ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Sri Siddeshwara Swamiji) ಕಳೆದ ರಾತ್ರಿ ಲಿಂಗೈಕ್ಯರಾಗಿದ್ದಾರೆ. ಅವರ ಅಂತಿಮ ದರ್ಶನ ಪಡೆಯಲು ರಾಜ್ಯದ ನಾನಾಭಾಗಗಳಿಂದ ಭಕ್ತಸಾಗರ ಹರಿದುಬರುತ್ತಿದ್ದು, ಎಲ್ಲಾ ಜಾತಿ-ಧರ್ಮದವರು ನಮನ ಸಲ್ಲಿಸುತ್ತಿದ್ದಾರೆ. ಶ್ರೀಗಳ ಹುಟ್ಟೂರಿನಲ್ಲಿ ಜಾತಿ, ಭೇದ ಮರೆತು ನಮನ ಸಲ್ಲಿಸಲಾಗುತ್ತಿದ್ದು, ಗ್ರಾಮದ ಹಲವು ಮುಸ್ಲಿಂ ಮನೆಗಳಲ್ಲಿ ಶ್ರೀಗಳ ಭಾವಚಿತ್ರಗಳು ಕಂಡುಬಂದಿವೆ. ಶ್ರೀಗಳ ಭಾವಚಿತ್ರಕ್ಕೆ ಮುಸ್ಲಿಂ ಕುಟುಂಬದಿಂದ ಪೂಜೆ ನಡೆದಿದ್ದು, ಮುಸ್ಲಿಮರ ಪ್ರಾರ್ಥನೆಯಲ್ಲಿ ಹಿಂದೂಗಳು ಕೂಡ ಭಾಗಿಯಾದರು. ಆ ಮೂಲಕ ಶ್ರೀಗಳ ತತ್ವದಂತೆ ಭಾವೈಕ್ಯತೆ ಸಂದೇಶ ಸಾರಲಾಯಿತು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Tue, 3 January 23