BSY in Chikmagalur; ಲಿಂಗಾಯತರ ವೋಟು ಬೇಕಿಲ್ಲ ಅಂತ ಸಿಟಿ ರವಿ ಹೇಳಿದ್ದರೆ ಅದು ತಪ್ಪು, ಎಲ್ಲ ಸಮುದಾಯಗಳ ವೋಟು ನಮಗೆ ಬೇಕು: ಬಿಎಸ್ ಯಡಿಯೂರಪ್ಪ

ರವಿ ಹಾಗೆ ಹೇಳಿದ್ದರೆ ಅ ಬಹಳ ತಪ್ಪು, ಬಿಜೆಪಿಗೆ ಎಲ್ಲ ವರ್ಗದ ವೋಟುಗಳು ಬೇಕು, ತಾನು ಅವರೊಂದಿಗೆ ಮಾತಾಡುವುದಾಗಿ ಯಡಿಯೂರಪ್ಪನವರು ಹೇಳಿದರು.

BSY in Chikmagalur; ಲಿಂಗಾಯತರ ವೋಟು ಬೇಕಿಲ್ಲ ಅಂತ ಸಿಟಿ ರವಿ ಹೇಳಿದ್ದರೆ ಅದು ತಪ್ಪು, ಎಲ್ಲ ಸಮುದಾಯಗಳ ವೋಟು ನಮಗೆ ಬೇಕು: ಬಿಎಸ್ ಯಡಿಯೂರಪ್ಪ
|

Updated on:Mar 16, 2023 | 4:32 PM

ಚಿಕ್ಕಮಗಳೂರು: ಬಿಜೆಪಿ ಶಾಸಕ ಸಿಟಿ ರವಿ (CT Ravi) ಲಿಂಗಾಯತರ (Lingayats) ವೋಟು ನಮಗೆ ಬೇಡ, ಅವರ ವೋಟುಗಳಿಲ್ಲದೆ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಅಂತ ಸಿಟಿ ರವಿ ಹೇಳಿದ್ದು ಪಕ್ಷದ ನಾಯಕರಿಗೆ ತೀವ್ರ ಇರುಸು ಮುರುಸು ಉಂಟು ಮಾಡಿದೆ. ಇಂದು ಚಿಕ್ಕಮಗಳೂರಲ್ಲಿ ಮಾಧ್ಯಮದವರು ರವಿ ಹೇಳಿದ್ದನ್ನು ಯಡಿಯೂರಪ್ಪನವರ (BS Yediyurappa) ಗಮನಕ್ಕೆ ತಂದಾಗ ಕೋಪವುಂಟಾದರೂ ತೋರ್ಪಡಿಸದೆ ಶಾಂತವಾದ ಸ್ವರದಲ್ಲಿ ಮಾತಾಡಿದ ಯಡಿಯೂರಪ್ಪನವರು, ಅವರು ಹಾಗೆ ಹೇಳಿದ್ದರೆ ಅ ಬಹಳ ತಪ್ಪು, ಬಿಜೆಪಿಗೆ ಎಲ್ಲ ವರ್ಗದ ವೋಟುಗಳು ಬೇಕು, ಅವರೊಂದಿಗೆ ತಾವು ಮಾತಾಡುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Thu, 16 March 23

Follow us