ಶಿವಮೊಗ್ಗ: ಬಾಳೆಬರೆ ಘಾಟ್ನಲ್ಲಿ ಭಾರಿ ವಾಹನಗಳ ಸಂಚಾರ ಬಂದ್, ಪರ್ಯಾಯ ಮಾರ್ಗ ವಿವರ ಇಲ್ಲಿದೆ
ಭಾರಿ ಮಳೆಯ ಕಾರಣ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಾಳೆಬರೆ ಘಾಟ್ನಲ್ಲಿ ಮಣ್ಣು ಕುಸಿತ ಸಂಭವಿಸಿದೆ. ಸುರಕ್ಷತಾ ಕಾರಣಗಳಿಂದ, ಜಿಲ್ಲಾಧಿಕಾರಿಗಳು ಭಾರೀ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ. ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಮಳೆ ಮುಂದುವರಿದರೆ ಮಣ್ಣು ಕುಸಿತದ ಅಪಾಯ ಮುಂದುವರಿಯುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
- Basavaraj Yaraganavi
- Updated on: Aug 7, 2025
- 11:15 am
ತುಂಗಾ ನದಿ ಸೇತುವೆ ಮೇಲೆಯೇ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು: ಮುಂದೇನಾಯ್ತು?
ಶಿವಮೊಗ್ಗದ ತುಂಗಾ ಸೇತುವೆಯ ಮೇಲೆ ರೈಲು ಚಲಿಸುತ್ತಿದ್ದಾಗ ಆರು ಬೋಗಿಗಳು ಬೇರ್ಪಟ್ಟವು. ಉಳಿದ ಬೋಗಿಗಳು ಇಂಜಿನ್ ಜೊತೆ ಮುಂದೆ ಸಾಗಿವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಪ್ರಾಣಹಾನಿ ಸಂಭವಿಸದೆ ದೊಡ್ಡ ಅಪಾಯ ತಪ್ಪಿದೆ. ಮಾಹಿತಿ ತಿಳಿದು ರೈಲ್ವೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
- Basavaraj Yaraganavi
- Updated on: Aug 6, 2025
- 6:46 pm
ಶಿವಮೊಗ್ಗ: ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿ ಆತ್ಯಹತ್ಯೆ
ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಬಸವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಬಸವರಾಜ್, ಶರಾವತಿ ವಾರ್ಡ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ರಾಯಚೂರಿನಲ್ಲಿ ಕಾರು ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾಳೆ.
- Basavaraj Yaraganavi
- Updated on: Aug 3, 2025
- 3:01 pm
ಶಿವಮೊಗ್ಗ: ಶಾಲೆಯ ನೀರಿನ ಟ್ಯಾಂಕ್ಗೆ ವಿಷ ಬೆರೆಸಿದ ಕೇಸ್ ತನಿಖೆಗೆ 3 ತಂಡ ರಚನೆ
ಶಿವಮೊಗ್ಗದ ಹೂವಿನಕೋಣೆ ಸರಕಾರಿ ಶಾಲೆಯ ನೀರಿನ ಟ್ಯಾಂಕ್ಗೆ ಕೀಟನಾಶಕ ಬೆರೆಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. 18 ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಮೂರು ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ಪರಿಶೀಲನೆ, ಸ್ಥಳೀಯರ ವಿಚಾರಣೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
- Basavaraj Yaraganavi
- Updated on: Aug 2, 2025
- 7:49 pm
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್ ವಿಷ ಬೆರೆಸಿದ ಕಿಡಿಗೇಡಿಗಳು: ತಪ್ಪಿದ ಭಾರಿ ಅನಾಹುತ
ಸರ್ಕಾರಿ ಶಾಲೆಯ ನೀರಿನ ಸಿಂಟೆಕ್ಸ್ ಟ್ಯಾಂಕ್ ಗೆ ಕಳೆನಾಶಕ ಬೆರೆಸಿರು ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೂವಿನಕೋಣೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಶಾಲಾ ಮಕ್ಕಳ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. 32 ಮಕ್ಕಳು ಇರುವ ಹೂವಿನಕೋಣೆಯ ಸರ್ಕಾರಿ ಶಾಲೆಯಲ್ಲಿ ಕುಡಿಯಲು ಬಳಸುತ್ತಿದ್ದ ಎರಡೂ ನೀರಿನ ಸಿಂಟೆಕ್ಸ್ ನಲ್ಲಿ ಕಳೆನಾಶಕ ಬೆರೆಸಲಾಗಿದ್ದು, ಕೈತೊಳೆಯಲು ನೀರು ಬಳಸುತ್ತಿದ್ದಂತೆ ಮಕ್ಕಳಿಗೆ ಅನುಮಾನ ಬಂದಿದೆ.
