Sign In

By signing in or creating an account, you agree with Associated Broadcasting Company's Terms & Conditions and Privacy Policy.

Basavaraj Yaraganavi

Basavaraj Yaraganavi

Author - TV9 Kannada

basavaraj.yaraganavi@tv9.com
CET ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು: ಆಕ್ರೋಶ

CET ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು: ಆಕ್ರೋಶ

ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿ ತೆಗೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಘಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವಿವಿಧ ಬ್ರಾಹ್ಮಣ ಸಂಘಗಳು ತೀವ್ರವಾಗಿ ಖಂಡಿಸಿವೆ. ಗಾಯತ್ರಿ ದೀಕ್ಷೆ ಪಡೆದ ವಿದ್ಯಾರ್ಥಿಗಳಿಗೆ ಈ ಕೃತ್ಯ ಅವಮಾನಕಾರಿ ಎಂದು ಹೇಳಲಾಗಿದೆ. ಘಟನೆ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಶಿವಮೊಗ್ಗ: ಮಠದಲ್ಲಿ 300 ಕೋಟಿ ರೂ ದರೋಡೆಗೆ ಸ್ಕೇಚ್, ಸಿಕ್ಕಿದ್ದು 50 ಸಾವಿರ ರೂ, 12 ಜನರ ಬಂಧನ

ಶಿವಮೊಗ್ಗ: ಮಠದಲ್ಲಿ 300 ಕೋಟಿ ರೂ ದರೋಡೆಗೆ ಸ್ಕೇಚ್, ಸಿಕ್ಕಿದ್ದು 50 ಸಾವಿರ ರೂ, 12 ಜನರ ಬಂಧನ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮಹಿಷಿ ಉತ್ತರಾಧಿ ಮಠದಲ್ಲಿ ಕೋಟ್ಯಂತರ ರೂ. ಹಣವಿದೆ ಎಂಬ ಸುಳ್ಳು ಸುದ್ದಿಯನ್ನು ನಂಬಿ 12 ದರೋಡೆಕೋರರು ದರೋಡೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಆದರೆ ಅವರಿಗೆ ಕೇವಲ 50 ಸಾವಿರ ರೂ ಮಾತ್ರ ಸಿಕ್ಕಿದ್ದು, ಮಾಳೂರು ಪೊಲೀಸರು ಎಲ್ಲ 12 ಜನರನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಈದ್ಗಾ ಮೈದಾನ ವಿವಾದ ಕೊನೆಗೂ ಸುಖಾಂತ್ಯ: ನಿರ್ಬಂಧ ತೆರವು, ಸಾರ್ವಜನಿಕರಿಗೆ ಮುಕ್ತ ಪ್ರವೇಶ

ಶಿವಮೊಗ್ಗ ಈದ್ಗಾ ಮೈದಾನ ವಿವಾದ ಕೊನೆಗೂ ಸುಖಾಂತ್ಯ: ನಿರ್ಬಂಧ ತೆರವು, ಸಾರ್ವಜನಿಕರಿಗೆ ಮುಕ್ತ ಪ್ರವೇಶ

ಶಿವಮೊಗ್ಗದ ಈದ್ಗಾ ಮೈದಾನದ ವಿವಾದ ಕೊನೆಗೂ ಅಂತ್ಯವಾಗಿದೆ. ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳ ನಡುವಿನ ಜಗಳದಿಂದಾಗಿ 10 ದಿನಗಳ ಕಾಲ ಮೈದಾನ ನಿರ್ಬಂಧ ಹೇರಲಾಗಿತ್ತು. ಎಸ್ಪಿ ಮತ್ತು ಡಿಸಿ ಅವರ ಮಧ್ಯಸ್ಥಿಕೆಯಿಂದ ವಿವಾದ ಪರಿಹಾರವಾಗಿದ್ದು, ಇದೀಗ ಮೈದಾನ ಸಾರ್ವಜನಿಕರು ಸೇರಿದಂತೆ ವ್ಯಾಪಾರಸ್ಥರಿಗೆ ಮುಕ್ತವಾಗಿದೆ.

