ತೆಲಂಗಾಣ ಅಸೆಂಬ್ಲಿ ಚುನಾವಣೆ: ಕಾಂಗ್ರೆಸ್ ಜೊತೆ ಹೊಂದಾಣಿಕೆಯಾಗದೆ ಏಕಾಂಗಿ ಫೈಟ್, ವೈಎಸ್ ಶರ್ಮಿಳಾ ಜೊತೆ ತಾಯಿ ವಿಜಯಮ್ಮ-ಪತಿ ಅನಿಲ್ ಕಣಕ್ಕೆ?

|

Updated on: Oct 13, 2023 | 3:41 PM

ಶರ್ಮಿಳಾ ತಾವು ಎಲ್ಲಿಂದ ಸ್ಪರ್ಧಿಸುವುದಾಗಿಯೂ ಪ್ರಕಟಿಸಿದ್ದಾರೆ. ಖಮ್ಮಂ ಜಿಲ್ಲೆಯ ಪಾಲೇರು ಕ್ಷೇತ್ರದಿಂದ ಹೆಚ್ಚುವರಿಯಾಗಿ ಸ್ಪರ್ಧಿಸುವುದಾಗಿ ಶರ್ಮಿಳಾ ತಿಳಿಸಿದ್ದಾರೆ. ಇನ್ನೊಂದು ಸ್ಥಳ ಮಿರ್ಯಾಲಗುಡ ಎಂದು ಈ ಮೊದಲೇ ಪ್ರಕಟಿಸಿದ್ದಾರೆ. ಆದರೆ.. ಅವರಷ್ಟೇ ಅಲ್ಲ.. ಅವರ ತಾಯಿ ವಿಜಯಲಕ್ಷ್ಮಿ ಹಾಗೂ ಪತಿ ಸಹೋದರ ಅನಿಲ್ ಕೂಡ ಸ್ಪರ್ಧಿಸುವ ಅವಕಾಶವಿದೆ ಎಂದು ಸುಳಿವು ನೀಡಿದರು.

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ (Telangana assembly Elections 2023) ಸ್ಪರ್ಧಿಸುವ ಬಗ್ಗೆ ವೈಎಸ್‌ಆರ್‌ಟಿಪಿ (ವೈಎಸ್ಆರ್ ತೆಲಂಗಾಣ ಪಕ್ಷ – YSRTP) ಅಧ್ಯಕ್ಷೆ ವೈಎಸ್ ಶರ್ಮಿಳಾ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಶರ್ಮಿಳಾ ಖಮ್ಮಂ ಜಿಲ್ಲೆಯ ಪಾಲೇರು ಕ್ಷೇತ್ರದಿಂದಲೂ ಹೆಚ್ಚುವರಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಅಗತ್ಯ ಬಿದ್ದರೆ ತಾಯಿ ವಿಜಯಲಕ್ಷ್ಮಿ ಹಾಗೂ ಪತಿ ಅನಿಲ್ ಕೂಡ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಶರ್ಮಿಳಾ ಘೋಷಿಸಿದರು. ಇದರೊಂದಿಗೆ ವೈಎಸ್ ಶರ್ಮಿಳಾ ಅವರು ಕಾಂಗ್ರೆಸ್​​ ಜೊತೆಗಿನ ವಿಲೀನಕ್ಕೆ ಬಾಗಿಲುಮುಚ್ಚಿದ್ದಾರೆ.

