅವರನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿದ ಸಂದರ್ಭವನ್ನು ಮೆಲುಕು ಹಾಕಿದರು. ಒಮ್ಮೆ ಇವರು ರೆಬೆಲ್ ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದಾಗ ಅಗಿನ ಪ್ರಧಾನ ಮಂತ್ರಿಯಾಗಿದ್ದ ನರಸಿಂಹರಾವ್ ಅವರನ್ನು ಭೇಟಿಯಾಗುವ ಪ್ರಸಂಗ ಎದುರಾಗಿತ್ತು. ನರಸಿಂಹರಾಯರ ಜೊತೆ ಇಂಗ್ಲಿಷ್ ಮಾತಾಡುತ್ತಿದ್ದ ಶಿವಕುಮಾರ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಬೇಕೆಂದು ಹೇಳಿದಾಗ ಅದು ಸಾಧ್ಯವಿಲ್ಲ, ಕೃಷ್ಣ ಅವರನ್ನು ರಾಜ್ಯಸಭಾ ಸದಸ್ಯರರನ್ನಾಗಿ ಮಾಡೋದಾದರೆ ಮಾತ್ರ ವೋಟು ಮಾಡೋದಾಗಿ ಹೇಳಿ ಕೃಷ್ಣ ಅವರಿಗೆ ಮೇಲ್ಮನೆ ಸ್ಥಾನ ಗಿಟ್ಟಿಸಿದ್ದರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತಾವೊಬ್ಬ ಡಿಸಿಎಂ ಎನ್ನುವುದನ್ನೇ ಮರೆತು ಗುರುವಿನ ಋಣ ತೀರಿಸಿದ ಡಿಕೆ ಶಿವಕುಮಾರ್​

Published on: Dec 12, 2024 02:03 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More