
[lazy-load-videos-and-sticky-control id=”OxE8wKoLM7o”]
ತಲಕಾವೇರಿ ದೇಗುಲದ ಬಳಿ ಬ್ರಹ್ಮಗಿರಿ ಬೆಟ್ಟ ಕುಸಿತ ಸಂಭವಿಸಿದೆ. ಗುಡ್ಡ ಕುಸಿತದಿಂದ ದೇಗುಲದ ಅರ್ಚಕರ ಎರಡು ಮನೆಗಳು ಸಂಪೂರ್ಣ ಧ್ವಂಸವಾಗಿದೆ ಎಂದು ತಿಳಿದುಬಂದಿದೆ. ಮನೆಗಳ ಮೇಲೆ ಗುಡ್ಡ ಕುಸಿದ ಪರಿಣಾಮ 6 ಜನರು ಸಿಲುಕಿರೋ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ದೇವಸ್ಥಾನದ ಹಿರಿಯ ಅರ್ಚಕರು, ಅವರ ಪತ್ನಿ, ಅಡುಗೆ ಕೆಲಸದವರು, ಒಬ್ಬರು ಅಥವಾ ಇಬ್ಬರು ಪುರೋಹಿತರು ಘಟನೆಯ ವೇಳೆ ಮನೆಯಲ್ಲಿ ಇದ್ದರು ಎಂದು ಸ್ಥಳೀಯರಾದ ಸತೀಶ್ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎನ್ಡಿಆರ್ಎಫ್ ತಂಡದಿಂದ ಆಗಮಿಸಿದ್ದು ನಾಪತ್ತೆಯಾದವ್ರಿಗಾಗಿ ಶೋಧಕಾರ್ಯ ನಡೆಯುತ್ತಿದೆ.
Published On - 10:39 am, Thu, 6 August 20