ದಾವಣಗೆರೆಯಲ್ಲಿ ಹೃದಯ ವಿದ್ರಾವಕ ಘಟನೆ: ತನ್ನಿಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆಗೆ ಶರಣು

ದಾವಣಗೆರೆಯಲ್ಲಿ ಹೃದಯ ವಿದ್ರಾವಕ ಘಟನೆ: ತನ್ನಿಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆಗೆ ಶರಣು

ಪತ್ನಿ ಸಾವಿನ ನೋವಿನಲ್ಲೇ ಬದುಕಲು ಆಗದೇ ಪತಿ ಸಹ ದುರಂತ ಸಾವು ಕಂಡಿದ್ದಾರೆ. ತನ್ನಿಬ್ಬರು ಮಕ್ಕಳ್ಳನ್ನು ಕೊಂದು ಬಳಿಕ ತಂದೆ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ನೇಣಿಗೆ ಶರಣಾಗುವ ಮೊದಲು ರಕ್ತದಲ್ಲಿ ಐಲವ್​ ಯು ಹೇಮಾ ಎಂದು ಪತ್ನಿಯ ಹೆಸರು ಗೋಡೆ ಮೇಲೆ ಬರೆದಿದ್ದಾರೆ. ಹೃದಯ ವಿದ್ರಾವಕ‌ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಉದಯ್​ ಏಳು ಪುಟಗಳ ಪತ್ರವೊಂದನ್ನು ಬರೆದಿಟ್ಟು ಸಾವಿನ ಹಾದಿ ತುಳಿದಿದ್ದಾರೆ.

ED Raid: ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ ಕೊಟ್ಟಿದ್ದ ಪ್ರಕರಣ,  ಶೋಭಾ ಸೇರಿ ಮೂವರ ಮೇಲೆ ಇಡಿ ದಾಳಿ

ED Raid: ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ ಕೊಟ್ಟಿದ್ದ ಪ್ರಕರಣ, ಶೋಭಾ ಸೇರಿ ಮೂವರ ಮೇಲೆ ಇಡಿ ದಾಳಿ

ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ 8ಕ್ಕೂ ಹೆಚ್ಚಿನ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಶೋಭಾ ನಿವಾಸದ ಮೇಲೆ ಇಂದು ದಾಳಿ ನಡೆದಿದೆ. ಬ್ಯಾಂಕ್​ನ ವಾಹನ ಚಾಲಕನಾಗಿದ್ದ ಶಿವಕುಮಾರ್ ಮನೆ ಮೇಲೂ ಕೂಡ ದಾಳಿ ನಡೆಸಲಾಗಿದೆ. 2 ಕಡೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. 2014ರ ಜೂನ್​ನಲ್ಲಿ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಈ ಹಗರಣ ನಡೆದಿತ್ತು.

108ರ ಪೈಲ್ವಾನ್ ಕರಿಯಪ್ಪ, 98 ವರ್ಷದ ಗೋಪಮ್ಮ: 60ನೇ ವಾರ್ಷಿಕೋತ್ಸದ ನಿಮಿತ್ತ ಮತ್ತೊಮ್ಮೆ ಮದ್ವೆ!

108ರ ಪೈಲ್ವಾನ್ ಕರಿಯಪ್ಪ, 98 ವರ್ಷದ ಗೋಪಮ್ಮ: 60ನೇ ವಾರ್ಷಿಕೋತ್ಸದ ನಿಮಿತ್ತ ಮತ್ತೊಮ್ಮೆ ಮದ್ವೆ!

