Karnataka Assembly Election: ಸಿದ್ದರಾಮಯ್ಯ ಜೀ ಕೋ ಗುಸ್ಸಾ ಕ್ಯೋಂ ಆತಾ ಹೈ? ಮತ್ತೊಮ್ಮೆ ಸಾರ್ವಜನಿಕವಾಗಿ ರೇಗಿದ ವಿರೋಧ ಪಕ್ಷದ ನಾಯಕ!

Updated on: Apr 13, 2023 | 2:44 PM

ಮಡಿವಾಳ ಸಮಾಜದ ಮುಖಂಡರೊಬ್ಬರಿಗೆ ಅವರು ಏಯ್ ಹೋಗಾಚೆ ಅಂತ ಐದಾರು ಬಾರಿ ಗದರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮೈಸೂರು: ಸಿದ್ದರಾಮಯ್ಯನವರಿಗೆ (Siddaramaiah) ಇತ್ತೀಚಿನ ದಿಮಗಳಲ್ಲಿ ಕೋಪ ಸ್ವಲ್ಪ ಜಾಸ್ತಿಯೇ ಬರುತ್ತಿದೆ ಮಾರಾಯ್ರೇ. ಇಂದು ಚಾಮುಂಡೇಶ್ವರಿಗೆ (Chamundeshwari) ಚುನಾವಣಾ ಪ್ರಚಾರಕ್ಕೆ ಬಂದಾಗ ಸಿದ್ದರಾಮಯ್ಯ ಮಡಿವಾಳ ಸಮಾಜದ ಪ್ರತಿನಿಧಿಗಳ ಮೇಲೆ ರೇಗಿದರು. ಸಿದ್ದರಾಮಯ್ಯ ವೇದಿಕೆ ಕಡೆ ನಡೆದು ಹೋಗುವಾಗ ಮಡಿವಾಳ ಸಮಾಜದ (Madiala community) ಮುಖಂಡರು ಅವರನ್ನು ಸುತ್ತುವರಿದು ತಮ್ಮ ಸಮಾಜಕ್ಕೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಾರೆ. ವರುಣಾದಲ್ಲಿ ತಮ್ಮ ವಿರುದ್ಧ ವಿ ಸೋಮಣ್ಣ ಸ್ಪರ್ಧಿಸುತ್ತಿರುವುದರಿಂದ ಕೊಂಚ ವಿಚಲಿತರಾಗಿರುವಂತೆ ತೋರುವ ಸಿದ್ದರಾಮಯ್ಯಗೆ ಬಹಳ ಬೇಗ ಕೋಪಕ್ಕೊಳಗಾಗುತ್ತಿದ್ದಾರೆ. ಮಡಿವಾಳ ಸಮಾಜದ ಮುಖಂಡರೊಬ್ಬರಿಗೆ ಅವರು ಏಯ್ ಹೋಗಾಚೆ ಅಂತ ಐದಾರು ಬಾರಿ ಗದರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More