ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.
ಮೆಜೆಸ್ಟಿಕ್ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್
ದುನಿಯಾ ವಿಜಯ್ ಪುತ್ರಿ ಮೋನಿಷಾ ವಿಜಯ್, ಸಿಟಿ ಲೈಟ್ಸ್ ಚಿತ್ರೀಕರಣದ ವೇಳೆ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಅನಿರೀಕ್ಷಿತ ಕರಾಳ ಅನುಭವ ಎದುರಿಸಿದ್ದಾರೆ. ಲೈವ್ ಲೊಕೇಶನ್ಗಳಲ್ಲಿನ ಚಿತ್ರೀಕರಣ ಸವಾಲಿನದ್ದಾಗಿತ್ತು. ತಮ್ಮ ಪಾತ್ರ ರಾಜಿ ಹಾಗೂ ಮೆಜೆಸ್ಟಿಕ್ನ ವಾಸ್ತವತೆ ಬಗ್ಗೆ ಅವರು ಹಂಚಿಕೊಂಡಿದ್ದಾರೆ. ತಂದೆ ದುನಿಯಾ ವಿಜಯ್ ನಿರ್ದೇಶನ ಮತ್ತು ವಿನಯ್ ಜೊತೆಗಿನ ಕೆಲಸದ ಬಗ್ಗೆಯೂ ಮಾತನಾಡಿದ್ದಾರೆ.
- Malatesh Jaggin
- Updated on: Aug 7, 2026
- 9:28 am
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ಹಾಗೂ ನಟ ವಿನಯ್ ರಾಜ್ಕುಮಾರ್ ಅವರು ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ದುನಿಯಾ ವಿಜಯ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಲೋಕ ಅನಾವರಣ ಆಗಲಿದೆ. ಆ ಬಗ್ಗೆ ವಿನಯ್ ರಾಜ್ಕುಮಾರ್ ಮಾತನಾಡಿದ್ದಾರೆ.
- Malatesh Jaggin
- Updated on: Aug 6, 2026
- 8:30 pm
‘ನಮ್ಮ ಕೈಲಾದ ಸಹಾಯ ಮಾಡೋಣ ಅಂತ ದರ್ಶನ್ ಹೇಳಿದ್ರು’; ‘ಬಾಸ್’ ಬಗ್ಗೆ ತನುಷ್ ಶಿವಣ್ಣ ಮಾತು
ಕನ್ನಡದಲ್ಲಿ ‘ಬಾಸ್’ ಸಿನಿಮಾ ಆಗಸ್ಟ್ 7ರಂದು ರಿಲೀಸ್ ಆಗುತ್ತದಿದೆ. ಈ ಸಿನಿಮಾ ಬಗ್ಗೆ ಈಗ ಒಂದು ದೊಡ್ಡ ವಿಷಯ ರಿವೀಲ್ ಆಗಿದೆ. ಈ ಸಿನಿಮಾ ರಿಲೀಸ್ ಮಾಡಲು ದರ್ಶನ್ ಅವರೇ ಅನುಮತಿ ನೀಡಿದ್ದರು. ಈ ವಿಷಯವನ್ನು ತನುಷ್ ಶಿವಣ್ಣ ಅವರು ಹಂಚಿಕೊಂಡಿದ್ದಾರೆ. ಈ ವಿಷಯ ಅನೇಕರಿಗೆ ಅಚ್ಚರಿ ಮೂಡಿಸಿದೆ.
- Malatesh Jaggin
- Updated on: Aug 6, 2026
- 12:03 pm
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾದಲ್ಲಿ ಕನ್ನಡದ ನಟ ಧನುಷ್ ಮಂಜುನಾಥ್ ಅವರು ಅಭಿನಯಿಸಿದ್ದಾರೆ. ಇಂದು (ಜುಲೈ 23) ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗಿದೆ. ವಿಜಯ್ ಅಭಿಮಾನಿಯೂ ಆಗಿರುವ ಧನುಷ್ ಮಂಜುನಾಥ್ ಅವರು ತಮ್ಮ ನೆಚ್ಚಿನ ಹೀರೋ ಜೊತೆ ಅಭಿನಯಿಸಿದ ಅನುಭವವನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
- Malatesh Jaggin
- Updated on: Jul 23, 2026
- 5:55 pm
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ದಳಪತಿ ವಿಜಯ್ ನಟನೆಯ ಕೊನೇ ಸಿನಿಮಾ ‘ಜನ ನಾಯಗನ್’ ಇಂದು (ಜುಲೈ 23) ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಇರುವ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಲು ಚಿತ್ರಮಂದಿರಕ್ಕೆ ಬಂದಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ‘ಅಂಜನ್’ ಚಿತ್ರಮಂದಿರದಲ್ಲಿ ಸಂಭ್ರಮ ಜೋರಾಗಿದೆ. ವಿಜಯ್ ಅವರ ಕಟೌಟ್ಗಳು ರಾರಾಜಿಸುತ್ತಿವೆ.