- Basavaraj Yaraganavi
- Updated on: Jul 31, 2025
- 5:33 pm
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಶಿವಮೊಗ್ಗದಲ್ಲಿ ಇತ್ತೀಚೆಗೆ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ರಾಗಿಗುಡ್ಡದಲ್ಲಿ ಬಟ್ಟೆ ಕಳ್ಳತನ, ಕೋಟೆ ಗಂಗೂರು ದೇವಸ್ಥಾನದಲ್ಲಿ ಹುಂಡಿ ಒಡೆದು ನಗದು ದೋಚುವಿಕೆ ಮತ್ತು ವಡ್ಠಿನಕೊಪ್ಪದಲ್ಲಿ ಸಶಸ್ತ್ರ ಗ್ಯಾಂಗ್ ಓಡಾಡಿದ ಘಟನೆಗಳು ನಡೆದಿವೆ. ಈ ಎಲ್ಲಾ ಘಟನೆಗಳ ಸಿಸಿಟಿವಿ ದೃಶ್ಯಾವಳಿಗಳು ದೊರೆತಿವೆ ಮತ್ತು ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಘಟನೆಗಳು ನಗರದಲ್ಲಿ ಭಯ ಮತ್ತು ಆತಂಕವನ್ನು ಹುಟ್ಟುಹಾಕಿವೆ.
- Basavaraj Yaraganavi
- Updated on: Jul 27, 2025
- 5:50 pm
ಅಡಿಕೆ ಹಾಳೆ ತಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ, ಆಮದು ನಿಷೇಧಿಸಿದ ಅಮೆರಿಕ: ಶಿವಮೊಗ್ಗದ ಸಾವಿರಾರು ಸಣ್ಣ ಉದ್ಯಮಿಗಳಿಗೆ ಸಂಕಷ್ಟ
ಅಡಿಕೆ ಎಂದರೆ ಅದು ಎಲ್ಲದಕ್ಕೂ ಬಳಕೆ ಆಗುವ ವಸ್ತು. ಪೂಜೆಯಿಂದ ಹಿಡಿದು ತಿನ್ನುವುದಕ್ಕೂ ಅಡಿಕೆ ಬಳಕೆ ಆಗುತ್ತದೆ. ಅಡಿಕೆ ಮರದ ಹಾಳೆಗಳಿಂದ ಅಡಿಕೆ ತಟ್ಟೆ ಸಿದ್ದಪಡಿಸಲಾಗುತ್ತದೆ. ಮಲೆನಾಡಿನಲ್ಲಿ ಅಡಿಕೆ ತಟ್ಟೆಯ ದೊಡ್ಡ ಉದ್ಯಮ ಬೆಳೆದು ನಿಂತಿದೆ. ಆದರೆ, ಅಡಿಕೆ ತಟ್ಟೆಗಳ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎನ್ನುವ ಅಮೆರಿಕ ವರದಿಯು ಸಂಚಲನ ಮೂಡಿಸಿದ್ದು, ಅಡಿಕೆ ತಟ್ಟೆ ಉದ್ಯಮಗಳ ಮೇಲೆ ಕಾರ್ಮೋಡ ಆವರಿಸಿದೆ.
- Basavaraj Yaraganavi
- Updated on: Jul 25, 2025
- 10:52 am
ಸಿಗಂದೂರು ದೇವಿ ಬಗ್ಗೆ ಮಧು ಬಂಗಾರಪ್ಪ ಹೇಳಿಕೆ ವಿಡಿಯೋ ವೈರಲ್: ಬಿಜೆಪಿ ವಿರುದ್ಧ ಸಿಡಿದೆದ್ದ ಭಕ್ತ ಮಂಡಳಿ
ಸಿಗಂದೂರು ಸೇತುವೆ ಉದ್ಘಾಟನೆ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರುಗಳ ನಡುವೆ ಆರೋಪ-ಪ್ರತ್ಯಾರೋಗಳ ನಡುವೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರದ್ದು ಎನ್ನಲಾದ ಹೇಳಿಕೆಯೊಂದು ಭಾರೀ ವಿವಾದಕ್ಕೀಡಾಗಿದೆ. ಹೌದು.. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಡಿಯೋ ವೈರಲ್ ಆಗಿದೆ. ಸಿಗಂದೂರು ದೇವಸ್ಥಾನ ಒಂದು ತಿಂಗಳಲ್ಲಿ ಹೇಗೆ ಹಾಳು ಮಾಡುತ್ತೇನೆ ಎನ್ನುವ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಶಿವಮೊಗ್ಗ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ ವೈರಲ್ ಮಾಡಿದೆ.
