ಸ್ಯಾಂಡಲ್ವುಡ್ನ ಹಿರಿಯ ನಟಿ ಲೀಲಾವತಿ (Leelavathi) ಅವರು ಇಹಲೋಕ ತ್ಯಜಿಸಿ ಒಂದು ತಿಂಗಳು ಕಳೆದಿದೆ. ಪುತ್ರ ವಿನೋದ್ ರಾಜ್ ಅವರು ಒಂದು ತಿಂಗಳ ಪುಣ್ಯಸ್ಮರಣೆಯ ಕಾರ್ಯವನ್ನು ಇಂದು (ಜನವರಿ 5) ನೆರವೇರಿಸಿದ್ದಾರೆ. ತಾಯಿಗೆ ಇಷ್ಟವಾದ ಅಡುಗೆ ಮಾಡಿ ಸಮಾಧಿ ಮುಂದೆ ಇರಿಸಿ ಪೂಜೆ ಮಾಡಲಾಗಿದೆ. ಬಳಿಕ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲೀಲಾವತಿ ಅವರ ಸ್ಮಾರಕ (Leelavathi Smaraka) ನಿರ್ಮಾಣ ಮಾಡಲು ವಿನೋದ್ ರಾಜ್ ಆಲೋಚಿಸಿದ್ದಾರೆ. ಆ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ‘ಜನವರಿ 16ರ ನಂತರ, ಸಂಕ್ರಾಂತಿ ಹಬ್ಬದ ಬಳಿಕ ಅಮ್ಮಾವರ ಸ್ಮಾರಕದ ಕೆಲಸ ಶುರು ಮಾಡುತ್ತೇನೆ. ಭಗವಂತನ ದಯೆ, ನಿಮ್ಮೆಲ್ಲರ ಆಶೀರ್ವಾದಿಂದ ಆದಷ್ಟು ಬೇಗ ಅದನ್ನು ಮಾಡಿ ಮುಗಿಸುತ್ತೇನೆ’ ಎಂದು ವಿನೋದ್ ರಾಜ್ (Vinod Raj) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