ಪಪುವಾ ನ್ಯೂಗಿನಿಯಾದ ಟೋಕ್ ಪಿಸಿನ್ ಭಾಷೆಯಲ್ಲಿ ತಮಿಳಿನ ತಿರುಕ್ಕುರಳ್ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿರುಕ್ಕುರಳ್ ಪುಸ್ತಕದ ಟೋಕ್ ಪಿಸಿನ್ ಅನುವಾದಿತ ಕೃತಿಯನ್ನು ಬಿಡುಗಡೆ ಮಾಡಿದರು.

ಪಪುವಾ ನ್ಯೂಗಿನಿಯಾದ ಟೋಕ್ ಪಿಸಿನ್ ಭಾಷೆಯಲ್ಲಿ ತಮಿಳಿನ ತಿರುಕ್ಕುರಳ್ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ

Updated on: May 22, 2023 | 10:59 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು  ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿರುಕ್ಕುರಳ್ ಪುಸ್ತಕದ ಟೋಕ್ ಪಿಸಿನ್ ಅನುವಾದಿತ ಕೃತಿಯನ್ನು ಬಿಡುಗಡೆ ಮಾಡಿದರು. ಟೋಕ್ ಪಿಸಿನ್ ಪಪುವಾ ನ್ಯೂಗಿನಿಯಾದ ಸ್ಥಳೀಯ ಮತ್ತು ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಪಪುವಾ ನ್ಯೂಗಿನಿಯಾದಲ್ಲಿ ಟೋಕ್ ಪಿಸಿನ್ ಭಾಷೆಯಲ್ಲಿ ತಿರುಕ್ಕುರಳ್ ಪುಸ್ತಕವನ್ನು ಬಿಡುಗಡೆ ಮಾಡಿದ ಗೌರವ ಪ್ರಧಾನಿ ಜೇಮ್ಸ್ ಮರಾಪೆ ಮತ್ತು ನನಗೆ ಸಿಕ್ಕಿದೆ ಎಂದು ಪುಸ್ತಕ ಬಿಡುಗಡೆ ಮಾಡಿದ ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ನ್ಯೂ ಬ್ರಿಟನ್ ಪ್ರಾಂತ್ಯದ ಗವರ್ನರ್ ಮತ್ತು ಸುಭಾ ಸಸೀಂದ್ರನ್ ಅವರು ತಿರುಕ್ಕುರಳ್ ಅನ್ನು ಟೋಕ್ ಪಿಸಿನ್ ಆಗಿ ಭಾಷಾಂತರಿಸಲು ಅವರ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ. ಗವರ್ನರ್ ಸಸೀಂದ್ರನ್ ಅವರು ತಮ್ಮ ಶಾಲಾ ಶಿಕ್ಷಣವನ್ನು ತಮಿಳಿನಲ್ಲಿ ಮಾಡಿದ್ದರು ಮತ್ತು ಸುಭಾ ಸಸೀಂದ್ರನ್ ಅವರು ಗೌರವಾನ್ವಿತ ಭಾಷಾಶಾಸ್ತ್ರಜ್ಞರಾಗಿದ್ದಾರೆ. ತಿರುಕ್ಕುರಳ್ ಪುಸ್ತಕವನ್ನು ತಮಿಳಿನಿಂದ ಗುಜರಾತಿ ಭಾಷೆಗೆ ಕೂಡ ಅನುವಾದಿಸಲಾಗಿದೆ.

ಮತ್ತಷ್ಟು ಓದಿ: Modi Papua New Guinea Visit: ಪರಿಸರ ಸಂರಕ್ಷಣೆ, ಹವಾಮಾನ ವೈಪರೀತ್ಯದ ಬಗ್ಗೆ ಪ್ರಧಾನಿ ಮೋದಿ ಮಾತು

ನೀತಿಶಾಸ್ತ್ರದ ಒಂದು ದೊಡ್ಡ ಕೆಲಸ
ವಾಸ್ತವವಾಗಿ ತಿರುಕ್ಕುರಳ್ ತಮಿಳು ಭಾಷೆಯಲ್ಲಿ ಬರೆಯಲಾದ ಅತ್ಯಂತ ಪ್ರಾಚೀನ ಕಾವ್ಯ ರಚನೆಯಾಗಿದೆ. ಇದರ ಕರ್ತೃ ತಿರುವಳ್ಳುವರ್ ಅದನ್ನು ಕ್ರಿಸ್ತನ ಎರಡನೇ ಶತಮಾನದಿಂದ ಆರನೇ ಶತಮಾನದ ನಡುವೆ ಬರೆದಿರಬಹುದು ಎಂದು ಅಂದಾಜಿಸಲಾಗಿದೆ.

ಇಂದು (ಸೋಮವಾರ) ಪಪುವಾ ನ್ಯೂಗಿನಿಯಾದಲ್ಲಿ ನಡೆದ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ (ಎಫ್‌ಐಪಿಐಸಿ) ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.

ಈ ವೇಳೆ, ಭಾರತವು ಇಡೀ ಜಗತ್ತನ್ನು ಒಂದೇ ಕುಟುಂಬ ಎಂದು ಪರಿಗಣಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಮೂಲ ಮಂತ್ರ ಒಂದೇ ಕುಟುಂಬ, ಒಂದು ಭವಿಷ್ಯ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಭಾರತವು ಅನೇಕ ದೇಶಗಳಿಗೆ ಸಹಾಯ ಮಾಡಿದೆ ಎಂದು ಅವರು ಹೇಳಿದರು.
ಭಾರತವು ಪಪುವಾ ನ್ಯೂಗಿನಿಯಾದ ವಿಶ್ವಾಸಾರ್ಹ ಪಾಲುದಾರ ಎಂದು ಅವರು ಹೇಳಿದರು.

ತಿರುಕ್ಕುರಳ್, ನೀತಿಶಾಸ್ತ್ರ, ರಾಜಕೀಯ ಮತ್ತು ಆರ್ಥಿಕ ವಿಷಯಗಳು ಮತ್ತು ಪ್ರೀತಿಯ ದ್ವಿಪದಿಗಳ ಸಂಗ್ರಹವನ್ನು ಕವಿ ತಿರುವಳ್ಳುವರ್ ಬರೆದಿದ್ದಾರೆ.
ತಿರುಕ್ಕುರಳ್ ಸಾಹಿತ್ಯದ ಮೇರುಕೃತಿ ಮಾತ್ರವಲ್ಲ, ಸಾಮಾನ್ಯ ಜೀವನಕ್ಕೆ ಅಸಾಧಾರಣ ಮಾರ್ಗದರ್ಶಿಯಾಗಿದೆ. ಇದು ನಮಗೆ ಸದಾಚಾರದ ಮಾರ್ಗವನ್ನು ತೋರಿಸುತ್ತದೆ ಮತ್ತು ನಿಸ್ವಾರ್ಥ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ. ತಿರುಕ್ಕುರಳ್ ಇಂದಿಗೂ ಪ್ರಸ್ತುತವಾಗಿದೆ ಮತ್ತು ಪ್ರಸ್ತುತ ಪೀಳಿಗೆಗೆ ಸ್ಫೂರ್ತಿಯಾಗಬಲ್ಲದು ಎಂದು ಅವರು ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:58 am, Mon, 22 May 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us