AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mass Leader; ಸಿದ್ದರಾಮಯ್ಯ ನಿಸ್ಸಂದೇಹವಾಗಿ ಒಬ್ಬ ಜನನಾಯಕ, ಹಾಗೆ ಕರೆಸಿಕೊಳ್ಳುವ ಕೆಲವೇ ನಾಯಕರಲ್ಲಿ ಅವರೂ ಒಬ್ಬರು: ಸಿಟಿ ರವಿ

Mass Leader; ಸಿದ್ದರಾಮಯ್ಯ ನಿಸ್ಸಂದೇಹವಾಗಿ ಒಬ್ಬ ಜನನಾಯಕ, ಹಾಗೆ ಕರೆಸಿಕೊಳ್ಳುವ ಕೆಲವೇ ನಾಯಕರಲ್ಲಿ ಅವರೂ ಒಬ್ಬರು: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 20, 2023 | 5:27 PM

ಅಧಿಕಾರದಲ್ಲಿರದಿದ್ದರೂ ಜನರನ್ನು ಸೆಳೆಯುವ ಸಾಮರ್ಥ್ಯವಿರುವ ಬಿಎಸ್ ಯಡಿಯೂರಪ್ಪ, ಹೆಚ್ ಡಿ ದೇವೇಗೌಡ, ಸಿದ್ದರಾಮಯ್ಯ, ದಿವಂಗತ ದೇವರಾಜ ಅರಸು, ದಿವಂಗತ ಬಂಗಾರಪ್ಪ, ದಿವಂಗತ ರಾಮಕೃಷ್ಣ ಹೆಗಡೆ ಮೊದಲಾದವರೆಲ್ಲ ಮಾಸ್ ಲೀಡರ್ ಗಳೆಸಿಕೊಳ್ಳುತ್ತಾರೆ ಎಂದು ರವಿ ಹೇಳಿದರು.

ತುಮಕೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು (Siddaramaiah) ನಖಶಿಖಾಂತ ದ್ವೇಷಿಸುವ ಬಿಜೆಪಿ ಶಾಸಕ ಸಿಟಿ ರವಿ (CT Ravi) ಅವರು ಹೃದಯದ ಒಂದು ಭಾಗದಲ್ಲಿ ಅವರ ಬಗ್ಗೆ ಗೌರವ ಇಟ್ಟುಕೊಂಡಿರುವುದು ಇಂದು ಸಾರ್ವಜನಿಕವಾಗಿ ವೇದ್ಯವಾಯಿತು. ಸಿದ್ದರಾಮಯ್ಯನವರು ಸುರಕ್ಷಿತ ಕ್ಷೇತ್ರಕ್ಕಾಗಿ ಅಲೆದಾಡುತ್ತಿರುವುದನ್ನು ಟೀಕಿಸುತ್ತಲೇ ರವಿಯವರು ಸಿದ್ದರಾಮಯ್ಯರಂಥ ಒಬ್ಬ ಜನನಾಯಕನೇ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದರೆ ಅವರನ್ನು ನಂಬಿಕೊಂಡಿರುವ ಕಾಂಗ್ರೆಸ್ ಪಕ್ಷ ಅದ್ಹೇಗೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. ಅಧಿಕಾರದಲ್ಲಿರದಿದ್ದರೂ ಜನರನ್ನು ಸೆಳೆಯುವ ಸಾಮರ್ಥ್ಯವಿರುವ ಬಿಎಸ್ ಯಡಿಯೂರಪ್ಪ (BS Yediyurappa), ಹೆಚ್ ಡಿ ದೇವೇಗೌಡ (HD Devegowda), ಸಿದ್ದರಾಮಯ್ಯ, ದಿವಂಗತ ದೇವರಾಜ ಅರಸು, ದಿವಂಗತ ಬಂಗಾರಪ್ಪ, ದಿವಂಗತ ರಾಮಕೃಷ್ಣ ಹೆಗಡೆ ಮೊದಲಾದವರೆಲ್ಲ ಮಾಸ್ ಲೀಡರ್ ಗಳೆಸಿಕೊಳ್ಳುತ್ತಾರೆ ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