ವಿಜಯಪುರ: ಮೂರಡಿ ನೀರಿನಿಂದ ಜಲಾವೃತವಾದ ದೇವಸ್ಥಾನದಲ್ಲಿ ಶಿವರಾತ್ರಿಯ ಮಧ್ಯರಾತ್ರಿ ವಿಶೇಷ ಪೂಜೆ

Updated By: ವಿವೇಕ ಬಿರಾದಾರ

Updated on: Feb 19, 2023 | 1:09 PM

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಹೊರ ಭಾಗದಲ್ಲಿರುವ ಸಂಗಮನಾಥ‌ ದೇವಸ್ಥಾನದ ಗರ್ಭಗುಡಿ ಮೂರಡಿ ಜಲಾವೃತವಾಗಿದೆ. ಆದರೂ ಕೂಡ ಭಕ್ತರು ಮಧ್ಯರಾತ್ರಿ ದೇವರಿಗೆ ವಿಶೇಷ ಶಿವರಾತ್ರಿ ಪೂಜೆ ಮಾಡಿದ್ದಾರೆ.

ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಹೊರ ಭಾಗದಲ್ಲಿರುವ ಸಂಗಮನಾಥ‌ ದೇವಸ್ಥಾನದ ಗರ್ಭಗುಡಿ ಮೂರಡಿ ಜಲಾವೃತವಾಗಿದೆ. ಆದರೂ ಕೂಡ ಭಕ್ತರು ಮಧ್ಯರಾತ್ರಿ ದೇವರಿಗೆ ವಿಶೇಷ ಶಿವರಾತ್ರಿ ಪೂಜೆ ಮಾಡಿದ್ದಾರೆ. ಸಂಗಮನಾಥ ದೇವಸ್ಥಾನ, ಸಂಗಮನಾಥ ಹಳ್ಳದ‌ ನೀರಿನಿಂದ ಜಲಾವೃತವಾಗಿದೆ. ಸಂಗಮನಾಥ ಹಳ್ಳ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ನೀರಿನಿಂದ ತುಂಬಿ ಹರಿಯುತ್ತಿದೆ. ಜಲಾವೃತವಾದ ದೇವಸ್ಥಾನದಲ್ಲೇ ನೆರವೇರಿದ ಶಿವರಾತ್ರಿ ಪೂಜಾ ಕಾರ್ಯ ನಡೆದಿದೆ.