ಮನೆ ಲಾಕ್ ಮಾಡಿಕೊಂಡು ಊರಿಗೆ ಹೋಗುತ್ತಿದ್ದೀರಾ? ಕಳ್ಳತನ ತಪ್ಪಿಸಲು ಈ ಕ್ರಮಗಳನ್ನು ಪಾಲಿಸಿ
ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಪ್ರಕರಣಗಳು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಲಾಕ್ ಮಾಡಿದ ಮನೆಗಳನ್ನೇ ಟಾರ್ಗೆಟ್ ಮಾಡಿ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ಕಳ್ಳತನ ಪ್ರಕರಣಗಳನ್ನು ತಡೆಯಲು ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಹಾಗಾದ್ರೆ, ಮನೆಗಳ್ಳತನವನ್ನು ತಡೆಯಲು ಶಿವಮೊಗ್ಗ ಪೊಲೀಸರು ಜಾರಿಗೆ ತಂದಿರುವ ಹೊಸ ಯೋಜನೆ ಯಾವುದು? ನೀವು ಏನು ಮಾಡಬೇಕು ಎನ್ನುವ ವಿವರ ಇಲ್ಲಿದೆ.
- Basavaraj Yaraganavi
- Updated on: May 1, 2026
- 6:31 pm
ಕುವೆಂಪು ವಿವಿಯಲ್ಲಿ ತಾರಕ್ಕೇರಿದ್ದ ವಿದ್ಯಾರ್ಥಿಗಳ ಪ್ರತಿಭಟನೆ: ಕುಲಪತಿ, ಕುಲಸಚಿವರನ್ನ ವಜಾಗೊಳಿಸುವಂತೆ ಪಟ್ಟು
ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ವಿರೋಧಿ ನೀತಿ, ಶುಲ್ಕ ಹೆಚ್ಚಳ, ಮತ್ತು ಫಲಿತಾಂಶದ ಗೊಂದಲಗಳನ್ನು ಖಂಡಿಸಿ ಎನ್ಎಸ್ ಯುಐ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ವಿದ್ಯಾರ್ಥಿಗಳು ಕುಲಪತಿ, ಕುಲಸಚಿವ ಮತ್ತು ಮೌಲ್ಯಮಾಪನ ರಿಜಿಸ್ಟ್ರಾರ್ ರಾಜೀನಾಮೆಗೆ ಆಗ್ರಹಿಸಿ, ತಮ್ಮ ಬೇಡಿಕೆಗಳು ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ಹಲವು ವರ್ಷಗಳಿಂದಲೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸದ ವಿವಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
- Basavaraj Yaraganavi
- Updated on: Apr 29, 2026
- 4:21 pm
ರಣಾಂಗಣವಾದ ಕುವೆಂಪು ವಿಶ್ವವಿದ್ಯಾಲಯದ ಆವರಣ: ಕುಲಪತಿ ಕಚೇರಿಯ ಕುರ್ಚಿ, ಪಾಟ್ಗಳು ಧ್ವಂಸ
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ವೇತನ ವಿಳಂಬ, ಹಾಸ್ಟೆಲ್ ವ್ಯವಸ್ಥೆ ಕೊರತೆ ಹಾಗೂ ಪರೀಕ್ಷಾ ಫಲಿತಾಂಶ ವಿಳಂಬದ ವಿರುದ್ಧ NSUI ನೇತೃತ್ವದಲ್ಲಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಕುಲಪತಿ ಕಚೇರಿ ಆವರಣದಲ್ಲಿ ಕುರ್ಚಿ, ಪಾಟ್ಗಳನ್ನು ಒಡೆದು, ಫಲಕಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಘಟನೆಯನ್ನು ಉಪಕುಲಪತಿಗಳು ತೀವ್ರವಾಗಿ ಖಂಡಿಸಿದ್ದು, ಈ ಬಗ್ಗೆ ದೂರು ನೀಡೋದಾಗಿ ತಿಳಿಸಿದ್ದಾರೆ.
