AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅದೆಲ್ಲ ತೋರಿಸಿಯೇ ಇಲ್ಲ’; ಅಸಮಾಧಾನ ಹೊರಹಾಕಿದ ಪ್ರಥಮಾ ಪ್ರಸಾದ್

‘ಅದೆಲ್ಲ ತೋರಿಸಿಯೇ ಇಲ್ಲ’; ಅಸಮಾಧಾನ ಹೊರಹಾಕಿದ ಪ್ರಥಮಾ ಪ್ರಸಾದ್

ಮಾಲತೇಶ ಜಗ್ಗೀನ್
| Edited By: |

Updated on: Sep 15, 2026 | 12:25 PM

Share

ಬಿಗ್ ಬಾಸ್ ಮನೆಯಲ್ಲಿ ಆಂಟಿ ಹೇಳಿಕೆ ಬಗ್ಗೆ ಪ್ರಥಮಾ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ. ಮದುವೆಯಾದ ತಕ್ಷಣ ಆಂಟಿ ಎಂದು ಕರೆಯುವ ಕ್ರಮ ಮತ್ತು ಆನೆ ಎಂದಿದ್ದನ್ನು ಅವರು ಬಲವಾಗಿ ವಿರೋಧಿಸಿದ್ದಾರೆ. ಕಿರಣ್ ಶಾಸ್ತ್ರಿ ಜೊತೆಗಿನ ವಾಗ್ವಾದದ ಹೊರತಾಗಿಯೂ, ಅವರು ಅನಾರೋಗ್ಯದಿಂದಿದ್ದಾಗ ಆರೈಕೆ ಮಾಡಿದ್ದನ್ನು ಮುಖ್ಯವಾಹಿನಿ ಮಾಧ್ಯಮಗಳು ತೋರಿಸಲಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಮನೆಯಲ್ಲಿ ತಮ್ಮ ಸಹ ಸ್ಪರ್ಧಿಗಳೊಂದಿಗೆ ನಡೆದ ಘಟನೆಗಳ ಕುರಿತು ನಟಿ ಪ್ರಥಮಾ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ. ಆಂಟಿ ಎಂದು ಕರೆದದ್ದು ಮತ್ತು ಆನೆ ಎಂದು ಕರೆದ ವಿಷಯದ ಬಗ್ಗೆ ಅವರು ಮಾತನಾಡಿದ್ದಾರೆ. ತಮ್ಮನ್ನು ಆನೆ ಎಂದು ಬಾಡಿ ಶೇಮ್ ಮಾಡಿದ್ದನ್ನು ಪ್ರಥಮಾ ಪ್ರಸಾದ್ ಬಲವಾಗಿ ವಿರೋಧಿಸಿದರು. ‘ಒಬ್ಬ ವ್ಯಕ್ತಿಯ ದೇಹದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಆ ರೀತಿ ಆದಾಗ ನನ್ನ ಆತ್ಮಗೌರವವನ್ನು ರಕ್ಷಿಸಿಕೊಳ್ಳುವ ಹಕ್ಕು ನನಗಿದೆ’ ಎಂದು ಅವರು ಪ್ರತಿಪಾದಿಸಿದರು.

ಕಿರಣ್ ಶಾಸ್ತ್ರಿ ಅವರೊಂದಿಗಿನ ಜಗಳದ ಬಗ್ಗೆ ಮಾತನಾಡಿದ ಅವರು, ‘ಕಿತ್ತಾಟದ ಹೊರತಾಗಿಯೂ ಶಾಸ್ತ್ರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ನಾನು ಅವರಿಗೆ ಮಾನವೀಯತೆ ಆಧಾರದಲ್ಲಿ ಆರೈಕೆ ಮಾಡಿದ್ದೇನೆ. ಇದು ಪ್ರಸಾರ ಮಾಡಲಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us