ನಟ ಕಿಚ್ಚ ಸುದೀಪ್ (Kichcha Sudeep) ಮತ್ತು ನಿರ್ಮಾಪಕ ಎಂಎನ್ ಕುಮಾರ್ ನಡುವಿನ ವಿವಾದವನ್ನು ಬಗೆಹರಿಸಲು ಕನ್ನಡ ಚಿತ್ರರಂಗದ ಹಿರಿಯ ನಟರ ಮಧ್ಯಪ್ರವೇಶ ಆಗಿದೆ. ಈ ವಿಚಾರದಲ್ಲಿ ಶಿವರಾಜ್ಕುಮಾರ್ ಅವರಿಗೆ ಮೊದಲು ಲೆಟರ್ ನೀಡಿ ಎಂದು ರವಿಚಂದ್ರನ್ (Ravichandran) ಹೇಳಿದ್ದರು. ಅವರ ಮಾತಿಗೆ ಇಂದು (ಜುಲೈ 19) ಶಿವರಾಜ್ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ‘ರವಿ ಅವರು ಆ ರೀತಿ ಹೇಳಿದ್ದು ಅವರ ದೊಡ್ಡತನ. ಅವರು ನನಗಿಂತ ಸೀನಿಯರ್. ಅವರ ತಂದೆ ದೊಡ್ಡ ಪ್ರೊಡ್ಯೂಸರ್ ಆಗಿದ್ದರು. ಅವರಿಗೆ ಅಪ್ಪಾಜಿ ಸಾಹುಕಾರರು ಎನ್ನುತ್ತಿದ್ದರು. ಈಗ ನಾನು ರವಿ ಸರ್ ಅವರ ಸಲಹೆ ಕೇಳುತ್ತೇನೆ’ ಎಂದು ಶಿವಣ್ಣ (Shivarajkumar) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.