- Basavaraj Yaraganavi
- Updated on: Apr 29, 2026
- 2:26 pm
ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ: ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್!
ಸೊರಬದ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿ ಪತ್ನಿ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪತಿಯ ಅನೈತಿಕ ಸಂಬಂಧ ಹಾಗೂ ಆತ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಮೃತಳ ತಾಯಿ ಆರೋಪಿಸಿದ್ದಾರೆ. ಈ ಸಂಬಂಧ ಮಂಜುಳಾ ತಾಯಿ ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸರು ಆರೋಪಿ ಪ್ರಭು ಮೇಸ್ತ್ರಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
- Basavaraj Yaraganavi
- Updated on: Apr 29, 2026
- 7:59 am
ಅಕಾಲಿಕ ಮಳೆಗೆ ಬೆದರಿದ ಭದ್ರಾವತಿ: ವರುಣನ ಅಬ್ಬರಕ್ಕೆ ರೈತರ ಬದುಕು ಮೂರಾಬಟ್ಟೆ
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸುರಿದ ಅಕಾಲಿಕ ಗಾಳಿ ಮಳೆಯಿಂದ ವ್ಯಾಪಕ ಹಾನಿಯಾಗಿದೆ. ಅಡಿಕೆ ತೋಟಗಳು ನಾಶವಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ರಸ್ತೆಗಳಲ್ಲಿ ಮರಗಳು ಉರುಳಿ, ವಿದ್ಯುತ್ ಕಂಬಗಳು ಮುರಿದು, ಹಲವು ಮನೆಗಳು ಹಾನಿಗೊಳಗಾಗಿವೆ. ಸಂತ್ರಸ್ತರಿಗೆ ಸರ್ಕಾರ ತಕ್ಷಣ ನೆರವು ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ, ಜನಪ್ರತಿನಿಧಿಗಳು ಪರಿಹಾರದ ಭರವಸೆ ನೀಡಿದ್ದಾರೆ.
- Basavaraj Yaraganavi
- Updated on: Apr 27, 2026
- 6:17 pm
ಶಿವಮೊಗ್ಗ: ಲವ್ ವಿಚಾರಕ್ಕೆ ಯುವಕನ ಮೇಲೆ ಡೆಡ್ಲಿ ಅಟ್ಯಾಕ್; ತಲೆಯಲ್ಲೇ ಮಚ್ಚು ಬಿಟ್ಟು ಪರಾರಿ
ಮಲೆನಾಡಿನಲ್ಲಿ ಮತ್ತೆ ನೆತ್ತರು ಹರಿದಿದೆ. ಲವ್ ವಿಚಾರಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವಂತಹ ಘಟನೆ ಶಿವಮೊಗ್ಗದ ವಾದಿ ಎ ಹುದಾ ಬಡಾವಣೆಯಲ್ಲಿ ನಡೆದಿದೆ. ಮಚ್ಚಿನ ದಾಳಿಯಲ್ಲಿ ಗಾಯಗೊಂಡಿರುವ ಯುವಕ ಸ್ಥಿತಿ ಗಂಭೀರವಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
