Who would be CM? ಮನಸಲ್ಲಿ ದುಗುಡವಿದ್ದರೂ ದೆಹಲಿಯಲ್ಲಿ ಅಪ್ತರೊಂದಿಗೆ ಮಾಂಸದೂಟ ಸವಿದ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ

Updated on: May 16, 2023 | 4:02 PM

135 ಸ್ಥಾನಗಳನ್ನು ಗೆಲ್ಲುವುದಕ್ಕಿಂತ ಮುಖ್ಯಮಂತ್ರಿಯನ್ನು ಅರಿಸುವುದು ಕಷ್ಟವಾಗುತ್ತಿದೆಯಲ್ಲ ಅಂತ ಕೇಳಿದ್ದಕ್ಕೆ ನಾನು ಹೈಕಮಾಂಡ್ ಗೆ ಭೇಟಿ ಮಾಡುವವರೆಗೆ ಅಂಥ ಪ್ರಶ್ನೆಗಳನ್ಮು ಕೇಳಬೇಡಿ, ಎನ್ನುತ್ತಾರೆ.

ದೆಹಲಿ: ಮುಖ್ಯಮಂತ್ರಿಯಾಗುತ್ತೇನೋ ಇಲ್ಲವೋ ಎಂಬ ದುಗುಡ ಮತ್ತು ಆತಂಕ ತಲೆಯಲ್ಲಿ ಮನೆ ಮಾಡಿದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ ಬೆಂಬಲಿಗ ಶಾಸಕರೊಂದಿಗೆ ಮಾಂಸಾಹಾರ ಸೇವಿಸಿದರು. ಊಟಕ್ಕೆ ಹೋಗುವಾಗ ಕೆಲ ಇಂಗ್ಲಿಷ್ ಪತ್ರಕರ್ತರು (English journalists) ಕೇಳಿದ ಪ್ರಶ್ನೆಗಳಿಗೆ ಒಲ್ಲದ ಮನಸ್ಸ್ಸು ಮತ್ತು ಸಿಡುಕುತನದಿಂದ ಉತ್ತರಿಸಿದ ಸಿದ್ದರಾಮಯ್ಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (assembly polls) ಏನು ನಡೆಯಿತು ಅಂತ ಪ್ರತಿಯೊಬ್ಬರಿಗೆ ಗೊತ್ತಿದೆ ಅಂತ ಹೇಳಿದರು. ಪತ್ರಕರ್ತರೊಬ್ಬರು, ಕರ್ನಾಟಕದಲ್ಲಿ 135 ಸ್ಥಾನಗಳನ್ನು ಗೆಲ್ಲುವುದಕ್ಕಿಂತ ಮುಖ್ಯಮಂತ್ರಿಯನ್ನು ಅರಿಸುವುದು ಕಷ್ಟವಾಗುತ್ತಿದೆಯಲ್ಲ ಅಂತ ಕೇಳಿದ್ದಕ್ಕೆ ನಾನು ಹೈಕಮಾಂಡ್ ಗೆ ಭೇಟಿ ಮಾಡುವವರೆಗೆ ಅಂಥ ಪ್ರಶ್ನೆಗಳನ್ಮು ಕೇಳಬೇಡಿ, ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.