PM Modi Karnataka Visit: ಸುರಪುರ ಶಾಸಕ ರಾಜು ಗೌಡ ಪ್ರಧಾನಿಗಳಿಗೆ ಕಾಮದೇನು ಮೂರ್ತಿ ಕಾಣಿಕೆಯಾಗಿ ನೀಡಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 19, 2023 | 1:15 PM

ವೇದಿಕೆಯ ಮೇಲೆ ಪ್ರಧಾನಿಗಳನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಶಾಲು ಹೊದಿಸಿ ಸನ್ಮಾನಿಸಿದ ಬಳಿಕ ರಾಜು ಗೌಡ ಅವರು ಮೋದಿಯವರಿಗೆ ನೆನಪಿನ ಕಾಣಿಕೆಯಾಗಿ ಕಾಮಧೇನು ಮೂರ್ತಿಯನ್ನು ನೀಡಿದರು.

ಯಾದಗಿರಿ:  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ (PM Narendra Modi) ಯಾದಗಿರಿ ಜಿಲ್ಲೆಯ ಕೊಡೇಕಲ್ ನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ಪ್ರಧಾನಿಗಳನ್ನು ಸ್ವಾಗತಿಸಲು ಜಿಲ್ಲೆಯ ಎಲ್ಲಾ ಹಳ್ಳಿಗಳಿಂದ ಲಕ್ಷಾಂತರ ಜನ ಆಗಮಿಸಿದ್ದಾರೆ. ಸುರಪುರ ಬಿಜೆಪಿ ಶಾಸಕ ಮತ್ತು ಈ ಭಾಗದ ಪ್ರಭಾವಿ ರಾಜಕೀಯ ಮುಖಂಡ ಎನಿಸಿಕೊಂಡಿರುವ ರಾಜು ಗೌಡ (ನರಸಿಂಹ ನಾಯಕ್) (Raju Gowda) ಕೊಡೇಕಲ್ ನವರೇ ಆಗಿರವುದರಿಂದ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತುಕೊಂಡು ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ. ವೇದಿಕೆಯ ಮೇಲೆ ಪ್ರಧಾನಿಗಳನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಶಾಲು ಹೊದಿಸಿ ಸನ್ಮಾನಿಸಿದ ಬಳಿಕ ರಾಜು ಗೌಡ ಅವರು ಮೋದಿಯವರಿಗೆ ನೆನಪಿನ ಕಾಣಿಕೆಯಾಗಿ ಕಾಮಧೇನು ಮೂರ್ತಿಯನ್ನು ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on