ಅಪ್ಪ ಅಮ್ಮನಿಂದ ಎಲ್ಲವನ್ನೂ ಕಸಿದು ಮನೆಯಿಂದ ಹೊರಹಾಕಿದ ಮಗ, ಜೀವನಾಂಶ ಕೇಳುತ್ತಿರುವ ವೃದ್ಧರು

ಅರುಣ್​ ಕುಮಾರ್​ ಬೆಳ್ಳಿ

Updated on: Aug 06, 2025 | 6:36 PM

ಮಗನಿಂದ ಜೀವನಾಂಶ ಬೇಕೆಂದು ಅಖೀಲಾ ಹೇಳುತ್ತಾರೆ. ಸಾಮಾನ್ಯವಾಗಿ ಡಿವೋರ್ಸ್ ಆದಾಗ ಗಂಡನಾದವನು ಹೆಂಡತಿಗೆ ಜೀವನಾಂಶ ಕೊಡಬೇಕೆಂದು ಕೋರ್ಟ್ ಹೇಳುತ್ತದೆ. ಇಲ್ಲಿ ತಂದೆ ತಾಯಿಗಳು ಮಗನಿಂದ ಜೀವನಾಂಶ ಕೇಳುತ್ತಿದ್ದಾರೆ. ಅವರು ಕೇಳುತ್ತಿರೋದ್ರಲ್ಲಿ ತಪ್ಪೇನೂ ಇಲ್ಲ. ಜೀವನವಿಡೀ ಮಕ್ಕಳಿಗಾಗಿ ಗಾಣದೆತ್ತಿನಂತೆ ದುಡಿಯುವ ತಂದೆತಾಯಿಗಳು ಮುಪ್ಪಿನ ಪ್ರಾಯದಲ್ಲಿ ಬಯಸುವುದಾದರೂ ಏನು? ಎರಡ್ಹೊತ್ತಿನ ಊಟ ಮತ್ತು ಮಲಗಲು ಒಂದಷ್ಟು ಜಾಗ.

ದಾವಣಗೆರೆ, ಆಗಸ್ಟ್ 6: ಇಂಥ ಮಕ್ಕಳೂ ಇರುತ್ತಾರೆ. ಈ ವೃದ್ಧ ದಂಪತಿಯ ಮಾತು ಕೇಳಿದರೆ, ಮನಸ್ಸು ವ್ಯಾಕುಲಗೊಳ್ಳುತ್ತದೆ. ಮಾಧ್ಯಮಗಳೊಂದಿಗೆ ಮಾತಾಡುತ್ತಿರುವ ಇವರ ಹೆಸರು ಅಖೀಲಾ (Akheela) ಮತ್ತು ಪಕ್ಕದಲ್ಲಿ ನಿಂತಿರುವ ಪತಿಯ ಹೆಸರು ಚಮನ್ ಸಾಬ್. ಜಿಲ್ಲೆಯ ಕೊಡಗಾನೂರುನವರಾಗಿರುವ ಇವರ ಏಕೈಕ ಪುತ್ರ ಅಕ್ರಂ ಇಬ್ಬರನ್ನೂ ಹೊರಹಾಕಿದ್ದಾನೆ. ತಮಗಿದ್ದ ಅಸ್ತಿಯನ್ನೆಲ್ಲ ಮಾರಿ ಮಗನಿಗೆ ಕೊಟ್ಟರೆ ಅವನು ತನ್ನ ಹೆಂಡತಿಯ ಜೊತೆ ಸೇರಿ ಕೊಡಬಾರದ ಕಷ್ಟವನ್ನೆಲ್ಲ ಕೊಟ್ಟಿದ್ದಾನೆ. ಹೆತ್ತ ತಾಯಿಯ ಮೇಲೆ ಕೈ ಮಾಡುತ್ತಾನೆಂದರೆ ಅಕ್ರಂನಲ್ಲಿ ಯಾವಮಟ್ಟಿಗೆ ದುಷ್ಟತನ ಮತ್ತ ನೀಚತನ ಮೇಳೈಸಿವೆ ಅಂತ ಅರ್ಥಮಾಡಿಕೊಳ್ಳಬಹುದು. ಮಧುಮೇಹ ಮತ್ತು ಬಿಪಿಯಿಂದ ಬಳಲುತ್ತಿರುವ ತಾವಿಬ್ಬರೂ ಸರ್ಕಾರದಿಂದ ಸಿಗುವ ₹ 4,000 ಮಾಶಾಸದಿಂದ ಹೇಗೇ ಬದುಕೋದು ಸಾಧ್ಯ ಎಂದು ಅಖೀಲಾ ಪ್ರಶ್ನಿಸುತ್ತಾರೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ಮನಕಲಕುವ ಘಟನೆ: ಪುತ್ರ ವೃದ್ಧಾಶ್ರಮ ಸೇರಿಸಿದ್ದಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.