- Malatesh Jaggin
- Updated on: Jul 23, 2026
- 4:39 pm
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಗಾಯಕಿ ವಾಣಿ ಹರಿಕೃಷ್ಣ
ಮೈಸೂರಿನಲ್ಲಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದ ಬಳಿಕ ವಾಣಿ ಹರಿಕೃಷ್ಣ ಭಾವುಕರಾದರು. ಹಳೆಯ ದಿನಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ಎಸ್. ಜಾನಕಿ ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. ಈ ವೇಳೆ ನಟಿ ತಾರಾ ಸಂತೈಸಿದರು.
- Malatesh Jaggin
- Updated on: Jul 12, 2026
- 1:56 pm
ತಮ್ಮ ಕುರಿತ ಅಪಪ್ರಚಾರದ ಬಗ್ಗೆ ನೊಂದಿದ್ದ ಜಾನಕಮ್ಮ: ಕಾಡಿಗೆ ಹೋಗಿಬಿಡ್ತೀನಿ ಎಂದಿದ್ದರಂತೆ ಗಾನಕೋಗಿಲೆ!
S Janaki Passes Away: ತಮ್ಮ ಕುರಿತಾದ ಅಪಪ್ರಚಾರದಿಂದ ಜಾನಕಮ್ಮ ನೊಂದಿದ್ದರು. ಜನಗಳ ಮಧ್ಯೆ ಇರಲು ಇಷ್ಟವಿಲ್ಲ ಎಂದು ಹೇಳಿದ್ದರು ಎಂಬ ವಿಚಾರವನ್ನು ಅವರ ಕೇರ್ ಟೇಕರ್ ಆಗಿದ್ದ ನವೀನ್ ಬಹಿರಂಗಪಡಿಸಿದ್ದಾರೆ. ಗದ್ದಿಗೆ ಮುಖ್ಯ ರಸ್ತೆಗೆ ಜಾನಕಿ ಅವರ ಹೆಸರಿಡುವಂತೆಯೂ ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಅವರು ಮನವಿ ಮಾಡಿದ್ದಾರೆ. ಇನ್ನು ಜಾನಕಿ ಅವರ ಇಷ್ಟದ ಕಣಿಯನಹುಂಡಿ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ತೋಟ ಅವರಿಗೆ ಬಹಳ ನೆಚ್ಚಿನ ಪ್ರದೇಶವಾಗಿತ್ತು ಎನ್ನಲಾಗಿದೆ.
- Malatesh Jaggin
- Updated on: Jul 12, 2026
- 11:41 am
‘ನಾವು ರೌಡಿಗಳಲ್ಲ, ಎಲ್ಲರಂತೆ ಮನುಷ್ಯರು’; ಪ್ರಜ್ವಲ್ ದೇವರಾಜ್ ಫ್ಯಾನ್ಸ್ ಅಳಲು
ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ಟ್ರೇಲರ್ ಲಾಂಚ್ ಈವೆಂಟ್ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು ಗೊತ್ತೇ ಇದೆ. ಈ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ನಡೆದ ಸಾಕಷ್ಟು ಚರ್ಚೆಯನ್ನು ತಂದಿದೆ. ಈ ಬಗ್ಗೆ ಪ್ರಜ್ವಲ್ ಫ್ಯಾನ್ಸ್ ಮಾತನಾಡಿದ್ದು, ನಾವು ರೌಡಿಗಳಲ್ಲ ಎಂದಿದ್ದಾರೆ.