ನೆನಪಿನ ಬುತ್ತಿಯೇ ಸುಂದರ... ಅಲ್ಲಿ ಸಿಹಿ ಕಹಿಗಳಿರುತ್ತವೆ. ಆದರೆ, ಸಿಹಿ ನೆನಪುಗಳನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವ ಹಿತವೇ ಬೇರೆ. ಅದರಲ್ಲೂ ಕಳೆದು ಹೋದ ದಿನಗಳ ಸಂತೋಷದ ಕ್ಷಣವನ್ನು ಮರುಸೃಷ್ಟಿಸುವುದು ಇನ್ನಷ್ಟು ಸಿಹಿ. ಈಗ ಹಳೆ ಕ್ಷಣಗಳನ್ನು ಮರು ಸೃಷ್ಟಿಸುವುದು ಟ್ರೆಂಡ್ ಆಗಿದೆ. ಅದರಂತೆ ಶಿವಮೊಗ್ಗದಲ್ಲಿ ವೃದ್ಧ ದಂಪತಿ ಮತ್ತೊಮ್ಮೆ ಮದುವೆಯಾಗುವ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದಾರೆ. ಜನರ ಬದುಕಿನಲ್ಲಿ ಸದಾ ಸವಿಯಾಗಿ ಇರುವ ದಿನಗಳಲ್ಲಿ ಮದುವೆಯ ಕ್ಷಣವೂ ಒಂದು. ವರ್ಷಗಳುರುಳಿದಂತೆ ಮನೆಯವರು, ಸ್ನೇಹಿತರೊಂದಿಗೆ ಕಳೆದಿದ್ದ ಆ ಸುಂದರ ಕ್ಷಣದ ಫೋಟೋ, ವಿಡಿಯೋಗಳನ್ನು ಕಂಡಾಗ ಮನಸ್ಸು ಪುಳಕಗೊಳ್ಳುತ್ತದೆ. ಹೀಗಾಗಿ, ಮಕ್ಕಳು, ಮೊಕ್ಕಳು, ಸಂಬಂಧಿಕರು ಸೇರಿ 108 ವರ್ಷದ ಪೈಲ್ವಾನ್ ದಂಪತಿಗೆ ಮತ್ತೊಮ್ಮೆ ಮದುವೆ ಮಾಡಿಸಿ 60ನೇ ವರ್ಷದ ವಿವಾಹೋತ್ಸವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಈ ಮೂಲಕ ಈ ಹಿಂದಿನ ದಿನದ ನೆನಪನ್ನು ಮರುಸೃಷ್ಟಿಸಿ ಖುಷಿಪಟ್ಟಿದ್ದಾರೆ.

ಶಿವಮೊಗ್ಗ ಈದ್ಗಾ ಮೈದಾನ ಜಾಗಕ್ಕೆ ಬೇಲಿ: ಹಿಂದೂಗಳ ಪ್ರತಿಭಟನೆ, ಡಿಸಿ ಹೇಳಿದ್ದೇನು?

ಶಿವಮೊಗ್ಗ ಈದ್ಗಾ ಮೈದಾನ ಜಾಗಕ್ಕೆ ಬೇಲಿ: ಹಿಂದೂಗಳ ಪ್ರತಿಭಟನೆ, ಡಿಸಿ ಹೇಳಿದ್ದೇನು?

ಶಿವಮೊಗ್ಗದ ಈದ್ಗಾ ಮೈದಾನದ ವಿವಾದಕ್ಕೆ ಕಾರಣವಾಗಿದೆ. ರಂಜಾನ್​ ಹಬ್ಬದ ಬಳಿಕ ಏಕಾಏಕಿ ಈದ್ಗಾ ಮೈದಾನ ಸುತ್ತ ತಂತಿ ಬೇಲಿ ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಹಾಗಿದ್ದರೆ ಈದ್ಗಾ ಮೈದಾನಕ್ಕೆ ತಂತಿ ಬೇಲಿ ಹಾಕಿದ್ದು ಏಕೆ? ಏನಿದು ವಿವಾದ? ಈಗ ಮುನ್ನಲೆಗೆ ಬರಲು ಕಾರಣವೇನು? ಇಲ್ಲಿದೆ ವಿವರ

