Shivarajkumar: ‘ಆ ರೀತಿ ಹೇಳಿದ್ದು ಅವರ ದೊಡ್ಡತನ’: ರವಿಚಂದ್ರನ್​ ಬಗ್ಗೆ ಮಾತನಾಡಿದ ಶಿವರಾಜ್​ಕುಮಾರ್​

| Updated By: ಮದನ್​ ಕುಮಾರ್​

Updated on: Jul 19, 2023 | 6:15 PM

Kichcha Sudeep Controversy: ರವಿಚಂದ್ರನ್​ ಮತ್ತು ಶಿವರಾಜ್​ಕುಮಾರ್​ ಅವರ ನಡುವೆ ಬಹಳ ಕಾಲದಿಂದಲೂ ಬಾಂಧವ್ಯ ಇದೆ. ಸುದೀಪ್​-ಎಂಎನ್​ ಕುಮಾರ್​ ನಡುವಿನ ವಿವಾದ ಪರಿಹರಿಸಲು ಈ ಹಿರಿಯ ನಟರು ಮುಂದಾಗಿದ್ದಾರೆ.

ನಟ ಕಿಚ್ಚ ಸುದೀಪ್​ (Kichcha Sudeep) ಮತ್ತು ನಿರ್ಮಾಪಕ ಎಂಎನ್​ ಕುಮಾರ್​ ನಡುವಿನ ವಿವಾದವನ್ನು ಬಗೆಹರಿಸಲು ಕನ್ನಡ ಚಿತ್ರರಂಗದ ಹಿರಿಯ ನಟರ ಮಧ್ಯಪ್ರವೇಶ ಆಗಿದೆ. ಈ ವಿಚಾರದಲ್ಲಿ ಶಿವರಾಜ್​ಕುಮಾರ್​ ಅವರಿಗೆ ಮೊದಲು ಲೆಟರ್​ ನೀಡಿ ಎಂದು ರವಿಚಂದ್ರನ್​ (Ravichandran) ಹೇಳಿದ್ದರು. ಅವರ ಮಾತಿಗೆ ಇಂದು (ಜುಲೈ 19) ಶಿವರಾಜ್​ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ‘ರವಿ ಅವರು ಆ ರೀತಿ ಹೇಳಿದ್ದು ಅವರ ದೊಡ್ಡತನ. ಅವರು ನನಗಿಂತ ಸೀನಿಯರ್​. ಅವರ ತಂದೆ ದೊಡ್ಡ ಪ್ರೊಡ್ಯೂಸರ್​ ಆಗಿದ್ದರು. ಅವರಿಗೆ ಅಪ್ಪಾಜಿ ಸಾಹುಕಾರರು ಎನ್ನುತ್ತಿದ್ದರು. ಈಗ ನಾನು ರವಿ ಸರ್​ ಅವರ ಸಲಹೆ ಕೇಳುತ್ತೇನೆ’ ಎಂದು ಶಿವಣ್ಣ (Shivarajkumar) ಹೇಳಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on