ತಾನಿನ್ನೂ ಬಿಜೆಪಿ ಶಾಸಕನೆಂದು ಹೇಳುವ ಸೋಮಶೇಖರ್ ಅವರಲ್ಲಿ ಪಕ್ಷದ ಬಗ್ಗೆ ಅಸಮಾಧಾನ ಮಡುಗಟ್ಟಿದೆ!

ಅರುಣ್​ ಕುಮಾರ್​ ಬೆಳ್ಳಿ

Updated on: Aug 24, 2023 | 2:48 PM

ಆದರೆ ಕ್ರಮೇಣ ತಮ್ಮನ್ನು ಹೊರಗಿನವನಂತೆ ಪರಿಗಣಿಸುವುದು ಶುರುವಾಯಿತು, ಚುನಾವಣೆಗೆ ಮೊದಲು ಮತ್ತು ನಂತರ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ, ವಾಪಸ್ಸು ಕಾಂಗ್ರೆಸ್ ಹೋಗುತ್ತಾನೆ ಅಂತ ಸುಳ್ಳು ಹರಿಬಿಡಲಾಗುತ್ತಿತ್ತು ಮತ್ತು ಸಂಶಯದ ದೃಷ್ಟಿಯಿಂದ ನೋಡಲಾಗುತ್ತಿತ್ತು ಎಂದು ಸೋಮಶೇಖರ್ ಹೇಳಿದರು.

ಬೆಂಗಳೂರು: ಬಿಜೆಪಿ ಶಾಸಕರದ ಎಸ್ ಟಿ ಸೋಮಶೇಖರ್ (ST Somashekhar) ಮತ್ತು ಶಿವರಾಂ ಹೆಬ್ಬಾರ್ (Shivaram Hebbar) ಪಕ್ಷ ತೊರೆದು ಕಾಂಗ್ರೆಸ್ ಸೇರುವುದು ಕ್ರಮೇಣವಾಗಿ ಖಚಿತವಾಗುತ್ತಿದೆ. ಅವರಿಬ್ಬರು ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದರು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದ ಸೋಮಶೇಖರ್ ತಾವು ಈಗಲೂ ಬಿಜೆಪಿ ಶಾಸಕ ಅಂತ ಹೇಳುತ್ತಾರಾದರೂ, ಪಕ್ಷ ಮತ್ತು ಅದರ ನಾಯಕರ ವಿರುದ್ಧ ಕೇವಲ ಅಸಮಾಧಾನ ಮಾತ್ರ ಹೊರಹಾಕುತ್ತಾರೆ. ಬಿಜೆಪಿ ಸೇರಿದಾಗ ವಾತಾವರಣ ತಿಳಿ ಮತ್ತು ಸಹ್ಯವಾಗಿತ್ತು. ಆದರೆ ಕ್ರಮೇಣ ತಮ್ಮನ್ನು ಹೊರಗಿನವನಂತೆ ಪರಿಗಣಿಸುವುದು ಶುರುವಾಯಿತು, ಚುನಾವಣೆಗೆ ಮೊದಲು ಮತ್ತು ನಂತರ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ, ವಾಪಸ್ಸು ಕಾಂಗ್ರೆಸ್ ಹೋಗುತ್ತಾನೆ ಅಂತ ಸುಳ್ಳು ಹರಿಬಿಡಲಾಗುತ್ತಿತ್ತು ಮತ್ತು ಸಂಶಯದ ದೃಷ್ಟಿಯಿಂದ ನೋಡಲಾಗುತ್ತಿತ್ತು ಎಂದು ಸೋಮಶೇಖರ್ ಹೇಳಿದರು. ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಬಗ್ಗೆಯೂ ಸೋಮಶೇಖರ್ ಅಸಮಾಧಾನ ಹೊರಹಾಕಿದರು. ಅವರು ಬಗ್ಗೆ ಮೊನ್ನೆ ಹಾವೇರಿಯಲ್ಲಿ ಬಿಸಿ ಪಾಟೀಲ್ ಹೇಳಿರೋದು ಸತ್ಯ ಎಂದು ಸೋಮಶೇಖರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.