ಧರ್ಮಸ್ಥಳ ಪ್ರಕರಣದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಗೃಹ ಸಚಿವ ಪರಮೇಶ್ವರ್

Updated on: Aug 17, 2025 | 1:20 PM

ಧರ್ಮಸ್ಥಳ ಶವ ಶೋಧ ಪ್ರಕರಣ ಕ್ಲೈಮ್ಯಾಕ್ಸ್​ ಹಂತಕ್ಕ ಬಂದಿದೆ. ನಿನ್ನೆ ಶವ ಶೋಧಕ್ಕೆ ಬ್ರೇಕ್‌ ಹಾಕಿದ್ದ ಎಸ್‌ಐಟಿ, ಠಾಣೆಗೆ ದೂರುದಾರ ಮಾಸ್ಕ್‌ಮ್ಯಾನ್‌ನನ್ನ ಕರೆಸಿಕೊಂಡು ಕೋರ್ಟ್​​ ​ಗೆ ತಂದಿದ್ದ ಬುರುಡೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆದ್ರೆ ಎಸ್​ಐಟಿ ತನಿಖೆಯಲ್ಲಿ ಏನೇನು ಆಗಿದೆ ಎನ್ನುವುದೇ ನಿಗೂಢವಾಗಿದೆ. ಹೀಗಾಗಿ ಎಸ್​ಐಟಿ ತನಿಖೆಯ ಪ್ರಾಥಮಿಕ ಮಾಹಿತಿ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಇದರ ಬೆನ್ನಲ್ಲೇ ಇದುವರೆಗೂ ಧರ್ಮಸ್ಥಳ ಶವ ಶೋಧದ ಎಸ್​ಐಟಿ ತನಿಖೆಯ ವರದಿ ಬಗ್ಗೆ ನಾಳೆ(ಆಗಸ್ಟ್ 18) ಸದನದಲ್ಲಿ ವಿವರಿಸಲು ಗೃಹ ಸಚಿವ ಡಾ ಜಿ ಪರಮೇಶ್ವರ್ ಮುಂದಾಗಿದೆ

ಚಾಮರಾನಗರ, (ಆಗಸ್ಟ್ 17): ಧರ್ಮಸ್ಥಳ ಶವ ಶೋಧ ಪ್ರಕರಣ ಕ್ಲೈಮ್ಯಾಕ್ಸ್​ ಹಂತಕ್ಕ ಬಂದಿದೆ. ನಿನ್ನೆ ಶವ ಶೋಧಕ್ಕೆ ಬ್ರೇಕ್‌ ಹಾಕಿದ್ದ ಎಸ್‌ಐಟಿ, ಠಾಣೆಗೆ ದೂರುದಾರ ಮಾಸ್ಕ್‌ಮ್ಯಾನ್‌ನನ್ನ ಕರೆಸಿಕೊಂಡು ಕೋರ್ಟ್​​ ​ಗೆ ತಂದಿದ್ದ ಬುರುಡೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆದ್ರೆ ಎಸ್​ಐಟಿ ತನಿಖೆಯಲ್ಲಿ ಏನೇನು ಆಗಿದೆ ಎನ್ನುವುದೇ ನಿಗೂಢವಾಗಿದೆ. ಹೀಗಾಗಿ ಎಸ್​ಐಟಿ ತನಿಖೆಯ ಪ್ರಾಥಮಿಕ ಮಾಹಿತಿ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಇದರ ಬೆನ್ನಲ್ಲೇ ಇದುವರೆಗೂ ಧರ್ಮಸ್ಥಳ ಶವ ಶೋಧದ ಎಸ್​ಐಟಿ ತನಿಖೆಯ ವರದಿ ಬಗ್ಗೆ ನಾಳೆ(ಆಗಸ್ಟ್ 18) ಸದನದಲ್ಲಿ ವಿವರಿಸಲು ಗೃಹ ಸಚಿವ ಡಾ ಜಿ ಪರಮೇಶ್ವರ್ ಮುಂದಾಗಿದೆ.

ಈ ಸಂಬಂಧ ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ನಾಳೆ ಸದನದಲ್ಲಿ ಸಂಪೂರ್ಣ ಉತ್ತರ ಕೊಡಲು ಪ್ರಯತ್ನ ಮಾಡುತ್ತೇನೆ. ಯಾರೂ ಕೂಡ ಈ ಪ್ರಕರಣದಲ್ಲಿ ರಾಜಕಾರಣ ಮಾಡಬಾರದು. ಇದು ನ್ಯಾಯ ಮತ್ತು ಕಾನೂನಿಗೆ ಸಂಬಂಧಪಟ್ಟಂತಹ ವಿಚಾರವಾಗಿದೆ. ಯಾರೇ ದೂರು ಕೊಟ್ಟರೂ ಎಫ್​ಐಆರ್ ದಾಖಲಿಸಿ ತನಿಖೆ ಮಾಡೋದು ಸಹಜ. ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡಬಾರದು. ಎಸ್​​ಐಟಿ ತನಿಖೆ ನಡೆಯುತ್ತಿದೆ, ಅದು ಅಂತಿಮವಾಗಲಿ. ಮಧ್ಯಂತರ ವರದಿ ಬಗ್ಗೆ ಎಸ್​ಐಟಿ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ದೂರುದಾರ ಹೇಳಿದಂತೆ ಕೂರುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ಎಸ್​ಐಟಿ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More