ಶಾಲೆ ರಸ್ತೆ ಸರಿ ಇಲ್ಲ, ರಿಪೇರಿ ಮಾಡಿಸಿ ಸರ್: ಆಯುಕ್ತರಿಗೆ ಪುಟಾಣಿ ವಿದ್ಯಾರ್ಥಿ ಮನವಿಯ ವಿಡಿಯೋ ನೋಡಿ

Edited By:

Updated on: Dec 04, 2025 | 2:54 PM

ಉಡುಪಿ ನಗರ ವ್ಯಾಪ್ತಿಯ ಬಹುತೇಕ ರಸ್ತೆಗಳು ಹಾಳಾಗಿದ್ದು, ದುರಸ್ತಿಗೆ ಬಂದಿವೆ. ಅದರಲ್ಲಿ ತನ್ನ ಶಾಲೆಯ ರಸ್ತೆ ಸರಿಯಿಲ್ಲ, ರಿಪೇರಿ ಮಾಡಿಸಿ ಎಂದು ಪುಟಾಣಿ ವಿದ್ಯಾರ್ಥಿ ಖುದ್ದು ನಗರಸಭೆ ಆಯುಕ್ತರಿಗೆ ಮನವಿ ಮಾಡಿದ್ದಾನೆ. ಉಡುಪಿ ನಗರದಲ್ಲಿರುವ ಮುಕುಂದ ಕೃಪ ಶಾಲೆಯ ವಿದ್ಯಾರ್ಥಿ ನಗರಸಭೆ ಆಯುಕ್ತರ ಕಚೇರಿಗೆ ಭೇಟಿ ನೀಡಿ ರಸ್ತೆ ಹಾಳಾದ ಬಗ್ಗೆ ದೂರು ನೀಡಿದ್ದಾನೆ.

ಉಡುಪಿ, ಡಿಸೆಂಬರ್​ 04: ಉಡುಪಿ ನಗರ ವ್ಯಾಪ್ತಿಯ ಬಹುತೇಕ ರಸ್ತೆಗಳು ಹಾಳಾಗಿದ್ದು, ದುರಸ್ತಿ ಮಾಡಲೇಬೇಕಾದ ಸ್ಥಿತಿ ಇದೆ. ದಿನ ನಿತ್ಯ ಶಾಲೆಗೆ ಹೋಗುವ ಪುಟಾಣಿಗೂ ಇದು ಅರಿವಿಗೆ ಬಂದಂತಿದೆ. ಹೀಗಾಗಿ ಶಾಲೆಗೆ ಹೋಗುವ ರಸ್ತೆ ಸರಿಯಿಲ್ಲ, ರಿಪೇರಿ ಮಾಡುವಂತೆ ನಗರಸಭೆ ಆಯುಕ್ತ ಮಹಾಂತೇಶ್​​​ ಅವರಿಗೆ ತನ್ಮಯ್ ಕಾಮತ್​​ ಎಂಬ ಪುಟಾಣಿ ಹುಡುಗ ಮನವಿ ಮಾಡಿದ್ದಾನೆ. ಮುಕುಂದ ಕೃಪ ಶಾಲೆಯಲ್ಲಿ ಓದುತ್ತಿರುವ ತನ್ಮಯ್ ಕಾಮತ್​​, ಆಯುಕ್ತರನ್ನು ಭೇಟಿ ಮಾಡಿ ರಸ್ತೆ ಹದಗೆಟ್ಟ ಬಗ್ಗೆ ದೂರು ನೀಡಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Dec 04, 2025 02:53 PM
Follow Us
Prajwal Amin

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More