Yet another plane crash in Karnataka: ಎರಡು ದಿನಗಳಲ್ಲಿ ಎರಡನೇ ದುರಂತ, ಚಾಮರಾಜನಗರದಲ್ಲಿ ನೆಲಕ್ಕಪ್ಪಳಿಸಿ ಚೂರುಚೂರಾದ ಲಘು ತರಬೇತಿ ವಿಮಾನ!

|

Updated on: Jun 01, 2023 | 2:07 PM

ಎರಡು ದಿನಗಳ ಹಿಂದಷ್ಟೇ ಬೆಳಗಾವಿ ಬಳಿ ತರಬೇತಿ ವಿಮಾನವೊಂದರಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಪೈಲಟ್ ಅದನ್ನು ತುರ್ತು ಭೂ ಸ್ಪರ್ಶ ಮಾಡಿಸಿದ್ದರು.

ಚಾಮರಾಜನಗರ: ತರಬೇತಿಗೆ ಬಳಸುವ ಕಿರಣ್ ಲಘು ವಿಮಾನವೊಂದು (Kiran Aircraft) ತರಬೇತಿಯ ಸಮಯದಲ್ಲಿ (training sorie) ನೆಲ್ಲಕ್ಕಪ್ಪಳಿಸಿದ ದುರ್ಘಟನೆ ಇಂದು ಮಧ್ಯಾಹ್ನ 12.0 ಗಂಟೆಗೆ ಜಿಲ್ಲೆಯ ಕೆ ಮೋಕಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಜೆಟ್ ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆಯೇ ಪ್ಯಾರಾಚೂಟ್ ಗಳೊಂದಿಗೆ (parachute) ಹೊರ ಜಿಗಿದು ಪ್ರಾಣವುಳಿಸಿಕೊಂಡಿದ್ದಾರೆ. ನೆಲಕ್ಕಪ್ಪಳಿಸಿದ ವಿಮಾನ ಚೂರುಚೂರಾಗಿ ಒಡೆದು ಬೆಂಕಿ ಹೊತ್ತಿಕೊಂಡು ಉರಿದಿದೆ. ಕೇವಲ ಎರಡು ದಿನಗಳ ಹಿಂದಷ್ಟೇ ಬೆಳಗಾವಿ ಬಳಿ ತರಬೇತಿ ವಿಮಾನವೊಂದರಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಪೈಲಟ್ ಅದನ್ನು ತುರ್ತು ಭೂ ಸ್ಪರ್ಶ ಮಾಡಿಸಿದ್ದರು. ಪೈಲಟ್ ಕಾಲಿಗೆ ಮಾತ್ರ ಗಾಯವಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on