ತೆಲಂಗಾಣದಲ್ಲಿ ಈ ಬಾರಿಯ ಚುನಾವಣೆ ಜೋರಾಗಿಯೇ ಇದೆ. ರಾಜ್ಯದ ಮೂರು ಪ್ರಮುಖ ಪಕ್ಷಗಳ ನಡುವೆ ತ್ರಿಕೋನ ಕದನ ನಡೆಯುತ್ತಿದೆ..ಈಗ ತೆಲಂಗಾಣದ ಹೊಸ ಪಕ್ಷಗಳಾದ ಜನಸೇನಾ, ಬಿಎಸ್‌ಪಿ, ಟಿಜೆಎಸ್ ಮತ್ತು ವೈಎಸ್‌ಆರ್ ಅಖಾಡಕ್ಕೆ ಇಳಿದಿದ್ದು, ಪೈಪೋಟಿ ಮತ್ತಷ್ಟು ಕುತೂಹಲ ಮೂಡಿಸಿದೆ. ಆದ್ರೆ.. ವೈಎಸ್ಆರ್ ತೆಲಂಗಾಣ ಪಕ್ಷ ಕಾಂಗ್ರೆಸ್ ಜೊತೆ ವಿಲೀನವಾಗಲಿದೆ ಅಂತ ಭಾರೀ ಸುದ್ದಿಯಾಗಿದ್ದಾಗಲೇ.. ಇದೀಗ ಶರ್ಮಿಳಾ ಅದಕ್ಕೆ ಬ್ರೇಕ್​​ ಹಾಕಿದ್ದಾರೆ. ಹೈದರಾಬಾದ್‌ನ ಲೋಟಸ್ ಪಾಂಡ್‌ನಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಪಕ್ಷದ ಮುಂದಿನ ನಡೆಯನ್ನು ಪ್ರಕಟಿಸಿದರು. ರಾಜ್ಯದ 119 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶರ್ಮಿಳಾ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಶರ್ಮಿಳಾ ತಾವು ಎಲ್ಲಿಂದ ಸ್ಪರ್ಧಿಸುವುದಾಗಿಯೂ ಪ್ರಕಟಿಸಿದ್ದಾರೆ. ಖಮ್ಮಂ ಜಿಲ್ಲೆಯ ಪಾಲೇರು ಕ್ಷೇತ್ರದಿಂದ ಹೆಚ್ಚುವರಿಯಾಗಿ ಸ್ಪರ್ಧಿಸುವುದಾಗಿ ಶರ್ಮಿಳಾ ತಿಳಿಸಿದ್ದಾರೆ. ಇನ್ನೊಂದು ಸ್ಥಳ ಮಿರ್ಯಾಲಗುಡ ಎಂದು ಈ ಮೊದಲೇ ಪ್ರಕಟಿಸಿದ್ದಾರೆ. ಆದರೆ.. ಅವರಷ್ಟೇ ಅಲ್ಲ.. ಅವರ ತಾಯಿ ವಿಜಯಲಕ್ಷ್ಮಿ ಹಾಗೂ ಪತಿ ಸಹೋದರ ಅನಿಲ್ ಕೂಡ ಸ್ಪರ್ಧಿಸುವ ಅವಕಾಶವಿದೆ ಎಂದು ಸುಳಿವು ನೀಡಿದರು. ಇಬ್ಬರೂ ಕೂಡ ಸ್ಪರ್ಧಿಸಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ ಎಂದರು. ಇನ್ನೊಂದೆಡೆ ರಾಜ್ಯದಲ್ಲಿ ಬಿಆರ್‌ಎಸ್‌ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವ ಗುರಿ ಹೊಂದಲಾಗಿದೆ ಎಂದು ಶರ್ಮಿಳಾ ಹೇಳಿದ್ದಾರೆ.

ನಾವು 3800 ಕಿಲೋಮೀಟರ್‌ಗಳ ದಣಿವರಿಯದ ಯಾತ್ರೆಯಿಂದ ಜನರ ಹೃದಯವನ್ನು ಗೆದ್ದಿದ್ದೇವೆ. ತೆಲಂಗಾಣ ಜನರ ಪ್ರತಿಯೊಂದು ಸಮಸ್ಯೆ ಮತ್ತು ಕಾಳಜಿಗಾಗಿ ನಾವು ಮೊದಲಿನಿಂದಲೂ ಪ್ರಾಮಾಣಿಕವಾಗಿ ಹೋರಾಡುತ್ತಿದ್ದೇವೆ. ನಿರುದ್ಯೋಗದ ವಿರುದ್ಧದ ನಮ್ಮ ಹೋರಾಟವೇ ಕೆಸಿಆರ್ ಕನಿಷ್ಠ ಕೆಲವು ಉದ್ಯೋಗ ಅಧಿಸೂಚನೆಗಳನ್ನು ಬಿಡುಗಡೆ ಮಾಡಲು ಕಾರಣವಾಗಿದೆ ಎಂದು ಶರ್ಮಿಳಾ ಅವರು ಹೇಳಿದರು.

ವೈಎಸ್‌ಆರ್‌ಟಿಪಿ-ಕಾಂಗ್ರೆಸ್ ವಿಲೀನದ ಸಾಧ್ಯತೆಯ ಊಹಾಪೋಹದ ಕುರಿತು, ಶರ್ಮಿಳಾ ಅವರು, “ಕಾಂಗ್ರೆಸ್‌ನೊಂದಿಗೆ ವಿಲೀನದತ್ತ ಹೆಜ್ಜೆಗಳನ್ನು ಇಡಲು ನನ್ನ ದೊಡ್ಡ ಉದ್ದೇಶವೆಂದರೆ ಪ್ರತಿಪಕ್ಷಗಳ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳುವುದು. ನಿರಂಕುಶಾಧಿಕಾರವು ಇನ್ನೊಂದು ಬಾರಿ ಅಧಿಕಾರಕ್ಕೆ ಬರುವುದಕ್ಕೆ ಅರ್ಹವಲ್ಲ ಎಂದರು.

ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಅನುಗುಣವಾಗಿ ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ವೈಟಿಪಿ ಪ್ರಕಟಿಸಿದೆ. YTP ಪರವಾಗಿ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ವೈಟಿಪಿ ರೈತ ಮತ್ತು ನೇಗಿಲು ಚಿಹ್ನೆಯನ್ನು ಕೇಳಿದೆ. ಶೀಘ್ರವೇ ಸ್ಪಷ್ಟನೆ ನೀಡಲಾಗುವುದು ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on