
ಹಲ್ಲೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಆ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಅದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ. ತನಗೆ ಆನಂದ್ ಸಿಂಗ್ ಬಗ್ಗೆ ಯಾವುದೇ ರೀತಿಯ ಮುನಿಸು ಇಲ್ಲ ಎಂದು ಮಾತ್ರ ಸ್ಪಷ್ಟನೆ ನೀಡಿದ್ಧಾರೆ.
ಆಸ್ಪತ್ರೆ ಮತ್ತು ಜೈಲಿನಿಂದ ಮುಕ್ತಿ ಪಡೆದಿರುವ ಜೆ.ಎನ್. ಗಣೇಶ್, ಈಗ ನೇರವಾಗಿ ಹೊಸಪೇಟೆಯಲ್ಲಿರುವ ತಮ್ಮ ಮನೆ ದೇವರು ಹುಲಿಯಮ್ಮಳ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲಿದ್ದಾರೆ. ಆ ನಂತರ ಅವರು ತಮ್ಮಿಷ್ಟದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಮುಂದುವರಿಸುವ ಸಾಧ್ಯತೆ ಇದೆ.
Published On - 10:27 am, Sat, 23 March 19