ಪತಿ ದರ್ಶನ್​ಗಾಗಿ ಏನೇನು ತಂದಿದ್ದರು ವಿಜಯಲಕ್ಷ್ಮಿ? ಆ ವಸ್ತು ವಾಪಸ್ ಕಳಿಸಿದ್ದೇಕೆ?

|

Updated on: Sep 01, 2024 | 7:26 AM

Vijayalakshmi Darshan: ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ ಅವರನ್ನು ನೋಡಲು ಬಂದಿದ್ದ ಪತ್ನಿ ವಿಜಯಲಕ್ಷ್ಮಿ, ಪತಿಗಾಗಿ ಕೆಲವು ವಸ್ತುಗಳನ್ನು ತಂದಿದ್ದರು. ಅವುಗಳಲ್ಲಿ ಒಂದು ವಸ್ತುವನ್ನು ಪೊಲೀಸರು ವಾಪಸ್ ಕಳಿಸಿದ್ದಾರೆ.

ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್ ಅನ್ನು ಕಾಣಲು ಪತ್ನಿ ವಿಜಯಲಕ್ಷ್ಮಿ ದರ್ಶನ್ ನಿನ್ನೆ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. ಬರಬೇಕಾದರೆ ಪತಿಗಾಗಿ ಕೆಲವು ಅಗತ್ಯ ವಸ್ತುಗಳನ್ನು ಸಹ ತಂದಿದ್ದರು. ವಿಜಯಲಕ್ಷ್ಮಿ ಅವರನ್ನು ಒಳಗೆ ಬಿಡುವ ಮುನ್ನ ಪೊಲೀಸರು ಪರಿಶೀಲನೆ ಮಾಡಿ, ಅವರು ತಂದ ವಸ್ತುಗಳನ್ನು ಸಹ ಪರಿಶೀಲನೆ ಮಾಡಿದರು. ವಿಜಯಲಕ್ಷ್ಮಿ ಅವರ ಆಗಮನದ ಬಗ್ಗೆ ಮಾತನಾಡಿದ ಪ್ರಿಸನ್ ಡಿಐಜಿ ಶೇಷ, ‘ವಿಜಯಲಕ್ಷ್ಮಿ ಅವರು ದರ್ಶನ್​ಗಾಗಿ ಡ್ರೈ ಫ್ರೂಟ್ಸ್, ಸೋಪು, ಶಾಂಪು, ಪೇಸ್ಟುಗಳನ್ನು ತಂದಿದ್ದರು. ಬಟ್ಟೆಗಳನ್ನು ಸಹ ತಂದಿದ್ದರು. ಒಂದು ಬ್ಲಾಂಕೆಟ್ ತಂದಿದ್ದರು ಅದನ್ನು ನಾವು ವಾಪಸ್ ಕಳಿಸಿದ್ದೇವೆ. ಬೆಟ್​ಶೀಟ್, ಹಾಸಿಗೆಗಳನ್ನು ಹೊರಗಿನಿಂದ ಕೊಡುವಂತಿಲ್ಲ. ಜೈಲಿನ ಹಾಸಿಗೆ ಬೆಡ್​​ಶೀಟ್​ಗಳನ್ನೇ ಬಳಸಬೇಕಿರುತ್ತದೆ’ ಎಂದಿದ್ದಾರೆ. ಇಲ್ಲಿದೆ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on