ವಿಜಯಪುರ ಎಸ್ಬಿಐ ಬ್ಯಾಂಕ್ ದರೋಡೆ: ಸೊಲ್ಲಾಪುರದಲ್ಲಿ ಪತ್ತೆಯಾದ ಕಾರು, ಅದರಲ್ಲಿತ್ತು ಚಿನ್ನ!
ಚಡಚಣದ ಎಸ್ಬಿಐ ಬ್ಯಾಂಕ್ ದರೋಡೆಕೋರರ ಕಾರು ಸೊಲ್ಲಾಪುರದಲ್ಲಿ ಪತ್ತೆಯಾಗಿದ್ದು, ಆ ಕಾರಿನಲ್ಲಿ ಸ್ವಲ್ಪ ಚಿನ್ನಾಭರಣಗಳೂ ಇದ್ದವು ಎನ್ನಲಾಗಿದೆ. ಬೈಕೊಂದಕ್ಕೆ ಡಿಕ್ಕಿಯಾದ ನಂತರ ಕಾರಿನಲ್ಲಿದ್ದವರನ್ನು ಹಿಡಿಯಲು ಸ್ಥಳೀಯರು ಮುಂದಾದಾಗ ಅವರು ಪಿಸ್ತೂಲ್ ತೋರಿಸಿ ಹೆದರಿಸಿ ಪರಾರಿಯಾಗಿದ್ದಾರೆ. ಸದ್ಯ, ಚಡಚಣ ಪಟ್ಟಣದ ಎಸ್ಬಿಐ ಬ್ಯಾಂಕ್ ಮುಂದೆ ಜನ ಜಮಾಯಿಸುತ್ತಿದ್ದಾರೆ. ಬ್ಯಾಂಕ್ನಲ್ಲಿ ಠೇವಣಿ ಇಟ್ಟವರು ಹಾಗೂ ಗ್ರಾಹಕರು ಜಮಾವಣೆಯಾಗುತ್ತಿದ್ದಾರೆ.
ವಿಜಯಪುರ, ಸೆಪ್ಟೆಂಬರ್ 17: ವಿಜಯಪುರ ಜಿಲ್ಲೆಯ ಚಡಚಣದ ಎಸ್ಬಿಐ ಬ್ಯಾಂಕ್ನಲ್ಲಿ ದರೋಡೆ ಮಾಡಿ ಪರಾರಿಯಾಗಿರುವ ಗ್ಯಾಂಗ್ನ ಕಾರು ಸೊಲ್ಲಾಪುರದಲ್ಲಿ ಪತ್ತೆಯಾಗಿರುವುದಾಗಿ ವಿಜಯಪುರ ಪೊಲೀಸ್ ಮೂಲಗಳು ತಿಳಿಸಿವೆ. ಆ ಕಾರಿನಲ್ಲಿ ಸ್ವಲ್ಪ ಚಿನ್ನಾಭರಣಗಳು ಕೂಡ ಇದ್ದವು ಎನ್ನಲಾಗಿದೆ. ಸೊಲ್ಲಾಪುರದಲ್ಲಿ ಬೈಕೊಂದಕ್ಕೆ ಕಾರು ಡಿಕ್ಕಿಯಾಗಿದೆ. ಗ್ರಾಮಸ್ಥರು, ಸ್ಥಳೀಯರು ಕಾರಿನಲ್ಲಿದ್ದವರನ್ನು ಹಿಡಿಯಲು ಮುಂದಾಗಿದ್ದಾರೆ. ಅಷ್ಟರಲ್ಲಿ, ಪಿಸ್ತೂಲ್ ತೋರಿಸಿ ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ.
ಬ್ಯಾಂಕ್ ದರೋಡೆ ವಿವರಗಳಿಗೆ ಓದಿ: ವಿಜಯಪುರದ ಚಡಚಣದ ಎಸ್ಬಿಐ ಬ್ಯಾಂಕ್ನಲ್ಲಿ ದರೋಡೆ; ಮ್ಯಾನೇಜರನ್ನು ಕಟ್ಟಿಹಾಕಿ 8 ಕೋಟಿ ರೂ., 50 ಕೆಜಿ ಚಿನ್ನ ಕಳವು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Sep 17, 2025 08:05 AM
