ವಿನೋದ್ ರಾಜ್ ಅನ್ನು ನೋಡಿ ಎಲ್ಲರೂ ಕಲಿಯಬೇಕು: ಸುಂದರ್ ರಾಜ್ ಹೀಗೆಂದಿದ್ಯಾಕೆ?

|

Updated on: May 31, 2023 | 11:35 PM

Sundar Raj: ಹಿಂದಿಯ ದೀವಾರ್ ಸಿನಿಮಾದ ಡೈಲಾಗ್ ಹೇಳಿದ ನಟ ಸುಂದರ್ ರಾಜ್, ಬಾಳಿದರೆ ವಿನೋದ್ ರಾಜ್ ರೀತಿ ಬಾಳಬೇಕು, ಅವರಿಂದ ಎಲ್ಲರೂ ಕಲಿಯಬೇಕಿದೆ ಎಂದರು.

ಹಿರಿಯ ನಟಿ ಲೀಲಾವತಿ (Leelavathi) ಅವರ ಮನೆಗೆ ಇಂದು ಕನ್ನಡ ಚಿತ್ರರಂಗದ (Sandalwood) ಕಲಾವಿದರ ದಂಡು ಆಗಮಿಸಿತ್ತು. ಹಿರಿಯ ನಟಿಯನ್ನು ಕಂಡು ಮಾತನಾಡಿಸಿದರು ಮಾತ್ರವಲ್ಲದೆ, ಲೀಲಾವತಿಯವರ ಮುಂದೆ ಹಾಡಿ, ಕುಣಿದು ಅವರ ಮನ ಸಂತೋಶಗೊಳಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಸುಂದರ್ ರಾಜ್, ವಿನೋದ್ ರಾಜ್ ಅವರನ್ನು ನೋಡಿ ಎಲ್ಲರೂ ಕಲಿಯಬೇಕು ಎಂದರು. ಮಾತ್ರವಲ್ಲದೆ ದೀವಾರ್ ಸಿನಿಮಾದ ಡೈಲಾಗ್ ಸಹ ಹೇಳಿ ಇದು ವಿನೋದ್ ರಾಜ್​ಗೆ ಸರಿಯಾಗಿ ಒಪ್ಪುತ್ತದೆ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:34 pm, Wed, 31 May 23

Follow us on