ಯಾರೇನೇ ಹೇಳಿದರೂ ಮಾರ್ಚ್ 22ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ನಿಲ್ಲಿಸಲಾಗದು: ವಾಟಾಳ್ ನಾಗರಾಜ್
ಇತ್ತೀಚಿಗೆ ಕೆಲವರು ಕನ್ನಡ ಪರ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತಾಡುತ್ತಿದ್ದಾರೆ, ತಾವು ಆಚರಿಸುತ್ತಿರುವ ಬಂದ್ ಅನ್ನು ನಾನ್ಸೆನ್ಸ್ ಅನ್ನುತ್ತಾರೆ, ಮಾತಾಡುವವರು ಈಗ ಏನಾಗಿದ್ದಾರೆ ಅಂತ ಗೊತ್ತು, ಅದರೆ ಮೊದಲು ಏನಾಗಿದ್ದರು ಅನ್ನೋದು ಸಹ ಚೆನ್ನಾಗಿ ಗೊತ್ತಿರುವುದರಿಂದ ಅದನ್ನು ತೆರದಿಡಬೇಕಾಗುತ್ತದೆ, 22 ರಂದು ನಡೆಯುವ ಬಂದ್ ಯಾರಿಂದಲೂ ನಿಲ್ಲಿಸಲಾಗದು ಎಂದು ನಾಗರಾಜ್ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗೊಂದಿಗೆ ಮಾತಾಡಿದ ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಯಾರೇನೇ ಹೇಳಿದರೂ ಮಾರ್ಚ್ 22 ರಂದು ಅಖಿಲ ಕರ್ನಾಟಕ ಬಂದ್ ನಡೆದೇ ನಡೆಯುತ್ತದೆ, ಅವತ್ತು ರಾಜ್ಯಾದ್ಯಂತ ಬಸ್ಗಳ ಓಡಾಟ ಸ್ಥಗಿತಗೊಳ್ಳಲಿದೆ, ಮತ್ತು ಬಿಎಂಆರ್ಸಿಎಲ್ ಮೆಟ್ರೋ ಪ್ರಯಾಣದ ದರ ಹೆಚ್ಚಿಸಿರುವುದರಿಂದ ರೈಲುಗಳ ಓಡಾಟವನ್ನು ಬಂದ್ ಮಾಡಲಾಗುವುದೆಂದು ಹೇಳಿದರು. ಕನ್ನಡ ಪರ ಸಂಘಟನೆಗಳು ಯಾಕೆ ಬಂದ್ ಕರೆ ನೀಡಿವೆ ಅನ್ನೋದಕ್ಕೆ ವಾಟಾಳ್ ಅವರು 7-8 ಕಾರಣಗಳನ್ನೂ ವಿವರಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಡಿಕೆಶಿ ಹೇಳಿಕೆಗೆ ಸಾರಾ ಗೋವಿಂದು ಉತ್ತರ
Loading...
Unable to load recommendations.
Follow Us