ರಂಜಾನ್ ಪ್ರಾರ್ಥನೆ ವೇಳೆ ಮೊಳಗಿದ ಪ್ಯಾಲಿಸ್ತಾನಿ ಪರ ಘೋಷಣೆ, ಪ್ಲೇ ಕಾರ್ಡ್ ಪ್ರದರ್ಶನ

ರಂಜಾನ್ ಪ್ರಾರ್ಥನೆ ವೇಳೆ ಮೊಳಗಿದ ಪ್ಯಾಲಿಸ್ತಾನಿ ಪರ ಘೋಷಣೆ, ಪ್ಲೇ ಕಾರ್ಡ್ ಪ್ರದರ್ಶನ

ರಂಜಾನ್ ಹಬ್ಬದ ಸಂದರ್ಭದಲ್ಲಿ ಕರ್ನಾಟಕದ ವಿವಿಧೆಡೆ ಪ್ಯಾಲೆಸ್ತೀನ್​ಗೆ ಬೆಂಬಲ ವ್ಯಕ್ತಪಡಿಸುವ ವ್ಯಕ್ತಪಡಿಸುವ ಘೋಷಣೆ ಮೊಳಗಿದವು. ಅಲ್ಲದೇ ಪ್ಯಾಲೆಸ್ತೀನ್​ ಪರ ಫಲಕಗಳನ್ನು ಪ್ರದರ್ಶಿಸಲಾಯಿತು. ಕೊಪ್ಪಳ ಜಿಲ್ಲೆಗಳಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಲಾಯಿತು. ಹುಬ್ಬಳ್ಳಿಯಲ್ಲಿ ಸಂಘ ಪರಿವಾರದ ವಿರುದ್ಧ ಪೋಸ್ಟರ್ ಪ್ರದರ್ಶಿಸಲಾಗಿದ್ದು, ಎಫ್​ಐಆರ್​ ದಾಖಲಾಗಿದೆ.

ಅಂತಿಮ ಹಂತಕ್ಕೆ ಬಂದ ಸಿಗಂದೂರು ಕೇಬಲ್ ಆಧಾರಿತ ಸೇತುವೆ: ಇಲ್ಲಿವೆ ಫೋಟೋಸ್

ಅಂತಿಮ ಹಂತಕ್ಕೆ ಬಂದ ಸಿಗಂದೂರು ಕೇಬಲ್ ಆಧಾರಿತ ಸೇತುವೆ: ಇಲ್ಲಿವೆ ಫೋಟೋಸ್

ಶರಾವತಿ ಹಿನ್ನೀರಿನ ಸಿಗಂದೂರು ಕೇಬಲ್ ಆಧಾರಿತ ಸೇತುವೆಯ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ದಶಕಗಳ ಕನಸು ನನಸಾಗುತ್ತಿದ್ದು, ಹಿನ್ನೀರಿನ ಜನರಿಗೆ ಸಂಚಾರ ಸೌಲಭ್ಯ ಲಭ್ಯವಾಗಲಿದೆ. ಈ ಸೇತುವೆಯು ಪ್ರವಾಸೋದ್ಯಮಕ್ಕೂ ಪ್ರಮುಖ ಪಾತ್ರ ವಹಿಸಲಿದೆ. ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಯತ್ನದ ಫಲವಾಗಿ ಈ ಯೋಜನೆ ಯಶಸ್ವಿಯಾಗಿದೆ.

