ಚಿಕ್ಕಮಗಳೂರು, ಡಿಸೆಂಬರ್ 26: ದತ್ತಪೀಠಕ್ಕೆ (Dattapeeta) ತೆರಳುತ್ತಿದ್ದ ಯುವಕರ ಗುಂಪು ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದ ದರ್ಗಾದಲ್ಲಿ (Durga) ದಾಂಧಲೆ ನಡೆಸಿದೆ. ಗೋರಿಗಳ ಮೇಲೆ ಹೊದಿಸಿದ್ದ ಬಟ್ಟೆ ತೆಗೆದು ಮತ್ತು ಅಲ್ಲಿದ್ದ ವಸ್ತುಗಳನ್ನು ಹೊರಕ್ಕೆ ಎಸೆದು ದಾಂಧಲೆ ನಡೆಸಿದೆ. ಈ ವೇಳೆ ಪ್ರಶ್ನಿಸಲು ಹೋದ ಪೊಲೀಸರ ಮೇಲೂ ಯುವಕರ ಗುಂಪು ಹಲ್ಲೆ ನಡೆಸಲು ಯತ್ನಿಸಿದೆ. ಈ ಘಟನೆಯನ್ನು ಕಂಡ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗುಂಪು ಕಾಲ್ಕಿತ್ತಿದೆ. ಶಾಂತವೇರಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಯುವಕರ ಗುಂಪು ಶಿವಮೊಗ್ಗ ಜಿಲ್ಲೆ ನೋಂದಣಿ ವಾಹನದಲ್ಲಿ ಬಂದಿದ್ದರು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Published On - 12:24 pm, Tue, 26 December 23