ಪ್ರಸ್ತಾಪಿತ ‘ಕೊಡಗು ಚಲೋ’ ಕಾರ್ಯಕ್ರಮವನ್ನು ಮುಂದೂಡಿದ ಸಿದ್ದರಾಮಯ್ಯ ಇದು ಪಕ್ಷದ ತೀರ್ಮಾನ ಎಂದರು!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Aug 23, 2022 | 3:03 PM

ಒಬ್ಬ ವಿರೋಧ ಪಕ್ಷದ ನಾಯಕನಾಗಿ ಅದನ್ನು ಉಲ್ಲಂಘಿಸುವ ಬದಲು ಮಾಜಿ ಮುಖ್ಯಮಂತ್ರಿಯಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುತ್ತೇನೆ ಎಂದು ಹೇಳಿದ ಅವರು, ಇದು ಪಕ್ಷದ ತೀರ್ಮಾನವಾಗಿದೆ ಎಂದರು.

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಆಗಸ್ಟ್ 26 ರಂದು ಹಮ್ಮಿಕೊಂಡಿದ್ದ ‘ಕೊಡಗು ಚಲೋ’ (Kodagu Chalo) ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಖುದ್ದು ಸಿದ್ದರಾಮಯ್ಯನವರೇ (Siddaramaiah) ಘೋಷಣೆ ಮಾಡಿದ್ದಾರೆ. ಕೊಡಗಿನಲ್ಲಿ 4 ದಿನಗಳವರೆಗೆ ಸೆಕ್ಷನ್ 144 ಜಾರಿಗೊಳಿಸಿರುವುದರಿಂದ ಒಬ್ಬ ವಿರೋಧ ಪಕ್ಷದ ನಾಯಕನಾಗಿ ಅದನ್ನು ಉಲ್ಲಂಘಿಸುವ ಬದಲು ಮಾಜಿ ಮುಖ್ಯಮಂತ್ರಿಯಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುತ್ತೇನೆ ಎಂದು ಹೇಳಿದ ಅವರು, ಇದು ಪಕ್ಷದ ತೀರ್ಮಾನವಾಗಿದೆ ಎಂದರು.

Follow Us
Web contact

TV9 Kannada

Read More