ನಿಮ್ಮ ಪತ್ನಿಗೆ ಈಡಿ ನೋಟೀಸ್ ಜಾರಿಮಾಡಿದೆಯಾ ಅಂದಾಗ ಸಿಎಂ ಸಿದ್ದರಾಮಯ್ಯಗೆ ಕೋಪವುಕ್ಕಿತು
ಸಿಎಂ ಪತ್ನಿ ಪಾರ್ವತಿಯವರಿಗೆ ಈಡಿ ನೋಟೀಸ್ ಏನಾದರೂ ನೀಡಿದೆಯಾ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡರು. ನೋಟೀಸ್ ಕೊಡುವ ವಿಚಾರ ನಿನ್ನೊಂದಿಗೇನಾದರೂ ಮಾತಾಡಿದ್ದಾರಾ? ಅವರ ಪರವಾಗಿ ನೀನ್ಯಾಕೆ ಮಾತಾಡೋದು ಎಂದು ಸಿದ್ದರಾಮಯ್ಯ ರೇಗಿದರು
ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸುತ್ತ್ತಿರುವ ಬಗ್ಗೆ ಬಹಳ ಎಚ್ಚರಿಕೆಯಿಂದ ಮಾತಾಡಿದರು. ಮುಡಾ ಪ್ರಕರಣದ ಸಮಗ್ರ ತನಿಖೆ ಮಾಡುವ ಬದಲು ಈಡಿ ಅಧಿಕಾರಿಗಳು ಕೇವಲ ಅವರ ಪತ್ನಿ ಪಾರ್ವತಿಯವರಿಗೆ ಸಂಬಂಧಿಸಿದ 14 ಸೈಟುಗಳ ತನಿಖೆ ನಡೆಸುವ ಉದ್ದೇಶ ಹೊಂದಿರುವಂತಿದೆ ಎಂದು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, ಈಡಿ ಒಂದು ತನಿಖಾ ಸಂಸ್ಥೆ, ಅದು ಏನೇನು ತನಿಖೆ ಮಾಡಬೇಕೆಂದಿದೆಯೋ ಮಾಡಲಿ ಎಂದರು..
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಚಿವ ಸಂಪುಟ ಪುನಾರಚನೆ ಇಲ್ಲ, ನಾಗೇಂದ್ರಗೆ ಸಚಿವ ಸ್ಥಾನ ನೀಡುವ ಬಗ್ಗೆಯಷ್ಟೇ ಚರ್ಚೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
Published on: Nov 13, 2024 01:37 PM
Loading...
Unable to load recommendations.
Follow Us