Daily Devotional: ತಿಥಿ ಊಟ ಮಾಡಿದರೆ ಅದೃಷ್ಟ ನಷ್ಟವಾಗುತ್ತಾ?

Updated on: Apr 08, 2026 | 7:20 AM

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ತಿಥಿ ಊಟ ಮಾಡಿದರೆ ಅದೃಷ್ಟ ನಷ್ಟವಾಗುತ್ತಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಆಧ್ಯಾತ್ಮಿಕವಾಗಿ, ತಿಥಿ ಊಟವು ದಿವಂಗತ ಆತ್ಮದ ನೆನಪಿನಲ್ಲಿ ಆಚರಿಸುವ ಒಂದು ಪದ್ಧತಿಯಾಗಿದೆ. ಬದುಕಿದ್ದಾಗ ಆ ವ್ಯಕ್ತಿಯೊಂದಿಗೆ ಇದ್ದ ಬಾಂಧವ್ಯದಂತೆ, ಅವರ ನೆನಪಿನಲ್ಲಿ ನೀಡುವ ಆಹಾರವು ಆತ್ಮಕ್ಕೆ ತೃಪ್ತಿ ನೀಡಿ, ಸಕಾರಾತ್ಮಕ ಆಶೀರ್ವಾದಗಳನ್ನು ನೀಡುತ್ತದೆ. ಗರುಡ ಪುರಾಣದ ಪ್ರಕಾರ, ಈ ಸಂದರ್ಭದಲ್ಲಿ ನೀಡುವ ತೀರ್ಥ ಅಥವಾ ಪ್ರಸಾದದಿಂದ ಯಾವುದೇ ದುಷ್ಪರಿಣಾಮಗಳಾಗುವುದಿಲ್ಲ ಹಿರಿಯರು ಮತ್ತು ಬುದ್ಧಿಜೀವಿಗಳು ಕೂಡ ತಿಥಿ ಊಟಕ್ಕೆ ಹೋಗಿ ಬರುವುದರಿಂದ ಅನೇಕ ದೋಷಗಳು ನಿವಾರಣೆಯಾಗುತ್ತವೆ ಎಂದು ಹೇಳುವುದನ್ನು ಕೇಳುತ್ತೇವೆ. ಆದ್ದರಿಂದ, ತಿಥಿ ಊಟವು ಹಾನಿಕರವಲ್ಲ, ಬದಲಿಗೆ ದಿವಂಗತರಿಗೆ ಸಲ್ಲಿಸುವ ಗೌರವ ಮತ್ತು ಆತ್ಮಕ್ಕೆ ಸಕಾರಾತ್ಮಕ ಶಕ್ತಿಯನ್ನು ನೀಡುವ ನಂಬಿಕೆಯಾಗಿದೆ.ಎಂದು ಗುರೂಜಿ ಹೇಳಿದ್ದಾರೆ.

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ತಿಥಿ ಊಟ ಮಾಡಿದರೆ ಅದೃಷ್ಟ ನಷ್ಟವಾಗುತ್ತಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಆಧ್ಯಾತ್ಮಿಕವಾಗಿ, ತಿಥಿ ಊಟವು ದಿವಂಗತ ಆತ್ಮದ ನೆನಪಿನಲ್ಲಿ ಆಚರಿಸುವ ಒಂದು ಪದ್ಧತಿಯಾಗಿದೆ. ಬದುಕಿದ್ದಾಗ ಆ ವ್ಯಕ್ತಿಯೊಂದಿಗೆ ಇದ್ದ ಬಾಂಧವ್ಯದಂತೆ, ಅವರ ನೆನಪಿನಲ್ಲಿ ನೀಡುವ ಆಹಾರವು ಆತ್ಮಕ್ಕೆ ತೃಪ್ತಿ ನೀಡಿ, ಸಕಾರಾತ್ಮಕ ಆಶೀರ್ವಾದಗಳನ್ನು ನೀಡುತ್ತದೆ. ಗರುಡ ಪುರಾಣದ ಪ್ರಕಾರ, ಈ ಸಂದರ್ಭದಲ್ಲಿ ನೀಡುವ ತೀರ್ಥ ಅಥವಾ ಪ್ರಸಾದದಿಂದ ಯಾವುದೇ ದುಷ್ಪರಿಣಾಮಗಳಾಗುವುದಿಲ್ಲ ಹಿರಿಯರು ಮತ್ತು ಬುದ್ಧಿಜೀವಿಗಳು ಕೂಡ ತಿಥಿ ಊಟಕ್ಕೆ ಹೋಗಿ ಬರುವುದರಿಂದ ಅನೇಕ ದೋಷಗಳು ನಿವಾರಣೆಯಾಗುತ್ತವೆ ಎಂದು ಹೇಳುವುದನ್ನು ಕೇಳುತ್ತೇವೆ. ಆದ್ದರಿಂದ, ತಿಥಿ ಊಟವು ಹಾನಿಕರವಲ್ಲ, ಬದಲಿಗೆ ದಿವಂಗತರಿಗೆ ಸಲ್ಲಿಸುವ ಗೌರವ ಮತ್ತು ಆತ್ಮಕ್ಕೆ ಸಕಾರಾತ್ಮಕ ಶಕ್ತಿಯನ್ನು ನೀಡುವ ನಂಬಿಕೆಯಾಗಿದೆ.ಎಂದು ಗುರೂಜಿ ಹೇಳಿದ್ದಾರೆ.

 

 

 

Follow Us