ಐಎಂಎ ಹಗರಣದಲ್ಲಿ ಸಿದ್ದರಾಮಯ್ಯ ಕೂಡ ಫಲಾನುಭವಿ ಎಂದ ಬಸನಗೌಡ ಪಾಟೀಲ್ ಯತ್ನಾಳ್

|

Updated on: Oct 15, 2024 | 5:11 PM

ಕಾಂಗ್ರೆಸ್ ನಾಯಕರಿಗೆ ಮುಸಲ್ಮಾನರ ಬಗ್ಗೆ ಕಾಳಜಿ ಇಲ್ಲ, ಹಿಂದೆ ಐಎಂಎ ಹಗರಣದ ರೂವಾರಿಯು ಬಡ ಮುಸಲ್ಮಾನರಿಗೆ ಕೋಟ್ಯಾಂತರ ಹಣ ವಂಚಿಸಿ ಸಿಕ್ಕಿಬಿದ್ದಾಗ ಸಿದ್ದರಾಮಯ್ಯ ₹ 5 ಕೋಟಿ, ರೋಷನ್ ಬೇಗ್​ಗೆ ₹8 ಕೋಟಿ, ಈಗಿನ ಗೃಹಮಂತ್ರಿಗೆ ₹ 2ಕೋಟಿ ಮತ್ತು ಜಮೀರ್​ ಅಹ್ಮದ್ ಸುಮಾರು ₹50 ಕೋಟಿ ಸಂದಾಯ ಮಾಡಿದನೆಂದು ಯತ್ನಾಳ್ ಹೇಳಿದರು.

ವಿಜಯಪುರ: ವಿಜಯಪುರದಲ್ಲಿ ವಕ್ಫ್ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ಭಾಗವಹಿಸಿ ಮಾತಾಡಿದ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜಿಲ್ಲೆಯಲ್ಲಿ ವಕ್ಫ್ ಮಂಡಳಿಗೆ ಸೇರಿದ ಜಮೀನು 11,000 ಎಕರೆ ಇದೆ ಎಂದಿರುವ ಸಚಿವ ಜಮೀರ್ ಅಹ್ಮದ್​ರನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ಸಲ ವಿಜಯಪುರದಿಂದ ಮುಸಲ್ಮಾನ ಶಾಸಕ ಅಂತ ಹೇಳಿರುವ ಜಮೀರ್ ಅವರು ತಾಕತ್ತಿದ್ದರೆ ತಾನೇ ಬಂದು ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಯತ್ನಾಳ್ ಸವಾಲೆಸೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Yatnal vs Muslim Leaders: ಅವರ ಅಪ್ಪನಿಗೆ ಯಾರಾದರು ಹುಟ್ಟಿರುವವರು ಸಿಡಿ ಬಿಡುಗಡೆ ಮಾಡಲಿ: ಯತ್ನಾಳ್​ ಸವಾಲ್​

Follow us on