ತಮ್ಮ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ನಡುವೆ ವೈಮನಸ್ಸು ಹುಟ್ಟಿರುವ ಸಂಗತಿಯನ್ನು ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಕೊನೆಗೂ ಅಂಗೀಕರಿಸಿದ್ದಾರೆ. ಅದು ಯಾಕೆ ಹುಟ್ಟಿದೆ ಅನ್ನೋದನ್ನು ಸಹ ಅವರು ಹೇಳಿದ್ದಾರೆ. ರಾಯಚೂರು (Raichur) ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಶ್ರೀರಾಮುಲು ಅವರು ರೆಡ್ಡಿ ಮತ್ತು ಪಕ್ಷದ ವರಿಷ್ಠರ ನಡುವೆ ತಾನು ಸೇತುವೆಯಾಗುವ ಕೆಲಸ ಮಾಡಿದಾಗ್ಯೂ ಅವರು ಯಾಕೆ ಮುನಿಸಿಕೊಂಡಿದ್ದಾರೆ, ಕೆಲಸದ ಭರದಲ್ಲಿ ರೆಡ್ಡಿಯವರನ್ನು ಭೇಟಿಯಾಗುವುದು ಸಾಧ್ಯವಾಗಿಲ್ಲ. ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುವುದಾಗಿ ಸಚಿವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