- Basavaraj Yaraganavi
- Updated on: Apr 25, 2026
- 6:37 pm
ಬೇಸಿಗೆ ರಜೆಯಲ್ಲಿ ಮಕ್ಕಳ ಮೇಲೆ ನಿಗಾ ಇರಲಿ! ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು ಬಾಲಕಿ ಸಾವು
ಶಿವಮೊಗ್ಗದ ಲಕ್ಕಿನಕೊಪ್ಪದಲ್ಲಿ 9 ವರ್ಷದ ಬಾಲಕಿಯೊಬ್ಬಳು ಜೋಕಾಲಿ ಆಡುವಾಗ ಕುತ್ತಿಗೆಗೆ ಕುಣಿಕೆ ಬಿಗಿದು ಸಾವನ್ನಪ್ಪಿದ್ದಾಳೆ. ಬೇಸಿಗೆ ರಜೆಗಾಗಿ ಚಿಕ್ಕಮ್ಮನ ಮನೆಗೆ ತೆರಳಿದ್ದ ಬಾಲಕಿ ಪಂಚೆ ಬಳಸಿ ಜೋಕಾಲಿ ಮಾಡಿಕೊಂಡಿದ್ದಳು. ಈ ವೇಳೆ ಕೋಣೆಯ ಬಾಗಿಲು ಹಾಕಿಕೊಂಡು ಜೋಕಾಲಿ ಆಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ದುರ್ಘಟನೆ ಕುಟುಂಬದಲ್ಲಿ ಶೋಕ ಮೂಡಿಸಿದ್ದು, ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Basavaraj Yaraganavi
- Updated on: Apr 24, 2026
- 12:02 pm
ತಂದೆ ಸಾವಿನ ನಡುವೆಯೂ SSLC ಪರೀಕ್ಷೆ ಬರೆದು ಉತ್ತೀರ್ಣನಾದ ಶಿವಮೊಗ್ಗದ ವಿದ್ಯಾರ್ಥಿ
ತಂದೆಯ ನಿಧನದ ದುಃಖದಲ್ಲಿದ್ದ ಶಿವಮೊಗ್ಗದ SSLC ವಿದ್ಯಾರ್ಥಿ ಪ್ರೀತಮ್, ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದರು. ಆದರೆ, ಬಿಇಒ ಬಿ. ರಮೇಶ್ ಅವರ ಮನವೊಲಿಕೆ ಮತ್ತು ಬೆಂಬಲದಿಂದ ಪ್ರೀತಮ್ ಗಣಿತ ಸೇರಿದಂತೆ ಉಳಿದ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿದ್ದಾರೆ. ಬಿಇಓ ಅವರು ವಿದ್ಯಾರ್ಥಿಯ ಮುಂದಿನ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
- Basavaraj Yaraganavi
- Updated on: Apr 23, 2026
- 6:48 pm
ಪಹಲ್ಗಾಮ್ ಕರಾಳ ದಿನಕ್ಕೆ ವರ್ಷ: ಶಿವಮೊಗ್ಗದ ಮಂಜುನಾಥ್ ಮನೆಯಲ್ಲಿ ಇನ್ನೂ ಮಡುಗಟ್ಟಿದ ನೋವು
ಶಿವಮೊಗ್ಗದ ಮಂಜುನಾಥ್ ಸೇರಿ 26 ಜನರ ನರಮೇಧವಾದ ಪಹಲ್ಗಾಮ್ ಉಗ್ರ ದಾಳಿಗೆ ಒಂದು ವರ್ಷ. ಮಂಜುನಾಥ್ ತಾಯಿಯ ದುಃಖ ಇಂದಿಗೂ ಮಾಸಿಲ್ಲ. ಪತ್ನಿ, ನೋವು ಮರೆತು ಬದುಕಲು ಪ್ರಯತ್ನಿಸುತ್ತಿದ್ದಾರೆ. ಮಗ ದೇಶ ಸೇವೆಗೆ ಸಂಕಲ್ಪ ತೊಟ್ಟಿದ್ದಾನೆ. ಕುಟುಂಬಕ್ಕೆ ರಾಜ್ಯ-ಕೇಂದ್ರ ಸರ್ಕಾರದಿಂದ ಪರಿಹಾರ ಸಿಕ್ಕಿದೆ.
