ಮೈಸೂರು ಜಿಲ್ಲೆಯಲ್ಲಿ ಟ್ರಕ್ಕನ್ನು ಜಮೀನು ಬಳಿ ಒಯ್ದು ಹಸಿಶುಂಠಿ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

Edited By:

Updated on: Oct 25, 2022 | 1:31 PM

ಪಿರಿಯಾಪಟ್ಟಣ ತಾಲ್ಲೂಕಿನ ನವಿಲೂರು ಗ್ರಾಮದಲ್ಲಿ ಕಳ್ಳರು ಲಾರಿಯೊಂದರಲ್ಲಿ ಬಂದು ಕದ್ದ ಶುಂಠಿಯನ್ನು ಅದರಲ್ಲಿ ಲೋಡ್ ಮಾಡುತ್ತಿರುವುದು ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ.

ಮೈಸೂರು ಭಾಗದ ರೈತರು ತಾವು ಬೆಳೆದ ಹಸಿ ಶುಂಠಿ (raw ginger) ಕಳುವಾಗುವ ಬಗ್ಗೆ ಪದೇಪದೆ ದೂರುತ್ತಿರುತ್ತಾರೆ. ಈ ಹಿನ್ನೆಲೆಯಲ್ಲೇ ಕೆಲ ಜಮೀನುಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿ ಕಳ್ಳರನ್ನು ಪತ್ತೆಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ. ಪಿರಿಯಾಪಟ್ಟಣ (Piriyapatna) ತಾಲ್ಲೂಕಿನ ನವಿಲೂರು ಗ್ರಾಮದಲ್ಲಿ ಕಳ್ಳರು ಲಾರಿಯೊಂದರಲ್ಲಿ (Lorry) ಬಂದು ಕದ್ದ ಶುಂಠಿಯನ್ನು ಅದರಲ್ಲಿ ಲೋಡ್ ಮಾಡುತ್ತಿರುವುದು ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. ಫುಟೇಜ್ ಆಧರಿಸಿ ಪೊಲೀಸರು ಕಳ್ಖರು ಮತ್ತು ಅವರ ನೆಟ್ ವರ್ಕ್ ಬಯಲಿಗೆಳೆಯುತ್ತಾರೋ ಅನ್ನೋದನ್ನು ಕಾದು ನೋಡಬೇಕು.

Follow Us
Web contact

TV9 Kannada

Read More