ಶಿವಮೊಗ್ಗ: ಹಸು ರಕ್ಷಣೆಗೆ ಬಾವಿಗೆ ಇಳಿದಿದ್ದ ವ್ಯಕ್ತಿ ‌ಉಸಿರುಗಟ್ಟಿ ಸಾವು

ಶಿವಮೊಗ್ಗ: ಹಸು ರಕ್ಷಣೆಗೆ ಬಾವಿಗೆ ಇಳಿದಿದ್ದ ವ್ಯಕ್ತಿ ‌ಉಸಿರುಗಟ್ಟಿ ಸಾವು

ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಬಾವಿಗೆ ಬಿದ್ದ ಹಸುವನ್ನು ರಕ್ಷಿಸಲು ಹೋಗಿ ಕೇರಳ ಮೂಲದ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟಿರುವಂತಹ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸದ್ಯ ಹಸು ಮತ್ತು ವ್ಯಕ್ತಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಧವೆ ಎಂದು ಬಾಳು ಕೊಟ್ಟವನ ಬದುಕಲ್ಲಿ ವಿಧಿಯಾಟ: ಮದ್ವೆಯಾದ 15 ದಿನಕ್ಕೆ ಪತ್ನಿ ಜೂಟ್​

ವಿಧವೆ ಎಂದು ಬಾಳು ಕೊಟ್ಟವನ ಬದುಕಲ್ಲಿ ವಿಧಿಯಾಟ: ಮದ್ವೆಯಾದ 15 ದಿನಕ್ಕೆ ಪತ್ನಿ ಜೂಟ್​

ತಂದೆ ತಾಯಿ ಇಲ್ಲದ ಅನಾಥ ಯುವಕ. ಬಡತನ ನಡುವೆ ಕಷ್ಟಪಟ್ಟು ಆ ಯುವಕ ಸ್ವಾವಲಂಬಿಯಾಗಿ ಬೆಳೆಯುತ್ತಿದ್ದ. ಬ್ರೋಕರ್ ಮೂಲಕ ಚಿಕ್ಕಮಗಳೂರಿನ ವಿಧವೆ ಮಹಿಳೆಯು ಈತನ ಜೊತೆ ಸೆಕೆಂಡ್ ಮದುವೆಯಾಗಿದ್ದಳು. ಆದ್ರೆ, ಮದುವೆಯಾಗಿ ಒಂದೇ ತಿಂಗಳಿಗೆ ಯುವಕನಿಗೆ ಕೈಕೊಟ್ಟು ಹೋಗಿದ್ದಾಳೆ. ಮದುವೆಯಾಗಿ ಎರಡೇ ದಿನಕ್ಕೆ ತವರು ಮನೆ ಸೇರಿದ್ದವಳು 15 ದಿನಕ್ಕೆ ಕೈಕೊಟ್ಟಿದ್ದಾಳೆ. ಈ ದಂಪತಿ ಬಾಳಲ್ಲಿ ಪೊಲೀಸಪ್ಪ ಹುಳಿ ಹಿಂಡಿರುವ ಆರೋಪ ಕೇಳಿಬಂದಿದೆ.

ಬಿರು ಬೇಸಿಗೆಗಯಲ್ಲಿ ಕಾಡು ಪ್ರಾಣಿಗಳು ದಣಿಯದಂತೆ ಮಾಸ್ಟರ್ ಪ್ಲ್ಯಾನ್

ಬಿರು ಬೇಸಿಗೆಗಯಲ್ಲಿ ಕಾಡು ಪ್ರಾಣಿಗಳು ದಣಿಯದಂತೆ ಮಾಸ್ಟರ್ ಪ್ಲ್ಯಾನ್

ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ಸಮಸ್ಯೆ ಪರಿಹರಿಸಲು 10 ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ನಮ್ಮ ಕಾಡು ನಮ್ಮ ಕೆರೆ' ಯೋಜನೆಯಡಿ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೆರೆಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಯಿಂದ ಹುಲಿ, ಸಿಂಹ, ಜಿಂಕೆ ಮುಂತಾದ ಪ್ರಾಣಿಗಳಿಗೆ ಸಾಕಷ್ಟು ನೀರು ಲಭ್ಯವಾಗಲಿದೆ. ಏಪ್ರಿಲ್ ಒಳಗೆ ಕೆರೆಗಳ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ವಿದೇಶಕ್ಕೆ ತೆರಳುವ ಅವಕಾಶ
ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ವಿದೇಶಕ್ಕೆ ತೆರಳುವ ಅವಕಾಶ
ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