- Malatesh Jaggin
- Updated on: Jul 8, 2026
- 9:35 am
‘ಕರಾವಳಿ’ ಸಿನಿಮಾ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ತೆರೆಕಾಣಲು ಸಜ್ಜಾಗಿರುವ ‘ಕರಾವಳಿ’ ಚಿತ್ರತಂಡದ ಕಿರಿಕ್ ಈಗ ಬೀದಿಗೆ ಬಂದಿದೆ. ಈ ಚಿತ್ರದ ಡೈರೆಕ್ಟರ್ ಗುರುದತ್ ಗಾಣಿಗ ಹಾಗೂ ಹೀರೋ ಪ್ರಜ್ವಲ್ ದೇವರಾಜ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾಗಿದೆ. ಈ ವಿವಾದಕ್ಕೆ ಕಾರಣವೇನು ಎಂಬುದನ್ನು ಗುರುದತ್ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
- Malatesh Jaggin
- Updated on: Jul 7, 2026
- 5:39 pm
‘ಕರಾವಳಿ’ ಟ್ರೇಲರ್ ಲಾಂಚ್ಗೆ ನಟ ಪ್ರಜ್ವಲ್ಗೇ ಇಲ್ಲ ಆಹ್ವಾನ; ಸಿಡಿದೆದ್ದ ಫ್ಯಾನ್ಸ್
ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಗದ್ದಲ ಸೃಷ್ಟಿಸಿದರು. ಪ್ರಜ್ವಲ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ, ಡಬ್ಬಿಂಗ್ ಸಮಸ್ಯೆ, ಹಾಗೂ ಹಣಕಾಸಿನ ವಿವಾದಗಳು ಆಕ್ರೋಶಕ್ಕೆ ಕಾರಣವಾದವು. ಪ್ರವೀಣ್ ಶೆಟ್ಟಿ ಮತ್ತು ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ರಾಜ್ ಬಿ. ಶೆಟ್ಟಿ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿ, ಮಾನವೀಯತೆ ಮತ್ತು ಚಿತ್ರೋದ್ಯಮದ ಒಳಿತಿನ ಬಗ್ಗೆ ಮಾತನಾಡಿದರು.
- Malatesh Jaggin
- Updated on: Jul 7, 2026
- 1:36 pm
‘ಪಿಚ್ಚರ್’ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್
Shilpa Ganesh: ‘ಪಿಚ್ಚರ್’ ಚಿತ್ರದ ಮೂಲಕ ಗಾಯಕಿಯಾಗಿ ಶಿಲ್ಪಾ ಗಣೇಶ್ ಪದಾರ್ಪಣೆ ಮಾಡಿದ್ದಾರೆ. ಗಣೇಶ್ ಅವರ ಪ್ರೋತ್ಸಾಹದಿಂದ ಈ ಹಾಡು ಹಾಡಿದ್ದು, ಈಗ ಬೇರೆ ಚಿತ್ರಗಳಿಂದಲೂ ಗಾಯನಕ್ಕೆ ಆಫರ್ಸ್ ಬರುತ್ತಿವೆ. ಪಿಚ್ಚರ್ ಒಂದು ಪಕ್ಕಾ ಕೌಟುಂಬಿಕ ಮನರಂಜನಾ ಚಿತ್ರವಾಗಿದ್ದು, ಜುಲೈ 24ಕ್ಕೆ ಬಿಡುಗಡೆಯಾಗಲಿದೆ.
- Malatesh Jaggin
- Updated on: Jul 1, 2026
- 7:04 pm
Jayamma Death: ನಟ ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ನಿಧನ
Jayamma Passed Away: ಖ್ಯಾತ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ, ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡರ ಪತ್ನಿ ಜಯಮ್ಮ ಇಂದು (ಜೂನ್ 16) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಸ್ಯಾಂಡಲ್ವುಡ್ ಕುಟುಂಬದ ಬೆನ್ನೆಲುಬಾಗಿ ನಿಂತು, ತಮ್ಮ ಪತಿ ಹಾಗೂ ಮಕ್ಕಳ ಸಿನಿ ಪಯಣಕ್ಕೆ ಅಪಾರ ಬೆಂಬಲ ನೀಡಿದ ಶಕ್ತಿ ಅವರು. ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
- Malatesh Jaggin
- Updated on: Jun 16, 2026
- 9:24 am