- Basavaraj Yaraganavi
- Updated on: Apr 22, 2026
- 7:54 pm
110 ಕೆಜಿ ತೂಕವಿದ್ದರೂ ನೀರಿನಲ್ಲಿ ಮುಳುಗಲ್ಲ ಈ ವ್ಯಕ್ತಿ! ಬಲರಾಮ್ ಅವರ ‘ತೇಲುವ ವಿದ್ಯೆ’ ಕಂಡು ಮಲೆನಾಡಿಗರು ಫಿದಾ
ಶಿವಮೊಗ್ಗದ 110 ಕೆಜಿ ತೂಕದ ಬಲರಾಮ್, ನೀರಿನಲ್ಲಿ 30 ನಿಮಿಷಗಳ ಕಾಲ ಸುಲಭವಾಗಿ ತೇಲುವ ಅದ್ಭುತ ಸಾಮರ್ಥ್ಯ ಹೊಂದಿದ್ದಾರೆ. ಈಜು ಗುರು ಬಾಬು ಅವರ ತರಬೇತಿಯಿಂದ ಉಸಿರಾಟ ನಿಯಂತ್ರಿಸಿ, ದೇಹವನ್ನು ಹಗುರವಾಗಿಸುವ ತಂತ್ರ ಕಲಿತಿದ್ದಾರೆ. ದಢೂತಿ ದೇಹವಿರುವವರು ಸಹ ಆತ್ಮವಿಶ್ವಾಸದಿಂದ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಬಲರಾಮ್ ಪ್ರೇರಣೆ. ಈ ಕಲೆ ತುರ್ತು ಪರಿಸ್ಥಿತಿಗಳಲ್ಲಿ ಜೀವ ಉಳಿಸಲೂ ಸಹಕಾರಿ.
- Basavaraj Yaraganavi
- Updated on: Apr 21, 2026
- 9:51 pm
SSLC ವಿದ್ಯಾರ್ಥಿ ಸಂಕೇತ್ ಸಮಾಧಿ ಕೆಡವಿದ್ದ ಆರೋಪಿ ಅರೆಸ್ಟ್: ಸ್ನೇಹಿತರು ಜೈಲಿಗೆಹೋದರೆಂಬ ಸಿಟ್ಟಲ್ಲಿ ಅಪ್ರಾಪ್ತನಿಂದ ಕೃತ್ಯ
ಶಿವಮೊಗ್ಗದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಂಕೇತ್ ಸಮಾಧಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಆರೋಪಿಯನ್ನು ಬಂಧಿಸಲಾಗಿದೆ. ಸಂಕೇತ್ ಕೊಲೆ ಪ್ರಕರಣದಲ್ಲಿ ತಮ್ಮ ಸ್ನೇಹಿತರು ಜೈಲು ಪಾಲಾಗಿದ್ದಾರೆ ಎಂಬ ಸಿಟ್ಟಿಗೆ ಅಪ್ರಾಪ್ತ ಈ ಕೃತ್ಯ ಎಸಗಿರುವುದು ಬಯಲಾಗಿದೆ. ತುಂಗಾನಗರ ಪೊಲೀಸರು ತನಿಖೆ ನಡೆಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಯನ್ನು ಹಿಡಿದಿದ್ದಾರೆ.
- Basavaraj Yaraganavi
- Updated on: Apr 16, 2026
- 4:07 pm
ಶಿವಮೊಗ್ಗದಲ್ಲಿ ವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ ನೀರಾನೆ ಹಂಸಿನಿಯೂ ಸಾವು
ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿ ಮಾರ್ಚ್ 19 ರಂದು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೇಲೆ ನೀರಾನೆ ಹಂಸಿನಿ ದಾಳಿ ನಡೆಸಿ ಅವರ ಸಾವಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೇ ನೀರಾನೆ ಹಂಸಿನಿ ಗರ್ಭದಲ್ಲೇ ಮರಿ ಸಾವನ್ನಪ್ಪಿತ್ತು. ಇದಾದ ಬಳಿಕ ಇದೀಗ ತಾಯಿ ಹಂಸಿನಿ ಸಹ ಮೃತಪಟ್ಟಿದೆ. ಇನ್ನು ಹಂಸಿನಿಯ ಜೀವನವೇ ಒಂದು ನೋವಿನ ಕಥೆಯಾಗಿದೆ.
- Basavaraj Yaraganavi
- Updated on: Apr 14, 2026
- 7:58 pm