Daily Devotional: ಶ್ರಾವಣ ಮಾಸದಲ್ಲಿ ಹಸಿರು ಉಡುಗೆ-ತೊಡುಗೆಯ ಮಹತ್ವ ತಿಳಿಯಿರಿ

Updated on: Aug 20, 2025 | 6:51 AM

ಶ್ರಾವಣ ಮಾಸದ ಕೊನೆ ದಿನಗಳಲ್ಲಿ ಹಸಿರು ಬಣ್ಣದ ಉಡುಗೆ-ತೊಡುಗೆಯ ಮಹತ್ವದ ಬಗ್ಗೆ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಸಿರು ಬಣ್ಣ ಬುಧ ಗ್ರಹದ ಪ್ರತಿಕ ಮತ್ತು ವೆಂಕಟೇಶ್ವರ ಸ್ವಾಮಿಗೆ ಪ್ರಿಯವಾದದ್ದು. ಹಸಿರು ಬಟ್ಟೆ ಧರಿಸುವುದು, ಹಸಿರು ವಸ್ತುಗಳನ್ನು ಉಪಯೋಗಿಸುವುದು ಶುಭವೆಂದು ಹೇಳಲಾಗಿದೆ.

ಬೆಂಗಳೂರು, ಆಗಸ್ಟ್​ 20: ಶ್ರಾವಣ ಮಾಸದ ಕೊನೆಯ ದಿನಗಳಲ್ಲಿ ಹಸಿರು ಬಣ್ಣದ ಬಳಕೆಯ ಮಹತ್ವವನ್ನು ಡಾ. ಬಸವರಾಜ ಗುರೂಜಿ ಅವರು ಈ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಶ್ರಾವಣ ಮಾಸದ ಕೊನೆಯ ದಿನಗಳಲ್ಲಿ (23ನೇ ತಾರೀಖು ಅಮವಾಸ್ಯೆ) ಹಸಿರು ಬಣ್ಣವನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಶುಭ ಫಲಿತಾಂಶಗಳು ಸಿಗಲಿದೆ. ಹಸಿರು ಬಣ್ಣ ಬುಧ ಗ್ರಹದ ಪ್ರತಿಕವಾಗಿದ್ದು, ವೆಂಕಟೇಶ್ವರ ಸ್ವಾಮಿಗೂ ಇದು ಪ್ರಿಯವಾದ ಬಣ್ಣ. ಮಹಿಳೆಯರು ಹಸಿರು ಬಟ್ಟೆ ಧರಿಸುವುದು, ಪುರುಷರು ಹಸಿರು ಖರ್ಚುಪು ಅಥವಾ ಹಸಿರು ಬಣ್ಣದ ವಸ್ತುಗಳನ್ನು ಇಟ್ಟುಕೊಳ್ಳುವುದು ಉತ್ತಮ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More