ತಲ್ವಾರ್​ನಿಂದ ಬರ್ತಡೇ ಕೇಕ್ ಕತ್ತರಿಸಿದ ಯುವಕ: ಸಾಥ್ ನೀಡಿದ ರೌಡಿ ಶೀಟರ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 15, 2024 | 9:48 PM

ಯುವಕನೋರ್ವ ತನ್ನ ಜನ್ಮದಿನದ ಕೇಕ್​ನ್ನು ತಲ್ವಾರ್​ನಿಂದ ಕತ್ತರಿಸಿರುವಂತಹ ಘಟನೆ ‌ನಗರದ ಪೇಟಿ ಬಾವಡಿಯಲ್ಲಿ ನಡೆದಿದೆ. ಅಮನ್ ಲೋಣಿ ತಲ್ವಾರ್​ನಿಂದ ಕೇಕ್ ಕತ್ತರಿಸಿದ ಯುವಕ. ಅಮನ್ ಲೋಣಿಗೆ ರೌಡಿ ಶೀಟರ್ ಮಹ್ಮದ್ ಸಾಜೀದ್ ಇನಾಮದಾರ್ ಸಾಥ್ ನೀಡಿದ್ದಾನೆ. ಸದ್ಯ ಈ ಘಟನೆ ಚರ್ಚೆಗೆ ಗ್ರಾಸವಾಗಿದೆ.

ವಿಜಯಪುರ, ಜನವರಿ 15: ಯುವಕನೋರ್ವ ತನ್ನ ಜನ್ಮದಿನದ ಕೇಕ್​ನ್ನು ತಲ್ವಾರ್​ (Talwar)ನಿಂದ ಕತ್ತರಿಸಿರುವಂತಹ ಘಟನೆ ‌ನಗರದ ಪೇಟಿ ಬಾವಡಿಯಲ್ಲಿ ನಡೆದಿದೆ. ಅಮನ್ ಲೋಣಿ ತಲ್ವಾರ್​ನಿಂದ ಕೇಕ್ ಕತ್ತರಿಸಿದ ಯುವಕ. ಅಮನ್ ಲೋಣಿಗೆ ರೌಡಿ ಶೀಟರ್ ಮಹ್ಮದ್ ಸಾಜೀದ್ ಇನಾಮದಾರ್ ಸಾಥ್ ನೀಡಿದ್ದಾನೆ. ಸದ್ಯ ಈ ಘಟನೆ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಅಮನ್ ಲೋಣಿ ಹಾಗೂ ರೌಡಿ ಶೀಟರ್​ನ್ನು ಠಾಣೆಗೆ ಕರೆಸಿದ ಗೋಲಗುಂಬಜ್ ಪೊಲೀಸರು ವಿಚಾರಣೆ ಮಾಡಿದ್ದಾರೆ. ಇಬ್ಬರ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ. ಗೋಲಗುಂಬಜ್ ಪೊಲೀಸ್ ಠಾಣಾ‌ ವ್ಯಾಪ್ತಿ ಘಟನೆ ನಡಿದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Follow us on