ನಟ ದರ್ಶನ್ ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆ ಆಗಿತ್ತು. ಇದರ ಮೂಲ ಬೆನ್ನತ್ತಿ ಹೋದ ಪೊಲೀಸರಿಗೆ ಸಿಕ್ಕಿದ್ದು ಮಾಜಿ ಉಪ ಮೇಯರ್ ಮೋಹನ್ ರಾಜ್ ಹೆಸರು. ಅವರೇ ದರ್ಶನ್ಗೆ ಈ ಹಣ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅವರಿಗೆ ನೋಟಿಸ್ ನೀಡಲಾಗಿತ್ತು. ಬಸವೇಶ್ವರ ನಗರ ಪೋಲೀಸ್ ಠಾಣೆಗೆ ಆಗಮಿಸಿದ ಮೋಹನ್ ರಾಜ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ‘12 ಗಂಟೆಗೆ ನೋಟಿಸ್ ಬಂದಿತ್ತು. ಮೂರು ಗಂಟೆಗೆ ಬರಬೇಕು ಎಂದಿತ್ತು. ನಾನು ಬಂದೆ. ಅವರು ಕೇಳಿದ ಎಲ್ಲಾ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ಕೊಟ್ಟಿದ್ದೇನೆ. ಎಲ್ಲವೂ ಕ್ಯಾಶ್ ವಿಚಾರಕ್ಕೆ ಸಂಬಂಧಿಸಿದ್ದು. ವೈಯಕ್ತಿಕ ವಿಚಾರಕ್ಕೆ ದರ್ಶನ್ ಅವರಿಂದ ಹಣ ಪಡೆದಿದಿದ್ದೆ. ಅದನ್ನು ವಾಪಸ್ ಕೊಟ್ಟಿದ್ದೇನೆ. ತನಿಖೆ ಹಂತದಲ್ಲಿ ಇರೋದ್ರಿಂದ ಹೆಚ್ಚು ವಿವರಿಸೋಕೆ ಸಾಧ್ಯವಿಲ್ಲ’ ಎಂದಿದ್ದಾರೆ ಮೋಹನ್ ರಾಜ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.