AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ಅಡಿ ಎತ್ತರದಿಂದ ಪ್ಯಾರಾಚೂಟ್​ನಿಂದ ಸಮುದ್ರಕ್ಕೆ ಬಿದ್ದ ಮಹಿಳೆಯರು : ವೀಡಿಯೋ ವೈರಲ್​

ಪ್ಯಾರಾಸೈಲಿಂಗ್​ ವೇಳೆ ಹಗ್ಗ ತುಂಡಾಗಿ 100 ಅಡಿ ಎತ್ತರಿಂದ ಸಮುದ್ರಕ್ಕೆ ಬಿದ್ದ ಮಹಿಳೆಯರನ್ನು ರಕ್ಸಿಸಲಾಗಿದೆ.

100 ಅಡಿ ಎತ್ತರದಿಂದ ಪ್ಯಾರಾಚೂಟ್​ನಿಂದ ಸಮುದ್ರಕ್ಕೆ ಬಿದ್ದ ಮಹಿಳೆಯರು : ವೀಡಿಯೋ ವೈರಲ್​
ಪ್ಯಾರಾಚೂಟ್​ನಿಂದ ಬೀಳುತ್ತಿರುವ ದೃಶ್ಯ
TV9 Web
| Edited By: |

Updated on: Dec 21, 2021 | 5:32 PM

Share

ಪ್ರವಾಸಕ್ಕೆ ತೆರಳಿದ ವೇಳೆ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು ಸಾಮಾನ್ಯ, ಆದರೆ ಅದರ ಬಗ್ಗೆ ಜಾಗೃತೆ ವಹಸುವುದು ಕೂಡ ಅಷ್ಟೆ ಮುಖ್ಯ. ಪ್ಯಾರಾಸೈಲಿಂಗ್​ ಅಥವಾ ಪ್ಯಾರಾಚೂಟ್​ ಒಂದು ಉತ್ತಮ ಅನುಭವ ನೀಡುವ ಕ್ರೀಡೆ. ಆದರೆ ಈ ರೀತಿಯ ಸಾಹಸಗಳು ಕೆಲವೊಮ್ಮ ಜೀವಕ್ಕೇ ಅಪಾಯ ತಂದೊಡ್ಡಬಹದು. ಮುಂಬೈ ನಲ್ಲಿ ಪ್ಯಾರಾಸೈಲಿಂಗ್​ ಅಪಘಾತದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೀಡಿಯೋದಲ್ಲಿ ಇಬ್ಬರು ಮಹಿಳೆಯರು ಲೈಫ್​ ಜಾಕೆಟ್​ ಧರಿಸಿಕೊಂಡು ಸಮುದ್ರ ಮಧ್ಯೆ ಪ್ಯಾರಾಸೈಲಿಂಗ್​ ಮಾಡುತ್ತಿದ್ದರು. ಆದರೆ ಈ ವೇಳೆ ಹಗ್ಗ ತುಂಡಾಗಿ 100 ಅಡಿ ಎತ್ತರದಿಂದ ಇಬ್ಬರೂ ಮಹಿಳೆಯರು ಸಮುದ್ರಕ್ಕೆ ಬೀಳುತ್ತಾರೆ. ಅದೃಷ್ಟವಶಾತ್​ ಲೈಫ್​ ಜಾಕೆಟ್​ ನಿಂದ ಮಹಿಳೆಯರಿಬ್ಬರೂ ಸಮುದ್ರದ ನೀರಿನಲ್ಲಿ ಮುಳುಗಲಿಲ್ಲ. ತಕ್ಷಣವೇ ರಕ್ಷಣಾ ಸಿಬ್ಬಂದಿ ಸಮುದ್ರಕ್ಕೆ ಜಿಗಿದು ಮಹಿಳೆಯರನ್ನು ರಕ್ಷಿಸಿದ್ದಾರೆ. ಸದ್ಯ ಪ್ಯಾರಾಚೂಟ್​ ಹಗ್ಗ ತುಂಡಾಗಿ ಬೀಳುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 

ಪ್ಯಾರಾಸೈಲಿಂಗ್​ ನಿಂದಾದ ಅನಾಹುತಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಹಗ್ಗ ತುಂಡಾಗಿ ಉತ್ಸಾಹದಿಂದ ಬಂದ ಪ್ರವಾಸಿಗರು ಅನಾಹುತಕ್ಕೆ ಸಿಲುಕಿದ ಉದಾಹರಣೆಗಳು ಸಾಕಷ್ಟಿವೆ. ಆದರೂ ಈ ರೀತಿಯ ಸಾಹಸ ಕ್ರೀಡೆಗಳ ನಿರ್ವಾಹಕರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಜೋರಾಗಿಯೇ ಕೇಳಿಬರುತ್ತದೆ. ಲೈಫ್​ ಜೆಟ್​ ಸೇರಿದಂತೆ ಹಲವು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ. ಆದರೂ ಅನಾಹುತಗಳ ಸಂಖ್ಯೆ ಏರುತ್ತಲೇ ಇದೆ . ಈ ನಡುವೆ ಸರ್ಕಾರ ಜಲ ಕ್ರೀಡೆ ಸೇರಿದಂತೆ ಪ್ಯಾರಾಸೈಲಿಂಗ್​ನಂತಹ ಸಾಹಸ ಕ್ರೀಡಗಳಲ್ಲಿ ಹೆಚ್ಚಿನ ಕ್ರಮಗಳನ್ನು ಅನುಸರಿಸಬೇಕು ಎನ್ನುವ ವಿಧೇಯಕ  ಮಂಡನೆಗೆ ತಯಾರಿ ನಡೆಸಿದೆ. ಕಾಯಿದೆಯ ಉಲ್ಲಂಘನೆಯಾದರೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸುವುದಾಗಿಯೂ ಸರ್ಕಾರ ನಿಯಮ ಜಾರಿಗೆ ತರಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:

Smriti Irani: ನಿಮ್ಮ ಅಮ್ಮನೂ ಹೀಗೇ ಮಾಡ್ತಿದ್ರ?; ತಾಯಿ ಕಳಿಸಿದ ಪೋಸ್ಟ್ ಶೇರ್ ಮಾಡಿದ ಸಚಿವೆ ಸ್ಮೃತಿ ಇರಾನಿ

Follow Us
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