ಸರ್ಜಾಪುರ ರಸ್ತೆಯಲ್ಲಿ ವಾಹನ ಸವಾರರು ಅನುಭವಿಸುತ್ತಿರುವ ಬವಣೆ; ಒಂದು ಪ್ರತ್ಯಕ್ಷ ವಿಡಿಯೋ ವರದಿ

ಅರುಣ್​ ಕುಮಾರ್​ ಬೆಳ್ಳಿ

Updated on: Jul 17, 2025 | 2:25 PM

ವಿಜಯನಗರದಿಂದ ಸರ್ಜಾಪುರ ಬರುವ ವ್ಯಕ್ತಿಯೊಬ್ಬರು ಇಂಧನದ ಜೊತೆ ಸಮಯ ಕೂಡ ವ್ಯರ್ಥವಾಗುತ್ತದೆ ಎಂದು ವರದಿಗಾರನಿಗೆ ಹೇಳಿದ್ದಾರೆ. ಇಂಧನ ಉಳಿಸುವ ದೃಷ್ಟಿಯಿಂದ ಅವರು ಫ್ಯುಯೆಲ್ ವಾಹನದ ಬದಲು ಎಲೆಕ್ಟ್ರಿಕ್ ವಾಹನ ಬಳಸಲಾರಂಭಿಸಿದ್ದಾರೆ. ಗ್ರೇಟರ್ ಬೆಂಗಳೂರು ಮತ್ತು ಬ್ರ್ಯಾಂಡ್ ಬೆಂಗಳೂರು ಪದಗಳು ಕೇಳಿಸಿಕೊಳ್ಳಲು ಚಂದ ಅನಿಸುತ್ತವೆ, ಅದರೆ ನಗರದ ವಾಸ್ತವಾಂಶ ಭಿನ್ನವಾಗಿದೆ.

ಬೆಂಗಳೂರು, ಜುಲೈ 17: ಸರ್ಜಾಪುರ ನಗರದ ಪಾಶ್ ಏರಿಯಾಗಳಲ್ಲಿ ಒಂದು. ಆದರೆ ಸರ್ಜಾಪುರ ಜಂಕ್ಷನ್ ಮಾತ್ರ ನಗರದ ನಿವಾಸಿಗಳಿಗೆ ಒಂದು ದುಸ್ವಪ್ನವಲ್ಲದೆ ಮತ್ತೇನೂ ಅಲ್ಲ. ಇತ್ತೀಚಿಗೆ ಸರ್ಜಾಪುರ ರಸ್ತೆಯ (Sarjapur road) ಮೂಲಕ ತನ್ನ ಕಚೇರಿಗೆ ಹೋಗುವ ಟೆಕ್ಕಿಯೊಬ್ಬರು ಟ್ರಾಫಿಕ್ಕಲ್ಲಿ ತಾವು ಅನುಭವಿಸುವ ಯಾತನೆಯ ವಿಡಿಯೋವನ್ನು ಸೋಶಿಯಲ್ ಮಿಡಿಯಾವೊಂದರಲ್ಲಿ ಶೇರ್ ಮಾಡಿದ್ದು ಅದು ವೈರಲ್ ಆಗಿದೆ. ನಮ್ಮ ಬೆಂಗಳೂರು ವರದಿಗಾರ ಸ್ಥಳಕ್ಕೆ ತೆರಳಿ ಫರ್ಸ್ಟ್ ಹ್ಯಾಂಡ್ ಮಾಹಿತಿಯನ್ನು ನೀಡಿದ್ದಾರೆ. ಸರ್ಜಾಪುರ ಜಂಕ್ಷನ್​ನಿಂದ ಪಣತ್ತೂರುಗೆ ಇರುವ ಅಂತರ ಸುಮಾರು 3 ಕಿಮೀ, ಅದರೆ ಅಷ್ಟು ಅಂತರವನ್ನು ಕ್ರಮಿಸಲು ಸುಮಾರು 8 ಕಿಮೀ ಕ್ರಮಿಸಲು ಬೇಕಾಗುವಷ್ಟು ಇಂಧನವನ್ನು ವ್ಯಯಿಸಬೇಕಾಗುತ್ತದೆ ಅಂತ ನಿಯಮಿತವಾಗಿ ಈ ರಸ್ತೆಯಲ್ಲಿ ಸಂಚರಿಸುವ ಟೆಕ್ಕಿಯೊಬ್ಬರು ಹೇಳಿದ್ದಾರಂತೆ.

ಇದನ್ನೂ ಓದಿ:  ಬೆಂಗಳೂರು ಸುರಂಗ ಮಾರ್ಗ: ಯೋಜನಾ ವರದಿಗೇ ಬೇಕು ಬರೋಬ್ಬರಿ 9.45 ಕೋಟಿ ರೂ!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.