AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮವಿದ್ದಲ್ಲಿ ಸರ್ಕಾರ ಕ್ರಮ ಜರುಗಿಸಲಿ ಆದರೆ ವಿನಾಕಾರಣ ಗುತ್ತಿಗೆದಾರರನ್ನು ಬಲಿಪಶು ಮಾಡೋದು ಬೇಡ: ಕೆಂಪಣ್ಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ

ಅಕ್ರಮವಿದ್ದಲ್ಲಿ ಸರ್ಕಾರ ಕ್ರಮ ಜರುಗಿಸಲಿ ಆದರೆ ವಿನಾಕಾರಣ ಗುತ್ತಿಗೆದಾರರನ್ನು ಬಲಿಪಶು ಮಾಡೋದು ಬೇಡ: ಕೆಂಪಣ್ಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 13, 2023 | 1:47 PM

Share

ಗುತ್ತಿಗೆದಾರರು ಮಾಡುವ ಕೆಲಸಗಳು ಒಂದು ನಿರಂತರವಾದ ಪ್ರಕ್ರಿಯೆ, ಆ ಸರ್ಕಾರ ಈ ಸರ್ಕಾರ ಅಂತೇನೂ ಇಲ್ಲ, ಮುಂದೆ ಇನ್ನೊಂದು ಸರ್ಕಾರ ಬರುತ್ತೆ, ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಸಿಕ್ಕ ಬಳಿಕ ಕೆಲಸ ಮಾಡಿರುತ್ತಾರೆ, ಕಾಮಗಾರಿ ಮುಗಿದ ಮೇಲೆ ಇಲ್ಲ ಸಲ್ಲದ ಉಪದ್ವ್ಯಾಪ ತೆಗೆದು ಮಾಡಿದ ಕಾಮಗಾರಿಯ ಹಣ ತಡೆಹಿಡಿಯುವುದು ಸರಿಯಲ್ಲ ಎಂದು ಕೆಂಪಣ್ಣ ಹೇಳಿದರು

ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ (state contractors association) ಅಧ್ಯಕ್ಷ ಕೆಂಪಣ್ಣ (Kempanna) ಇಂದು ಗುತ್ತಿಗೆದಾದರ ಸಂಘದ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಸೌಮ್ಯ ಭಾಷೆಯಲ್ಲೇ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರ ಬಿಲ್ ಗಳನ್ನು (bills) ತಡೆಹಿಡಿದಿರುವುದರ ಹಿಂದೆ ಯಾವುದೇ ಲಾಜಿಕ್ ಇಲ್ಲ ಎಂದ ಕೆಂಪಣ್ಣ ದಸರಾ ಹಬ್ಬ ತಲೆ ಮೇಲಿದೆ ಮತ್ತು ಗುತ್ತಿಗೆದಾರರಿಗೆ ಅದು ಬಹು ದೊಡ್ಡ ಹಬ್ಬವಾಗಿರುವುದರಿಂದ ಬೇಗ ಎಲ್ಲ ಗುತ್ತಿಗೆದಾರರ ಬಿಲ್ ಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಗುತ್ತಿಗೆದಾರರು ಮಾಡುವ ಕೆಲಸಗಳು ಒಂದು ನಿರಂತರವಾದ ಪ್ರಕ್ರಿಯೆ, ಆ ಸರ್ಕಾರ ಈ ಸರ್ಕಾರ ಅಂತೇನೂ ಇಲ್ಲ, ಮುಂದೆ ಇನ್ನೊಂದು ಸರ್ಕಾರ ಬರುತ್ತೆ, ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಸಿಕ್ಕ ಬಳಿಕ ಕೆಲಸ ಮಾಡಿರುತ್ತಾರೆ, ಕಾಮಗಾರಿ ಮುಗಿದ ಮೇಲೆ ಇಲ್ಲ ಸಲ್ಲದ ಉಪದ್ವ್ಯಾಪ ತೆಗೆದು ಮಾಡಿದ ಕಾಮಗಾರಿಯ ಹಣ ತಡೆಹಿಡಿಯುವುದು ಸರಿಯಲ್ಲ ಎಂದು ಕೆಂಪಣ್ಣ ಹೇಳಿದರು. ಬಿಬಿಎಂಪಿಯ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ 3 ವರ್ಷಗಳಿಂದ ಬಿಲ್ ಗಳು ರಿಲೀಸ್ ಆಗಿಲ್ಲ. ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಣ್ಣ ನೀರಾವರಿ ಇಲಾಖೆ 10,000 ಕೋಟಿ ರೂ. ಮೊತ್ತದ ಕಾಮಗಾರಿ ರದ್ದು ಮಾಡಿದ್ದಾರೆ. 3,000 ಕೋಟಿ ಮೌಲ್ಯದ ಯೋಜನೆಗೆ 10,000 ಕೋಟಿ ರೂ. ಗಳ ವರ್ಕ್ ಆರ್ಡರ್ ರಿಲೀಸ್ ಮಾಡಿದ ಕಾರಣ ರದ್ದು ಮಾಡಿದ್ದಾರಂತೆ. ಸರ್ಕಾರ ಕ್ರಮ ತೆಗೆದುಕೊಳ್ಳಲಿ, ತಮ್ಮ ಅಭ್ಯಂತರ ಇಲ್ಲ ಆದರೆ ವಿನಾಕಾರಣ ಗುತ್ತಿಗೆದಾರರನ್ನು ಬಲಿಪಶು ಮಾಡೋದು ಬೇಡ ಎಂದು ಕೆಂಪಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.