ಸ್ವಾಮೀಜಿಯನ್ನು ಬಂಧಿಸಿದರೆ ಸತ್ಯ ಹೊರಬರುತ್ತದೆ ಅನ್ನುತ್ತಾಳೆ ಚೈತ್ರಾ ಕುಂದಾಪುರ, ಸ್ವಾಮೀಜಿ ಯಾರು ಅಂತ ಪೊಲೀಸರು ಹೇಳಬೇಕು!

ಅರುಣ್​ ಕುಮಾರ್​ ಬೆಳ್ಳಿ

Updated on: Sep 14, 2023 | 10:45 AM

ಆಕೆ ಮತ್ತು ಇಂದಿರಾ ಕ್ಯಾಂಟೀನ್ ನಡುವೆ ಎತ್ತಣ ಸಂಬಂಧ ಅಂತ ಪೊಲೀಸರ ವಿಚಾರಣೆ ಬಳಿಕವೇ ಗೊತ್ತಾಗಬೇಕು. ಅಲ್ಲಾ ತಾಯಿ, ಪ್ರಕರಣದಲ್ಲಿ ಆರೋಪಿ ನಂ ವನ್ ನೀನೇ ಆಗಿದ್ದೀಯಲ್ಲ ಅಂತ ಕೇಳಿದರೆ, ಬೇಗ ಹೊರಬರುತ್ತೇನೆ ಅಂತ ಆತ್ಮವಿಶ್ವಾಸದಿಂದ ಹೇಳುತ್ತಾ ಒಳಗಡೆ ಹೋಗುತ್ತಾಳೆ.

ಬೆಂಗಳೂರು: ಜಟ್ಟಿಯೊಬ್ಬ ಚಿತ್ತಾದರೂ ಮೀಸೆ ತನ್ನ ಮಣ್ಣಾಗಿಲ್ಲ ಅಂದಿದ್ದನಂತೆ! ಹಾಗಿದೆ ಈಯಮ್ಮನ ವರಸೆ. ವಿಧಾನ ಸಭಾ ಚುನಾವಣೆಯಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ (Govinda Babu Pujari) ಟಿಕೆಟ್ ಕೊಡಿಸುವ ಭರವಸೆ ನೀಡಿ ರೂ. ಕೋಟಿ ಹಣ ಪೀಕಿ ವಂಚಿಸಿರುವ ಅರೋಪದಲ್ಲಿ ಅರೆಸ್ಟ್ ಆಗಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪರಳನ್ನು ಬೆಂಗಳೂರು ಸಿಸಿಬಿ ಅಧಿಕಾರಿಗಳು (CCB sleuths) ವಿಚಾರಣೆಗೆ ಕರೆ ತಂದಿದ್ದಾರೆ. ಸ್ಟೇಷನ್ ಒಳಗೆ ಹೋಗುವಾಗ ಆಕೆ ಆಡಿದ ಮಾತುಗಳನ್ನು ಕೇಳಿಸಿಕೊಳ್ಳಿ. ಯಾವುದೇ ಸ್ವಾಮೀಜಿ (Swamiji) ಅಂತೆ, ಅವರನ್ನು ಸೆರೆ ಹಿಡಿದರೆ ಸತ್ಯ ಬಯಲಿಗೆ ಬರುತ್ತೆ ಎಂದು ಹೇಳುವ ಚೈತ್ರಾ ಇಂದಿರಾ ಕ್ಯಾಂಟೀನ್ ಬಿಲ್ ಗಾಗಿ ನಡೆದಿರುವ ಷಡ್ಯಂತ್ರಕ್ಕೆ ಬಲಿಪಶುವಾಗಿದ್ದೇನೆ ಅನ್ನುತ್ತಾಳೆ. ಆಕೆ ಮತ್ತು ಇಂದಿರಾ ಕ್ಯಾಂಟೀನ್ ನಡುವೆ ಎತ್ತಣ ಸಂಬಂಧ ಅಂತ ಪೊಲೀಸರ ವಿಚಾರಣೆ ಬಳಿಕವೇ ಗೊತ್ತಾಗಬೇಕು. ಅಲ್ಲಾ ತಾಯಿ, ಪ್ರಕರಣದಲ್ಲಿ ಆರೋಪಿ ನಂ ವನ್ ನೀನೇ ಆಗಿದ್ದೀಯಲ್ಲ ಅಂತ ಕೇಳಿದರೆ, ಬೇಗ ಹೊರಬರುತ್ತೇನೆ ಅಂತ ಆತ್ಮವಿಶ್ವಾಸದಿಂದ ಹೇಳುತ್ತಾ ಒಳಗ್ಹೋಗುತ್ತಾಳೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.