Jaggesh: ‘ಆ ಮಠ ನನ್ನ ಜಾತಿ ನೋಡಿಲ್ಲ, ಶೂದ್ರನಾದ ನನಗೆ ದೊಡ್ಡ ಸ್ಥಾನ ನೀಡಿದೆ’: ಜಗ್ಗೇಶ್​

| Updated By: ಮದನ್​ ಕುಮಾರ್​

Updated on: Oct 07, 2022 | 9:30 AM

ದೇವರ ಮೇಲೆ ತಮಗೆ ಇರುವ ಭಕ್ತಿ ಬಗ್ಗೆ ಜಗ್ಗೇಶ್​ ಅವರು ಅನೇಕ ಬಾರಿ ಹೇಳಿಕೊಂಡಿದ್ದುಂಟು. ಈಗ ಅವರು ಮತ್ತೊಮ್ಮೆ ಆ ಬಗ್ಗೆ ಪ್ರಸ್ತಾಪಿಸಿದ್ದಾರೆ.

ವಿಜಯ್​ ಪ್ರಸಾದ್​ ನಿರ್ದೇಶನದ ‘ತೋತಾಪುರಿ’ (Totapuri) ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ಸಿನಿಮಾದಲ್ಲಿನ ಕೆಲವು ಅಂಶಗಳ ಬಗ್ಗೆ ಜಗ್ಗೇಶ್​ ಮಾತನಾಡಿದರು. ಈ ವೇಳೆ ಅವರು ರಾಘವೇಂದ್ರ ಸ್ವಾಮಿಗಳ (Raghavendra Swamy) ಬಗ್ಗೆ ಹಾಗೂ ರಾಯರ ಮಠದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು. ‘ಶೂದ್ರನಾದ ನನಗೆ ಆ ಮಠ ಒಂದು ಅದ್ಭುತ ಸ್ಥಾನ ಕೊಟ್ಟಿದೆ. ಆ ಮಠ ನನ್ನ ಜಾತಿ ನೋಡಿಲ್ಲ. ನನ್ನಂಥವನನ್ನು ಕರೆದುಕೊಂಡು ಹೋಗಿ ಬೃಂದಾವನದ ಮುಂದೆ ಕೂರಿಸುತ್ತಾರೆ’ ಎಂದು ಜಗ್ಗೇಶ್​ (Jaggesh) ಹೇಳಿದ್ದಾರೆ. ಗುರು ರಾಯರ ಬಗ್ಗೆ ತಮಗೆ ಇರುವ ಭಕ್ತಿಯ ಕುರಿತು ಈ ಹಿಂದೆ ಕೂಡ ಅವರು ಅನೇಕ ಬಾರಿ ಹೇಳಿಕೊಂಡಿದ್ದುಂಟು.

Follow us on