ಬೆಳಗಾವಿಯ ಬಡಾವಣೆಯೊಂದರಲ್ಲಿ ಅಳವಡಿಸಿರುವ ಟ್ರಾನ್ಸ್ಫಾರ್ಮರ್ಗಳು ಮೃತ್ಯುಗೆ ಆಹ್ವಾನ ನೀಡುವಂತಿವೆ!
ಟಿಸಿ ಪಕ್ಕ ಓಪನ್ ಜಾಗ ಇರೋದ್ರಿಂದ ಮಕ್ಕಳು ಸಹಜವಾಗೇ ಅಲ್ಲಿ ಆಟವಾಡುತ್ತಿರುತ್ತವೆ. ಚೆಂಡು ಅಥವಾ ಮತ್ತೊಂದು ಟಿಸಿ ಬಳಿ ಹೋಗಿ ಮಕ್ಕಳು ಅದನ್ನು ಎತ್ತಿಕೊಳ್ಳುವ ಪ್ರಯತ್ನ ಮಾಡಿದರೆ, ಅಪಾಯ ತಪ್ಪಿದಲ್ಲ. ಬಾಲಕನೊಬ್ಬ ತನ್ನ ಅತಂಕವನ್ನು ವರದಿಗಾರನೊಂದಿಗೆ ತೋಡಿಕೊಳ್ಳುತ್ತಿದ್ದಾನೆ. ಜಾರ್ಜ್ ಸಾಹೇಬರೇ ಕಾಣಿಸ್ತಾ ಇದೆಯಾ?
ಬೆಳಗಾವಿ: ಸಿದ್ರಾಮಯ್ಯ ಸರ್ಕಾರ (Siddaramaiah government) ಘೋಷಿಸಿದ ಗೃಹಜ್ಯೋತಿ ಗ್ಯಾರಂಟಿ ಅಡಿ (Gruha Jyothi Scheme) ಮಾಸಿಕ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಆದು ಉಚಿತ, ಸರಿ ತಾನೇ? ಆದರೆ ಬೆಳಗಾವಿಯ ಹೆಸ್ಕಾಂ ಸಿಬ್ಬಂದಿ (HESCOM officials) ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ ವಿದ್ಯುತ್ ಜೊತೆ ಸಾವು ಕೂಡ ಉಚಿತ ಅನ್ನುತ್ತಿದ್ದಾರೆ! ಟಿವಿ9 ಕನ್ನಡ ವಾಹಿನಿ ಬೆಳಗಾವಿ ವರದಿಗಾರ ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯ ಪ್ರತ್ಯಕ್ಷ ಚಿತ್ರಣವನ್ನು ನೀಡಿದ್ದಾರೆ. ಈ ಬಡಾವಣೆಯಲ್ಲಿ 5-6 ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಲಾಗಿದ್ದು ಅವು ನೆಲದಿಂದ ಕೇವಲ ಒಂದು ಅಡಿಯಷ್ಟು ಮಾತ್ರ ಎತ್ತರದಲ್ಲಿವೆ ಮತ್ತು ಅವು ತೆರೆದುಕೊಂಡಿರುವ ಸ್ಥಿತಿಯಲ್ಲಿದ್ದು ಲೈವ್ವೈರ್ಗಳು ಹೊರಗಡೆ ಜೋತಾಡುತ್ತಿವೆ. ಟಿಸಿ ಪಕ್ಕ ಓಪನ್ ಜಾಗ ಇರೋದ್ರಿಂದ ಮಕ್ಕಳು ಸಹಜವಾಗೇ ಅಲ್ಲಿ ಆಟವಾಡುತ್ತಿರುತ್ತವೆ. ಚೆಂಡು ಅಥವಾ ಮತ್ತೊಂದು ಟಿಸಿ ಬಳಿ ಹೋಗಿ ಮಕ್ಕಳು ಅದನ್ನು ಎತ್ತಿಕೊಳ್ಳುವ ಪ್ರಯತ್ನ ಮಾಡಿದರೆ, ಅಪಾಯ ತಪ್ಪಿದಲ್ಲ. ಈ ಬಾಲಕ ತನ್ನ ಅತಂಕವನ್ನು ವರದಿಗಾರನೊಂದಿಗೆ ತೋಡಿಕೊಳ್ಳುತ್ತಿದ್ದಾನೆ. ಜಾರ್ಜ್ ಸಾಹೇಬರೇ ಕಾಣಿಸ್ತಾ ಇದೆಯಾ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು

ಸಂಬಂಧಿಯ ಡಿಎನ್ಎ ಜೊತೆ ಮೃತರ ಡಿಎನ್ಎ ಮ್ಯಾಚ್ ಆದರೆ ದೇಹ ಹಸ್ತಾಂತರ

ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್

Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
