AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾದ ಪುರಾತನ ವಿಷ್ಣು ದೇವಸ್ಥಾನದ ಬಗ್ಗೆ ಇಲ್ಲಿದೆ ಮಾಹಿತಿ

ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾದ ಪುರಾತನ ವಿಷ್ಣು ದೇವಸ್ಥಾನದ ಬಗ್ಗೆ ಇಲ್ಲಿದೆ ಮಾಹಿತಿ

ಅಕ್ಷತಾ ವರ್ಕಾಡಿ
|

Updated on: Sep 20, 2026 | 3:57 PM

Share

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಸೇವಾನಗರ ತಾಂಡಾ ಬಳಿ, ದಟ್ಟ ಅರಣ್ಯದಲ್ಲಿ 1000 ವರ್ಷಗಳಷ್ಟು ಹಳೆಯದಾದ ವಿಷ್ಣು ದೇವಸ್ಥಾನವೊಂದು ಆಕಸ್ಮಿಕವಾಗಿ ಪತ್ತೆಯಾಗಿದೆ. ಆತ್ಮಹತ್ಯೆ ಪ್ರಯತ್ನದ ಸಂದರ್ಭದಲ್ಲಿ ಶಿವಾಜಿರಾವ್ ಎಂಬುವವರು ಈ ದೇಗುಲವನ್ನು ಮತ್ತು ಸದಾ ಜಿನುಗುವ, ಔಷಧೀಯ ಗುಣಗಳಿರುವ ಪವಾಡದ ನೀರಿನ ಹೊಂಡವನ್ನು ಕಂಡುಕೊಂಡರು. ಈ ಕ್ಷೇತ್ರವು ಇಂದು ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ.

ಬೀದರ್ ಜಿಲ್ಲೆಯ ಐತಿಹಾಸಿಕ ಮಹತ್ವವುಳ್ಳ ಭಾಲ್ಕಿ ತಾಲ್ಲೂಕಿನ ಸೇವಾನಗರ ತಾಂಡಾ ಬಳಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸಾವಿರ ವರ್ಷಗಳಷ್ಟು ಹಳೆಯದಾದ ಪ್ರಾಚೀನ ವಿಷ್ಣು ದೇವಸ್ಥಾನವೊಂದು ಪತ್ತೆಯಾಗಿದೆ. ಈ ದೇಗುಲವು ಇದುವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಸುಮಾರು ಐದು ವರ್ಷಗಳ ಹಿಂದೆ, ಜೀವನದಲ್ಲಿ ಜಿಗುಪ್ಸೆಗೊಂಡ ಸೇವಾನಗರ ತಾಂಡಾದ ಶಿವಾಜಿರಾವ್ ಎಂಬುವವರು ಆತ್ಮಹತ್ಯೆ ಮಾಡಿಕೊಳ್ಳಲು ಕಾಡಿಗೆ ತೆರಳಿದ್ದರು. ಅಲ್ಲಿ ಆಲದ ಮರಕ್ಕೆ ನೇಣು ಬಿಗಿದುಕೊಳ್ಳುವ ಯೋಚನೆಯಲ್ಲಿದ್ದಾಗ, ಬೃಹತ್ ಪುರಾತನ ನೀರಿನ ಹೊಂಡವೊಂದು ಅವರಿಗೆ ಕಾಣಿಸಿತು. ಆ ಹೊಂಡದ ನೀರನ್ನು ಕುಡಿದಾಗ, ಅವರ ಮನಸ್ಸಿಗೆ ಶಾಂತಿ ದೊರೆಯಿತು. ಅಲ್ಲೇ ಹೊಂಡದ ಗೋಡೆಯಲ್ಲಿ, ನಾಗರಹಾವಿನ ಮೇಲೆ ಮಲಗಿದ ಭಂಗಿಯಲ್ಲಿರುವ ವಿಷ್ಣುವಿನ ಸುಂದರ ಮೂರ್ತಿಯು ಗೋಚರಿಸಿತು. ಇದರಿಂದ ಪ್ರೇರಿತರಾದ ಶಿವಾಜಿರಾವ್, ಆತ್ಮಹತ್ಯೆಯ ನಿರ್ಧಾರವನ್ನು ಕೈಬಿಟ್ಟು, ಗ್ರಾಮಸ್ಥರಿಗೆ ಈ ದೇಗುಲದ ಕುರಿತು ತಿಳಿಸಿದರು. ಈ ನೀರಿನ ಹೊಂಡವು ಎಂತಹ ಬರಗಾಲದಲ್ಲೂ ಬತ್ತದೆ, ಮಳೆಗಾಲದಲ್ಲೂ ಒಂದೇ ಸಮನೆ ನೀರನ್ನು ಹೊಂದಿದ್ದು, ಔಷಧೀಯ ಗುಣಗಳಿಂದ ಕೂಡಿದೆ ಎನ್ನಲಾಗುತ್ತದೆ. ಈ ಪವಾಡದ ದೇಗುಲ ಮತ್ತು ಅದರ ಪವಿತ್ರ ಜಲವು ಈಗ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಭಕ್ತರನ್ನು ಆಕರ್ಷಿಸುತ್ತಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದೇಗುಲದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇದು ಭಕ್ತರಲ್ಲಿ ಅಪಾರ ಹರ್ಷ ತಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Follow Us