‘ವರ್ತೂರು ಸಂತೋಷ್ ಬಿಗ್​ಬಾಸ್ ಸಂಭಾವನೆ ಸೇರುವುದು ಅನಾಥಾಶ್ರಮಕ್ಕೆ’

|

Updated on: Nov 15, 2023 | 10:45 PM

Varthur Santhosh: ವರ್ತೂರು ಸಂತೋಷ್​ ಬಿಗ್​ಬಾಸ್ ಮನೆ ಪ್ರವೇಶಿಸಿದಾಗಿನಿಂದಲೂ ಅವರ ವಿವಾದಗಳು ಅವರ ಬೆನ್ನು ಬಿದ್ದಿವೆ. ಇದರ ನಡುವೆ ಅವರ ಗೆಳೆಯ ಮಹೇಶ್ ಎಂಬುವರು ಮಾತನಾಡಿ, ವರ್ತೂರು ಸಂತೋಷ್​ರನ್ನು ಕೊಂಡಾಡಿರುವ ಜೊತೆಗೆ ಸಂತೋಷ್ ಅವರ ಸಂಭಾವನೆಯನ್ನು ಅನಾಥಾಶ್ರಮಕ್ಕೆ ನೀಡಿದ್ದಾರೆ ಎಂದಿದ್ದಾರೆ.

ವರ್ತೂರು ಸಂತೋಷ್ (Varthur Santhosh) ಬಿಗ್​ಬಾಸ್ ಮನೆ ಪ್ರವೇಶಿಸಿದ ಮೇಲೆ ಕೆಲವು ವಿವಾದಗಳು ಅವರ ಬೆನ್ನು ಬಿದ್ದಿವೆ. ಮೊದಲಿಗೆ ಹುಲಿ ಉಗುರು ಪ್ರಕರಣದಲ್ಲಿ ಬಿಗ್​ಬಾಸ್ ಮನೆಯಿಂದಲೇ ಜೈಲಿಗೆ ಹೋದ ವರ್ತೂರು ಸಂತೋಷ್, ಅಲ್ಲಿಂದ ನೇರವಾಗಿ ಬಿಗ್​ಬಾಸ್ ಮನೆಗೆ ಮರಳಿದರು. ಆ ನಂತರವೂ ಅಲ್ಲಿ ನೆಮ್ಮದಿಯಿಂದ ಇರಲಾರದೆ ಒದ್ದಾಡಿದರು. ಈಗ ವರ್ತೂರು ಸಂತೋಷ್​ರ ಖಾಸಗಿ ಜೀವನದ ಬಗ್ಗೆ ಕೆಲವು ಸುದ್ದಿಗಳು ಹರಿದಾಡುತ್ತಿವೆ. ವರ್ತೂರು ಸಂತೋಷ್ ಅವರ ಮಾವ, ಸಂತೋಷ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೀಗ ಸಂತೋಷ್​ರ ಗೆಳೆಯ ಮಹೇಶ್ ಎಂಬುವರು ಸಂತೋಷ್​ಗೆ ಸುತ್ತಿಕೊಂಡಿರುವ ವಿವಾದಗಳ ಬಗ್ಗೆ ಮಾತನಾಡಿರುವ ಜೊತೆಗೆ ವರ್ತೂರು ಸಂತೋಷ್​ಗೆ ಬಿಗ್​ಬಾಸ್​ನಿಂದ ಬರುವ ಸಂಭಾವನೆಯನ್ನು ಅವರು ಅನಾಥಾಶ್ರಮಕ್ಕೆ ನೀಡಿದ್ದಾರೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 10:43 pm, Wed, 15 November 23

Follow us on