- Basavaraj Yaraganavi
- Updated on: Jul 23, 2025
- 4:23 pm
ಶಿವಮೊಗ್ಗದಲ್ಲಿ ಆತಂಕ ಸೃಷ್ಟಿಸಿದ ದರೋಡೆಕೋರರ ಗ್ಯಾಂಗ್: ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ಓಡಾಟ
ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿ ಆರು ಜನರ ದರೋಡೆಕೋರರ ಗ್ಯಾಂಗ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಖ ಮುಚ್ಚಿಕೊಂಡು ಶಸ್ತ್ರಾಸ್ತ್ರಗಳೊಂದಿಗೆ ಓಡಾಡುತ್ತಿದ್ದ ದರೋಡೆಕೋರರ ಚಲನವಲನ ಬಡಾವಣೆ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹೆಚ್ಚುವರಿ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Basavaraj Yaraganavi
- Updated on: Jul 20, 2025
- 8:00 pm
ಶಿವಮೊಗ್ಗ ಏರ್ ಪೋರ್ಟ್ಗೆ 2 ವರ್ಷ, ವಿಮಾನ ನಿಲ್ದಾಣದಲ್ಲಿ ವಿಮಾನಗಳಿಗೆ ರಾತ್ರಿ ಸಮಸ್ಯೆ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿ ಎರಡು ವರ್ಷವಾಗಿದೆ. ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿರುವ ಕರ್ನಾಟಕದ ಏಕೈಕ ವಿಮಾನ ನಿಲ್ದಾಣ ಇದಾಗಿದೆ. ಆದ್ರೆ, ಏರ್ಪೋರ್ಟ್ ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ಇಲ್ಲಿ ವಿಮಾನಗಳ ನೈಟ್ ಲ್ಯಾಡಿಂಗ್ ವ್ಯವಸ್ಥೆ ಇಲ್ಲ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
- Basavaraj Yaraganavi
- Updated on: Jul 20, 2025
- 3:51 pm
ಸಿಗಂದೂರು ಪೂರ್ಣ: ಹಸಿರುಮಕ್ಕಿ ಸೇತುವೆ ಲೋಕಾರ್ಪಣೆ ಯಾವಾಗ? ಶುರುವಾಯ್ತು ಚರ್ಚೆ!
ಶರಾವತಿ ಹಿನ್ನೀರಿನ ಭಾಗದ ಜನರ ಕಷ್ಟ ಕೇಳತೀರದು. ಸಿಗಂದೂರು ಸೇತುವೆ ಈಗಾಗಲೇ ಲೋಕಾರ್ಪಣೆಯಾಗಿದೆ. ಈ ನಡುವೆ ಶರಾವತಿ ಹಿನ್ನೀರಿನಲ್ಲೇ ಇರುವ ಮತ್ತೊಂದು ಮಹತ್ವದ ಸೇತುವೆ ಕಾಮಗಾರಿ ನಡೆಯುತ್ತಿದೆ. ದಶಕಗಳಿಂದ ಈ ಸೇತುವೆಗಾಗಿ ದ್ವೀಪದ ಕುಗ್ರಾಮದ ಗ್ರಾಮಸ್ಥರು ಕಾಯುತ್ತಿದ್ದಾರೆ. ಸದ್ಯ ಹಸಿರುಮಕ್ಕಿ ಸೇತುವೆ ಕಾಮಗಾರಿ ಪೂರ್ಣಗೊಳ್ಳುವುದು ಎಂಬ ಚರ್ಚೆ ಶುರುವಾಗಿದೆ.
- Basavaraj Yaraganavi
- Updated on: Jul 18, 2025
- 6:01 pm
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ನೂತನ ಸಿಗಂದೂರು ಸೇತುವೆ ನಿನ್ನೆ ಲೋಕಾರ್ಪಣೆ ಆಗಿದೆ. ಇಂದಿನಿಂದ ಸೇತುವೆ ಮೇಲೆ ವಾಹನಗಳ ಸಂಚಾರ ಶುರುವಾಗಿದ್ದು, ವಾಹನ ಸವಾರರಿಗೆ ಎಲ್ಲಿಲ್ಲದ ಖುಷಿ ಸಂತೋಷ. ದೇವಿಯ ದರ್ಶನ ಪಡೆಯಲು ಭಕ್ತರು ಹೊರ ಜಿಲ್ಲೆಗಳಿಂದ ಎಂಟ್ರಿಕೊಟ್ಟಿದ್ದರು. ಮತ್ತೊಂದೆಡೆ ಇಂದಿನಿಂದ ಲಾಂಚ್ ಮತ್ತು ಜೀಪ್ ಗಳ ಸಂಚಾರ ಸ್ತಬ್ಧವಾಗಿದೆ.ಒಂದಡೆ ಖುಷಿ ಮತ್ತೊಂದೆಡೆ ಚಿಂತೆ.
- Basavaraj Yaraganavi
- Updated on: Jul 16, 2025
- 7:20 pm