ಊರಿನವರು ಬೇಡವೆಂದರೂ ಕೇಳಲಿಲ್ಲ; ಉಕ್ಕಿ ಹರಿವ ಹೊಳೆ ದಾಟುವಾಗ ಕೊಚ್ಚಿ ಹೋಯ್ತು ಟ್ರಕ್!
ತೆಲಂಗಾಣದ ಖಮ್ಮಂನಲ್ಲಿ ಹೊಳೆಯಲ್ಲಿ ಚಾಲಕನೊಂದಿಗೆ ಸರಕು ಸಾಗಣೆ ಲಾರಿ ಕೊಚ್ಚಿ ಹೋಗಿದೆ. ಖಮ್ಮಂನ ಜನ್ನಾರಂ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿದ್ದ ನಿಮ್ಮವಾಗು ಹೊಳೆಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಸರಕು ಸಾಗಣೆ ಲಾರಿಯೊಂದು ಅದರ ಚಾಲಕನೊಂದಿಗೆ ಕೊಚ್ಚಿ ಹೋಗಿದೆ. ಮೊಂತಾ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ.
ಖಮ್ಮಂ, ಅಕ್ಟೋಬರ್ 29: ತೆಲಂಗಾಣದಲ್ಲಿ (Telangana Flood) ಭಾರೀ ಮಳೆಯಾಗುತ್ತಿದೆ. ಎಂಕೂರು ಮಂಡಲದ ಜನ್ನಾರಂ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿದ್ದ ನಿಮ್ಮವಾಗು ಹೊಳೆಯಲ್ಲಿ ಗೂಡ್ಸ್ ಟ್ರಕ್ ಒಂದು ಅದರ ಚಾಲಕನೊಂದಿಗೆ ಕೊಚ್ಚಿ ಹೋಗಿದೆ. ಚಂಡಮಾರುತ ಮೊಂತಾದಿಂದ (Cyclone Montha) ಉಂಟಾದ ಭಾರೀ ಮಳೆಯಿಂದಾಗಿ ಪಲ್ಲಿಪಾಡು-ಎಂಕೂರು ಮಾರ್ಗದಲ್ಲಿರುವ ಹೊಳೆ ಇಂದು ಬೆಳಿಗ್ಗೆಯಿಂದ ತುಂಬಿ ಹರಿಯುತ್ತಿತ್ತು. ಸ್ಥಳೀಯರು ಹೋಗಬೇಡಿ ಎಂದು ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದೆ ಚಾಲಕ ಹೊಳೆಗೆ ಅಡ್ಡಲಾಗಿ ಇರುವ ಸೇತುವೆಯನ್ನು ದಾಟಲು ಪ್ರಯತ್ನಿಸಿದನು. ಆಗ ಟ್ರಕ್ ನೀರಿನಲ್ಲಿ ಕೊಚ್ಚಿಹೋಗಿದೆ. ಎನ್ಡಿಆರ್ಎಫ್ ಸಿಬ್ಬಂದಿ ಹುಡುಕಾಡಿದರೂ ಆ ಚಾಲಕನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Oct 29, 2025 10:16 PM