ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕರ ವಿರುದ್ಧ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿ ಸ್ಮೃತಿ ಇರಾನಿ ಸಂಸದರಾಗಿ ಆಯ್ಕೆಯಾಗಿರುವುದು ಗೊತ್ತೇ ಇದೆ. ಇತ್ತೀಚೆಗೆ, ಸಚಿವೆ ಸ್ಮೃತಿ ಇರಾನಿ ಅವರು ಪ್ರಮುಖ ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡಿದ್ದಾರೆ. ಗಾಂಧಿ ಕುಟುಂಬವು ಅಮೇಠಿಯಲ್ಲಿ ‘ಕೈಗಾರಿಕೀಕರಣ’ದ ಹೆಸರಿನಲ್ಲಿ ರೈತರು ಮತ್ತು ಇತರರಿಂದ ಭೂಮಿಯನ್ನು ಕಿತ್ತುಕೊಂಡಿದೆ ಎಂದು ಆರೋಪಿಸಿದ್ದಾರೆ. ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗಾಗಿ ಬಳಸಬೇಕಿದ್ದ ಭೂಮಿಯನ್ನು ಗಾಂಧಿ ಕುಟುಂಬ ಕಬಳಿಕೆ ಮಾಡಿದೆ ಎಂದಿದ್ದಾರೆ.
ಅಮೇಠಿ ಜನರಿಗೆ ಮೋಸ ಮಾಡಿದ್ದು ಗಾಂಧಿ ಕುಟುಂಬ
ಬಿಜೆಪಿ ಅಭ್ಯರ್ಥಿಯಾಗಿ ಕಣ್ಣಕ್ಕಿಳಿದಾಗ ಅಮೇಠಿ ಕ್ಷೇತ್ರದ ಜನರು ನನ್ನ ಮಾತುಗಳನ್ನು ನಂಬಲು ಸ್ವಲ್ಪ ಸಮಯ ಹಿಡಿಯಿತು ಎಂದು ಸ್ಮೃತಿ ಇರಾನಿ ವಿಷಾದದ ದನಿಯಲ್ಲಿ ಹೇಳಿದ್ದಾರೆ. ಗಾಂಧಿ ಕುಟುಂಬದವರು ಇಲ್ಲಿನ ಜಮೀನುಗಳನ್ನು ಜನರಿಂದ ಕಿತ್ತುಕೊಂಡರು. ಸಂಸತ್ತಿನಲ್ಲೂ ಅದನ್ನೇ ಹೇಳಿದ್ದೆ. 30 ಎಕರೆ ಜಮೀನನ್ನು ಕೇವಲ 600 ರೂ.ಗೆ ಬಾಡಿಗೆಗೆ ಪಡೆಯಲಾಗಿದೆ. ಆ ಜಮೀನಿನಲ್ಲಿ ಗಾಂಧಿ ಕುಟುಂಬದವರು ತಮಗಾಗಿ ಒಂದು ಸುಂದರ ಸಂಕೀರ್ಣವನ್ನು ನಿರ್ಮಿಸುತ್ತಾರೆ ಎಂಬುದು ಬಹಿರಂಗವಾಯಿತು. ಪ್ರಮುಖ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ಕೈಗಾರಿಕೀಕರಣದ ಹೆಸರಿನಲ್ಲಿ ಅಮೇಠಿಯಲ್ಲಿ ರೈತರ ಭೂಮಿಯನ್ನು ಕಬಳಿಸಿದ್ದಾರೆ ಎಂದು ಸ್ಮೃತಿ ಇರಾನಿ ಸಂಚಲನಾತ್ಮಕ ಆರೋಪ ಮಾಡಿದ್ದಾರೆ.
ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದವರ ವಿರುದ್ಧ ಎಸ್ಐಟಿ ವಿಶೇಷ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗಿದೆ ಎಂದು ಇರಾನಿ ವಾಗ್ದಾಳಿ ನಡೆಸಿದರು. 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಠಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸೋತಿದ್ದ ಸ್ಮೃತಿ ಇರಾನಿ, 2019 ರಲ್ಲಿ ಗಾಂಧಿಯವರಿಂದ ಸ್ಥಾನವನ್ನು ಕಸಿದುಕೊಳ್ಳುವ ಮೂಲಕ ಆ ಸೋಲಿನ ಸೇಡು ತೀರಿಸಿಕೊಂಡರು. 47 ವರ್ಷದ ಇರಾನ್ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದ ಅತ್ಯಂತ ಕಿರಿಯ ಸದಸ್ಯ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